Get Updates
Get notified of breaking news, exclusive insights, and must-see stories!

Siddaramaiah vs Deve Gowda: ದೇವೇಗೌಡರು ಒಕ್ಕಲಿಗರನ್ನೇ ಬೆಳೆಸುವುದಿಲ್ಲ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ!

Siddaramaiah vs Deve Gowda: ಹಾಸನದಲ್ಲಿ ನಡೆಯುತ್ತಿರುವ ಜನ ಕಲ್ಯಾಣ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೆಡಿಎಸ್ ಹಾಗೂ ಮಾಜಿ ಪ್ರಧಾನಿ ದೇವೇಗೌಡ ಅವರ ಮೇಲೆ ವಾಗ್ದಾಳಿಯನ್ನೇ ನಡೆಸಿದ್ದಾರೆ. ಈ ಸಮಾವೇಶದ ವಿಶೇಷವೆಂದರೆ ಕರ್ನಾಟಕ ಸಚಿವ ಸಂಪುಟದ ಹಲವು ಸಚಿವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ನಿಂತರು. ಅದರಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರು ಹೇಳಿದ ಮಾತುಗಳು ಗಮನ ಸೆಳೆಯುವಂತೆ ಇದ್ದವು. ಸಮಾವೇಶದ ಉದ್ದಕ್ಕೂ ಕಾಂಗ್ರೆಸ್‌ ನಾಯಕರು ಜೆಡಿಎಸ್‌ ಪಕ್ಷವನ್ನೇ ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದಾರೆ.

ದೇವೇಗೌಡರು ರಾಜಕೀಯದಲ್ಲಿ ಯಾರನ್ನೂ ಬೆಳೆಸಲು ಇಚ್ಛಿಸಲ್ಲ. ಅವರು ಒಕ್ಕಲಿಗರನ್ನೇ ಬೆಳೆಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇವೇಗೌಡ ಅವರ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಹಾಸನದಲ್ಲಿ ಬೃಹತ್‌ ಜನ ಕಲ್ಯಾಣ ಕಾರ್ಯಕ್ರಮ ನಡೆಯುತ್ತಿದ್ದು, ಕಾಂಗ್ರೆಸ್ ನಾಯಕರೆಲ್ಲರೂ ಒಂದಾಗಿದ್ದಾರೆ. ಈ ಸಮಾವೇಶವನ್ನು ಕೆಪಿಸಿಸಿ ಹಾಗೂ ಸ್ವಾಭಿಮಾನಿ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಲಾಗಿದೆ.

CM Siddaramaiah alleges Deve Gowda wont cultivate leaders from Vokkaliga community Itself

ನಾವು ಇಲ್ಲದಿದ್ದರೆ ಅವರು ಸಿ.ಎಂ ಆಗುತ್ತಿರಲಿಲ್ಲ

ದೇವೇಗೌಡ ಅವರು ಮುಖ್ಯಮಂತ್ರಿಯಾಗುವುದಕ್ಕೆ ಕಾರಣವೇ ನಾನು ಮತ್ತು ಜಾಲಪ್ಪ ಅವರು. ನಾವಿಬ್ಬರೂ ಇಲ್ಲದೆ ಹೋಗಿದ್ದರೆ 1994 ರಲ್ಲಿ ಎಚ್‌.ಡಿ. ದೇವೇಗೌಡ ಅವರು ಮುಖ್ಯಮಂತ್ರಿ ಆಗುವುದಕ್ಕೆ ಸಾಧ್ಯವೇ ಇರಲಿಲ್ಲ. ಸಿದ್ದರಾಮಯ್ಯ ಅವರನ್ನು ನಾನೇ ಹಣಕಾಸು ಸಚಿವನಾಗಿ ಮಾಡಿದೆ. ಅದರಿಂದ ಅವರು ಬೆಳೆದರು ಅಂತಾರೆ ದೇವೇಗೌಡ ಅವರು ಎಂದು ಸಿದ್ದರಾಮ್ಯಯ ಟಾಂಗ್‌ ಕೊಟ್ಟರು. ದೇವೇಗೌಡ ಅವರೊಂದಿಗೆ ಮನೆ ಮಗನಂತೆ ಬಿ.ಎಲ್‌. ಶಂಕರ್‌ ಹಾಗೂ ವೈ.ಕೆ. ರಾಮಯ್ಯ ಅವರು ಇದ್ದರು ಅವರನ್ನೇ ಬೆಳಸಲಿಲ್ಲ ಎಂದು ದೂರಿದರು.

ನಾವೆಲ್ಲ ಸೇರಿಕೊಂಡು ಜೆಡಿಎಸ್‌ ಪಕ್ಷವನ್ನು ಕರ್ನಾಟಕದಲ್ಲಿ ಕಟ್ಟಿದೆವು. ಆದರೆ, ನಾನು ಅಹಿಂದ ಸಮಾವೇಶ ಮಾಡಿದೆ ಎನ್ನುವ ಏಕೈಕ ಕಾರಣಕ್ಕಾಗಿ ನನ್ನನ್ನು ಪಕ್ಷದಿಂದಲೇ ಉಚ್ಚಾಟಿಸಿದರು. ದೇವೇಗೌಡ ಅವರು ನನ್ನನ್ನು ಬೆಳೆಸಿಲ್ಲ. ನಾವೇ ಅವರು ಮುಖ್ಯಮಂತ್ರಿ ಆಗಲು ಸಹಕಾರ ಕೊಟ್ಟಿದ್ದೇವೆ ಎಂದಿದ್ದಾರೆ ಸಿದ್ದರಾಮಯ್ಯ.

CM Siddaramaiah alleges Deve Gowda wont cultivate leaders from Vokkaliga community Itself

ದೇವೇಗೌಡ ಅವರು ಸಿದ್ದರಾಮಯ್ಯ ಗರ್ವಭಂಗ ಮಾಡುತ್ತೇನೆ ಎಂದು ಹೇಳಿದ್ದರು. ಅಲ್ಲದೇ ಕಾಂಗ್ರೆಸ್‌ ಸರ್ಕಾರವನ್ನು ಕಿತ್ತೊಗೆಯಿರಿ ಎಂದೂ ಹೇಳಿದ್ದರು. ಆದರೆ, ನಾನು ದೇವೇಗೌಡ ಅವರಿಂದ ಈ ರೀತಿಯ ಮಾತುಗಳನ್ನು ನಿರೀಕ್ಷಿಸಿರಲಿಲ್ಲ ಮಾಜಿ ಪ್ರಧಾನಿ ದೇವೇಗೌಡರು ನನಗಿಂತ 15 ವರ್ಷ ಹಿರಿಯರು. ಅವರು ಅಷ್ಟೆ ಘನತೆಯಿಂದ ಮಾತಾಡಬೇಕಿತ್ತು. ಆದರೆ, ಎಂದೂ ಗರ್ವ ತೋರಿಸದ ನನ್ನ ಮೇಲೆ ಸಿದ್ದರಾಮಯ್ಯ ಅವರ ಗರ್ವಭಂಗ ಮಾಡ್ತೀನಿ ಎಂದರು. ಇದನ್ನು ನೀವು ಒಪ್ಪಿಕೊಳ್ಳುತ್ತೀರಾ, ಸಹಿಸುತ್ತೀರಾ ಎಂದು ಪ್ರಶ್ನೆ ಮಾಡಿದರು.

ಮುಂದುವರಿದು ನಮ್ಮ ಸರ್ಕಾರದ ಐದು ಗ್ಯಾರಂಟಿಗಳನ್ನು ಪಡೆದಿರುವ ಫಲಾನುಭವಿಗಳನ್ನು ಬಿಜೆಪಿ-ಜೆಡಿಎಸ್ ಅವರು ಅವಮಾನಿಸುತ್ತಿದ್ದಾರೆ. ಅವರು ಪರಮ ಜನದ್ರೋಹಿಗಳು. ಯಾವುದೇ ಕಾರಣಕ್ಕೂ ನಾವು ಕೊಟ್ಟಿರುವ ಗ್ಯಾರಂಟಿಗಳನ್ನು ನಿಲ್ಲಿಸುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

CM Siddaramaiah alleges Deve Gowda wont cultivate leaders from Vokkaliga community Itself

ಡಾ.ರಾಜ್ ಕುಮಾರ್‌ ಅವರು ಅಭಿಮಾನಿಗಳೇ ದೇವರು ಎನ್ನುತ್ತಿದ್ದರು. ನಮಗೆ ಮತದಾರ ಬಂಧುಗಳೇ ದೇವರು. ಉಪ ಚುನಾವಣೆಯಲ್ಲಿ ಮೂರಕ್ಕೆ ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಆಶೀರ್ವದ ಮಾಡಿದ್ದಕ್ಕೆ. ಹಾಸನದ ಮಹಾನ್ ನಾಯಕರ ಮೊಮ್ಮಗ ನಿಖಿಲ್ ಕುಮಾರಸ್ವಾಮಿಯನ್ನು ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆಯಲ್ಲಿ, ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಅವರ ಮೊಮ್ಮಗನನ್ನು ಶಿಗ್ಗಾಂವಿಯಲ್ಲಿ ಜನ ಸೋಲಿಸಿದ್ದು, ನಮಗೆ ಆಶೀರ್ವದ ಮಾಡಿದ್ದಾರೆ ಇದಕ್ಕೆ ಧನ್ಯವಾದಗಳು ಎಂದರು.

ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿಯಾಗಿ ಆಯ್ಕೆಯಾಗುವಷ್ಟು ಅಧಿಕಾರವನ್ನು ಬಹುಮತ ಕರ್ನಾಟಕದ ಜನತೆ ಎಂದೂ ಕೊಟ್ಟಿಲ್ಲ. ಅವರು ಒಮ್ಮೆ ಕಾಂಗ್ರೆಸ್ ಬೆಂಬದಿಂದ ಹಾಗೂ ಇನ್ನೊಮ್ಮೆ ಬಿಜೆಪಿ ಬೆಂಬಲದಲ್ಲಿ ಮುಖ್ಯಮಂತ್ರಿ ಆಗಿದ್ದರು. ಆದರೆ, ಇದಾದ ಬಳಿಕ ಅವರು ಎರಡೂ ಪಕ್ಷಗಳಿಗೆ ವಂಚಿಸಿದರು ಎಂದು ದೂರಿದರು.

ಜೆಡಿಎಸ್‌ ಭದ್ರಕೋಟೆಯಲ್ಲೇ ನಿಂತು ಕಾಂಗ್ರೆಸ್‌ ಪಕ್ಷದ ನಾಯಕರು ಜೆಡಿಎಸ್‌ನ ವಿರುದ್ಧ ಗುಡುಗಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+