ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣ ಸಿಐಡಿ ತನಿಖೆಗೆ
ಬೆಂಗಳೂರು, ಆ.31 : ಹಿರಿಯ ಸಂಶೋಧಕ ಮತ್ತು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎಂ.ಎಂ.ಕಲಬುರ್ಗಿ ಅವರ ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲು ಸರ್ಕಾರ ನಿರ್ಧರಿಸಿದೆ. ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸೋಮವಾರ ಬೆಳಗ್ಗೆ ಸಚಿವ ಸಂಪುಟ ಸಭೆಗೂ ಮುನ್ನ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ ಅವರು, 'ಎಂ.ಎಂ.ಕಲಬುರ್ಗಿ ಅವರ ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸುವುದಾಗಿ' ಹೇಳಿದರು. ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿ ಅಥವ ಸಿಬಿಐಗೆ ವಹಿಸುವುದಾಗಿ ಭಾನುವಾರ ಧಾರವಾಡದಲ್ಲಿ ಮುಖ್ಯಮಂತ್ರಿಗಳು ಹೇಳಿದ್ದರು. [ಇಂದು ಎಂ.ಎಂ.ಕಲಬುರ್ಗಿ ಅಂತ್ಯಕ್ರಿಯೆ]
ಆ.30ರ ಭಾನುವಾರ ಬೆಳಗ್ಗೆ 8.40ರ ಸುಮಾರಿಗೆ ಧಾರವಾಡ ಕಲ್ಯಾಣ ನಗರದಲ್ಲಿರುವ ಎಂ.ಎಂ.ಕಲಬುರ್ಗಿ ಅವರ ನಿವಾಸಕ್ಕೆ ಆಗಮಿಸಿದ್ದ ದುಷ್ಕರ್ಮಿಗಳು ಎರಡು ಸುತ್ತು ಗುಂಡು ಹಾರಿಸಿ ಕಲಬುರ್ಗಿ ಅವರನ್ನು ಹತ್ಯೆ ಮಾಡಿದ್ದರು. ಹಂತಕರನ್ನು ಬಂಧಿಸಲು ವಿಶೇಷ ತಂಡವನ್ನು ಪೊಲೀಸರು ರಚಿಸಿದ್ದರು. ಸೋಮವಾರ ಸರ್ಕಾರ ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸುವುದಾಗಿ ಹೇಳಿದೆ. [ಕಲಬುರ್ಗಿ ಹತ್ಯೆಗೆ ಗಣ್ಯರ ಕಂಬನಿ]
ವಿದ್ಯಾರ್ಥಿಗಳಂತೆ
ಬಂದ
ಇಬ್ಬರು
ಯುವಕರು
ಕಲಬುರ್ಗಿ
ಅವರ
ಹಣೆ
ಮತ್ತು
ಎದಗೆ
ಗುಂಡು
ಹಾರಿಸಿ
ಪರಾರಿಯಾಗಿದ್ದರು.
ತಕ್ಷಣ
ಕಲಬುರ್ಗಿ
ಅವರನ್ನು
ಆಸ್ಪತ್ರೆಗೆ
ದಾಖಲು
ಮಾಡಿದರೂ
ಚಿಕಿತ್ಸೆ
ಫಲಕಾರಿಯಾಗದೇ
ಅವರು
ಮೃತಪಟ್ಟಿದ್ದಾರೆ.
ಕಲಬುರ್ಗಿ
ಅವರ
ಅಂತ್ಯಕ್ರಿಯೆ
ಇಂದು
ಧಾರವಾಡದಲ್ಲಿ
ನಡೆಯಲಿದೆ.
[ಸಿಐಡಿ
ತನಿಖೆ
ಹೇಗೆ
ನಡೆಯುತ್ತದೆ?]