Get Updates
Get notified of breaking news, exclusive insights, and must-see stories!

ಕಾಂಗ್ರೆಸ್‌ನಿಂದ ಕರ್ನಾಟಕ ಅಶಾಂತಿಯ ಬೀಡು: ವಿಡಿಯೋ ಪೋಸ್ಟ್ ಮಾಡಿ ಬಿಜೆಪಿ ಕಿಡಿ

ಬೆಂಗಳೂರು, ಅಕ್ಟೋಬರ್ 04: ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ರಾಜ್ಯಾದ್ಯಂತ ಮತಾಂಧ ಸ್ಲೀಪರ್ ಸೆಲ್‌ಗಳು ಜಾಗೃತಗೊಂಡಿವೆ. ಈ ಕುರಿತು ವಾಗ್ದಾಳಿ ನಡೆಸಿರುವ ರಾಜ್ಯ ಬಿಜೆಪಿಯು ಶಿವಮೊಗ್ಗ ಸೇರಿದಂತೆ ವಿವಿಧ ಘಟನೆಗಳ ಮತ್ತು ಕಾಂಗ್ರೆಸ್ ನಾಯಕ ಹೇಳಿಕೆಗಳ ವಿಡಿಯೋ ಪೋಸ್ಟ್ ಮಾಡಿ ಸಮರ ಸಾರಿದೆ.

ಬುಧವಾರ ವಿಡಿಯೋ ಟ್ವೀಟ್ ಮಾಡಿರುವ ಬಿಜೆಪಿಯು, ಆಳುವ ಸರ್ಕಾರ ತನ್ನ ಮತಬ್ಯಾಂಕ್‌ಗಾಗಿ ಮಾಡುತ್ತಿರುವ ಷಡ್ಯಂತ್ರಕ್ಕೆ ಶಿವಮೊಗ್ಗ ಮಾತ್ರವೇ ಬಲಿಯಾಗಿಲ್ಲ. ಬದಲಾಗಿ ರಾಜ್ಯದ ಉಳಿದೆಡೆ ಕಾಂಗ್ರೆಸ್‌ ಮತಾಂಧ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದೆ. ಅಂತಹ ರಾಜಕಾರಣದಿಂದಾಗುವ ಅಪಾಯಗಳ ಸಂಭವಿಸಲಿವೆ. 'ಕಾಂಗ್ರೆಸ್‌ನಿಂದ ಕರ್ನಾಟಕ ಅಶಾಂತಿಯ ಬೀಡಾಗಿದೆ' ಎಂದು ಬಿಜೆಪಿ ದೂರಿದೆ.

Congress Government Is Creating Unrest in Karnataka: BJP Has Attacked By Posting A Video

ಬಿಜೆಪಿಯ ವಿಡಿಯೋದಲ್ಲಿ 'ಇತ್ತೀಚಿನ ಶಿವಮೊಗ್ಗದ ಗಲಾಟೆ ಉದ್ವಿಗ್ನ ಪರಿಸ್ಥಿತಿ, ಮಂಗಳೂರು ಕುಕ್ಕರ್ ಬಾಂಬ್ ಸ್ಟೋಟ, ಉಗ್ರರ ಬಂಧನ, ಮುಸಲ್ಮಾನ ವರ್ತನೆ, ತಲ್ವಾರ್ ಪ್ರದರ್ಶನ ಸೇರಿದಂತೆ ಅಹಿತಕರ ಘಟನೆಗಳನ್ನು ಉಲ್ಲೇಖಿಸಲಾಗಿದೆ.

ಪಶ್ಚಿಮ ಘಟ್ಟಗಳಲ್ಲಿ ಬಾಂಬ್ ಸ್ಟೋಟಕ್ಕೆ ಯತ್ನ?

ಈದ್ ಮಿಲಾದ್ ಆಚರಣೆ ವೇಳೆ ಕೋಲಾರ ಮತ್ತು ಶಿವಮೊಗ್ಗದಲ್ಲಿ ತಲ್ವಾರ್ ಪ್ರದರ್ಶಿಸಲಾಗಿದೆ. ಶಿವಮೊಗ್ಗದಲ್ಲಿ ಕಲ್ಲೆ ತೂರಾಟ ನಡೆದಿದೆ. PFI ಅನ್ನು ರಾಷ್ಟ್ರೀಯ ತನಿಖಾ ದಳ ನಿಷೇಧಿಸಿದ ಬಳಿಕ ರಾಷ್ಟ್ರವಿರೋಧಿ, ವಿಧ್ವಂಸಕ ಚಟುವಟಿಕೆಗಳಿಗೆ ಬ್ರೇಕ್ ಬಿದ್ದಿತ್ತು. ಇದೀಗ ಇಸ್ಲಾಮಿಕ್ ಸ್ಟೇಟ್ ಉಗ್ರರು ಪಶ್ಚಿಮ ಘಟ್ಟಗಳಲ್ಲಿ ಬಾಂಬ್ ಸ್ಟೋಟ ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ.

ಈ ಹಿಂದೆ ಮಂಗಳೂರಿನಲ್ಲಿ ಹಾಡು ಹಗರಲೇ ಕುಕ್ಕರ್ ಬಾಂಬ್ ಸ್ಟೋಟಿಸಿದ್ದ ವ್ಯಕ್ತಿ ಪರ ಇದೇ ಡಿಸಿಎಂ ಡಿಕೆ ಶಿವಕುಮಾರ್ ಅವರು ಉತ್ತೇಜನಾತ್ಮಕವಾಗಿ ಮಾತನಾಡಿದ್ದರು. ಕುಕ್ಕರ್ ಬಾಂಬ್ ಸ್ಟೋಟಿಸಿದ್ದ ವ್ಯಕ್ತಿ ಮನೆಯಲ್ಲಿ ಸಾಕ್ಷ್ಯಾಧಾರಗಳು ಸಿಕ್ಕರು ನಡೆಯುತ್ತೇ ಬಿಡಿ ಎಂದು ಡಿಕೆ ಶಿವಕುಮಾರ್ ಬೇಜವಾಬ್ದಾರಿಯಾಗಿ ಹೇಳಿದ್ದರು ಎಂದು ಬಿಜೆಪಿ ವಿವರಿಸಿದೆ.

Congress Government Is Creating Unrest in Karnataka: BJP Has Attacked By Posting A Video

ಗಲಭೆಯಲ್ಲಿ ಪಾಲ್ಗೊಂಡವರ ಬಿಡಲು ಡಿಸಿಎಂ ಸೂಚನೆ

ಹುಬ್ಬಳ್ಳಿ ಕೋಮುಗಲಭೆಯಲ್ಲಿ ಭಾಗಿಯಾದವರನ್ನು ಬಿಟ್ಟು ಕಳುಹಿಸುವಂತೆ ಪೊಲೀಸರುಗೆ ಡಿಕೆ ಶಿವಕುಮಾರ್ ಲಿಖಿತವಾಗಿ ತಿಳಿಸಿದ್ದಾರೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಪುಷ್ಠಿಕರಣಕ್ಕೆ ಇಳಿದ ಪರಿಣಾಮವೇ ಇಂತಹ ಅವಘಡಗಳು, ಅಪರಾಧ ಕೃತ್ಯಗಳು ಹೆಚ್ಚಾಗುತ್ತಿವೆ ಎಂದು ಬಿಜೆಪಿ ದೂರಿದೆ.

ಶಿವಮೊಗ್ಗದಲ್ಲಿ ಕೋಮು ಸೌಹಾರ್ಧತೆ ಕದಡಲಾಗಿದೆ. ರಾಮನಗರದಲ್ಲಿ ಕಾಂಗ್ರೆಸ್ ಶಾಸಕ ಅಧಿಕಾರದಲ್ಲಿದ್ದಾರೆ. ಹೀಗಾಗಿ ಜಿಹಾದಿಗಳು ಕೊಟ್ಟಿಗೆಗೆ ಬಂದು ಕಟ್ಟಿದ್ದ ಹಸು ಕಳ್ಳತನ ಮಾಡಿ ನಂತರ ಗೋ ಹತ್ಯೆ ಮಾಡಿ ಅದರ ಮಾಂಸ ಜಮೀನಿನಲ್ಲಿ ಸುರಿದು ಜಿಹಾದಿಗಳು ಅಟ್ಟಹಾಸ ಮೆರೆದಿದ್ದಾರೆ.

ಹಾಸನದಲ್ಲಿ ಕೈಲಿ ಪಿಸ್ತೂಲ್ ಹಿಡಿದು ಓಡಾಟ

ಹಾಸನದಲ್ಲಿಯೂ ಅಶಾಂತಿ ಎಬ್ಬಿಸುವ ಪ್ರಯತ್ನ ನಡೆಯುತ್ತಿದೆ. ಜಿಲ್ಲೆಯಲ್ಲಿ ಕೈಯಲ್ಲಿ ಪಿಸ್ತೂಲ್ ಹಿಡಿದು ಯುವಕರು ಸಂಚರಿಸುತ್ತಿದ್ದಾರೆ. ಇದಕ್ಕೆ ತಮ್ಮ ಕಾಂಗ್ರೆಸ್ ಪಕ್ಷ ಸರ್ಕಾರ ಅಧಿಕಾರಲ್ಲಿದೆ ಎಂಬುದೇ ಕಾರಣವಾಗಿದೆ. ಸಣ್ಣ ವಿಚಾರಗಳಿಗೆ ವಾಹನ ಸವಾರರನ್ನು ಅಡ್ಡಗಟ್ಟುವ ಪೊಲೀಸರು ಇಂತವರನ್ನು ಏನು ಮಾಡುತ್ತಿಲ್ಲ.

ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಬೃಹತ್ ತಲ್ವಾರ್ ಗಳು ಪ್ರತ್ಯಕ್ಷವಾಗುತ್ತಿವೆ. ಔರಂಗಜೇಬ, ಟಿಪ್ಪುವಿನನ್ನು ಒಂದು ಸಮುದಾಯದ ಹಿರೋಗಳಾಗಿ ಕಾಂಗ್ರೆಸ್ ಸರ್ಕಾರ ಬಿಂಬಿಸುತ್ತಿದೆ. ಈ ಮೂಲಕ ಶಾಂತಿ ಹಾಳು ಮಾಡುವ ಮೂಲಕ ಕಾಂಗ್ರೆಸ್ ರಾಜಕಾರಣಕ್ಕಾಗಿ ವೋಟ್ ಬ್ಯಾಂಕ್ ರೂಪಿಸಿಕೊಳ್ಳುತ್ತಿದೆ ಎಂದು ಬಿಜೆಪಿ ಕಟುವಾಗಿ ಟೀಕಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+