ಜಿಲ್ಲಾ ಪಂಚಾಯಿತಿ ಚುನಾವಣೆ, ಕಾಂಗ್ರೆಸ್ನಿಂದ 5 ಸಮಾವೇಶ
ಬೆಂಗಳೂರು, ಜನವರಿ 28 : ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಪ್ರಚಾರ ನಡೆಸಲು ಕರ್ನಾಟಕ ಕಾಂಗ್ರೆಸ್ 5 ಬೃಹತ್ ಸಮಾವೇಶಗಳನ್ನು ಆಯೋಜಿಸಲು ನಿರ್ಧರಿಸಿದೆ. ಫೆಬ್ರವರಿ 6ರಂದು ಮೊದಲ ಸಮಾವೇಶ ಮೈಸೂರಿನಲ್ಲಿ ನಡೆಯಲಿದೆ.
ಬುಧವಾರ
ಮುಖ್ಯಮಂತ್ರಿ
ಸಿದ್ದರಾಮಯ್ಯ
ಮತ್ತು
ಕೆಪಿಸಿಸಿ
ಅಧ್ಯಕ್ಷ
ಡಾ.ಜಿ.ಪರಮೇಶ್ವರ
ಅವರು
ಸಭೆ
ನಡೆಸಿ
ಈ
ಕುರಿತು
ನಿರ್ಧಾರ
ಕೈಗೊಂಡಿದ್ದಾರೆ.
ಪ್ರತಿ
ಸಮಾವೇಶಕ್ಕೂ
ಸುಮಾರು
1
ಲಕ್ಷ
ಜನರನ್ನು
ಸೇರಿಸುವ
ಗುರಿಯನ್ನು
ಕಾಂಗ್ರೆಸ್
ಹೊಂದಿದೆ.
[ತಾಲೂಕು
ಮತ್ತು
ಜಿಲ್ಲಾ
ಪಂಚಾಯಿತಿ
ಚುನಾವಣೆಯ
ವೇಳಾಪಟ್ಟಿ]
ರಾಜ್ಯದ 5 ಕಡೆ ಬೃಹತ್ ಸಮಾವೇಶ ನಡೆಸುವ ಮೂಲಕ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯ ಪ್ರಚಾರವನ್ನು ಕಾಂಗ್ರೆಸ್ ಆರಂಭಿಸಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಿಂದ ಪ್ರಚಾರ ಕಾರ್ಯ ಆರಂಭವಾಗಲಿದ್ದು, ಫೆ.6 ರಂದು ಮೊದಲ ಸಮಾವೇಶ ನಡೆಯಲಿದೆ. [ಚಾಮರಾಜನಗರ : ಕೆರೆ ತುಂಬಿಸದಿದ್ದರೆ ಓಟು ಕೊಡಲ್ಲ!]
ಮೈಸೂರಿನಲ್ಲಿ ನಡೆಯುವ ಸಮಾವೇಶಕ್ಕೆ ಸುತ್ತಮುತ್ತಲಿನ ಜಿಲ್ಲೆಗಳಿಂದ ಕಾರ್ಯಕರ್ತರನ್ನು ಕರೆತರುವ ಜವಾಬ್ದಾರಿಯನ್ನು ಆ ಭಾಗದ ಸಚಿವರಿಗೆ ವಹಿಸಲಾಗಿದೆ. ಮೈಸೂರಿನ ಸಮಾವೇಶದ ನಂತರ ಕಲಬುರಗಿ, ಬಾಗಲಕೋಟೆ, ಧಾರವಾಡ ಮತ್ತು ತುಮಕೂರು ಜಿಲ್ಲೆಗಳಲ್ಲಿ ಸಮಾವೇಶಗಳನ್ನು ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ.
ವೇಳಾಪಟ್ಟಿ ಪ್ರಕಟಗೊಂಡಿದೆ : ರಾಜ್ಯ ಚುನಾವಣಾ ಆಯೋಗ ತಾಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಫೆಬ್ರವರಿ 13 ಮತ್ತು 20ರಂದು ಒಟ್ಟು ಎರಡು ಹಂತದಲ್ಲಿ ಚುನಾವಣೆಗಳು ನಡೆಯಲಿವೆ. ಫೆಬ್ರವರಿ 23ರಂದು ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ.