Get Updates
Get notified of breaking news, exclusive insights, and must-see stories!

Bellary: ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ: ಕಂಪನಿಗೆ ದಂಡ ಹಾಕುವ ಶಿಫಾರಸಿಗೆ ಅಂಗೀಕಾರ

ಬಳ್ಳಾರಿ, ನವೆಂಬರ್ 20: ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಕಾಯ್ದಿರಿಸಿದ್ದ ಅರಣ್ಯ ಪ್ರದೇಶದಲ್ಲಿ ದಶಕಗಳಿಂದಲೂ ಗಣಿಗಾರಿಕೆ ನಡೆಸಿಕೊಂಡು ಬಂದಿದ್ದ NMDC ಕಂಪನಿಗೆ ಸರ್ಕಾರ ಬಿಸಿ ಮುಟ್ಟಿಸಲಿದೆ. ಕಂಪನಿಗೆ ದಂಡ ವಿಧಿಸಿರುವ ಕಳುಹಿಸಿದ್ದ ಶಿಫಾರಸಿಗೆ ಕೇಂದ್ರ ಸಮಿತಿ ಅನುಮತಿ ನೀಡಿದೆ. ಈ ಮೂಲಕ ಗಣಿಗಾರಿಕೆಯು ಈ ಕಂಪನಿಗೆ ಆರ್ಥಿಕ ಹೊರೆಯಾಗಿ ಪರಿಣಮಿಸಲಿದೆ.

ಸಂಡೂರಿನಲ್ಲಿ 239 ಎಕರೆ ಕಾಯ್ದಿರಿಸಿದ ಅರಣ್ಯ ಭೂಮಿಯಲ್ಲಿ ಕಳೆದ 44 ವರ್ಷಗಳಲ್ಲಿ ಗಣಿಗಾರಿಕೆ ನಡೆಸುತ್ತಿದ್ದ ಕಂಪನಿಗೆ ರಾಜ್ಯ ಸರ್ಕಾರ ದಂಡ ವಿಧಿಸಲಿದೆ. ಈ ಎನ್‌ಎಂಡಿಸಿ ಕಂಪನಿಯು ಅರಣ್ಯ (ಸಂರಕ್ಷಣೆ) ಕಾಯಿದೆ ಬರುವ ಅಂದರೆ 1977 ರಲ್ಲಿ 1,502 ಎಕರೆ ಗಣಿಗಾರಿಕೆ ಗುತ್ತಿಗೆ ಪಡೆದು ಕೆಲಸ ಆರಂಭಿಸಿತ್ತು. 1980 ರಲ್ಲಿ ಕಾಯಿದೆ ಜಾರಿಗೆ ಬಂತು. ಬಳಿಕವೇ ಈ ಗಣಿಗಾರಿಕೆ ಕಂಪನಿಯು 249.37 ಎಕರೆಗೆ ಅನುಮತಿ ಪಡೆಯುವಲ್ಲಿ ನಿಯಮ ಉಲ್ಲಂಘಿಸಿದೆ ಎಂಬುದು ಗೊತ್ತಾಗಿದೆ.

Central Committee Approved To Impose Fine on NMDC of Mining in Sandur Forest Area of Bellary.

ಇದಾದ ಮೇಲೆ 1997 ರಲ್ಲಿ ಗುತ್ತಿಗೆಗಳನ್ನು ನವೀಕರಿಸಿದರೂ ಸಹಿತ ಗಣಿಗಾರಿಕೆಗೆ ಪಡೆದ ಒಟ್ಟು 582.27 ಎಕರೆ ಅರಣ್ಯ ಭೂಮಿಯಲ್ಲಿ ಅಲ್ಲಲ್ಲಿ (ಪ್ಯಾಚ್‌ಗಳಲ್ಲಿ) ನಿಯಮ ಉಲ್ಲಂಘಿಸಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ 2022ರಲ್ಲಿ ಕಂಪನಿಯು ಉಲ್ಲಂಘನೆಯನ್ನು ಕ್ರಮ ಬದ್ಧಗೊಳಿಸಲು ಕೋರಿ ಅರ್ಜಿ ಸಲ್ಲಿಸಿತ್ತು ಎಂದು ಡಿಎಚ್ ವರದಿ ಮಾಡಿದೆ.

ಸಮೃದ್ಧ ವನ್ಯಜೀವಿ ಪ್ರದೇಶ ಇಲ್ಲಿದೆ

ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಯ ಅಧಿಕಾರಿಗಳು ಗಣಿಗಾರಿಕೆ ಪ್ರದೇಶಕ್ಕೆ ಭೇಟಿ ನೀಡಿ ಖುದ್ದು ಪರಿಶೀಲಿಸಿದರು. ಕ್ರಮ ಬದ್ಧಗೊಳಿಸಲು ಕೋರಲಾದ ಅರಣ್ಯ ಪ್ರದೇಶವು ಚಿರತೆ, ಕರಡಿ, ನರಿ ಮತ್ತು ಹುಲಿಗಳನ್ನು ಒಳಗೊಂಡ ಸಮೃದ್ಧ ವನ್ಯಜೀವಿ ತಾಣವಾಗಿದೆ ಎಂಬುದು ಗೊತ್ತಾಗಿದೆ. ವಿವಿಧ ಜಾತಿಯ ಪಕ್ಷಗಳು ಇಲ್ಲಿವೆ.

Central Committee Approved To Impose Fine on NMDC of Mining in Sandur Forest Area of Bellary.

ಇದೆಲ್ಲ ಅಂಶಗಳನ್ನು ಅರಣ್ಯ ಸಲಹಾ ಸಮಿತಿಯು ಉಲ್ಲೇಖಿಸಿದ್ದು, ಎನ್‌ಎಂಡಿಸಿ ಅಧಿಕಾರಿಗಳು ನಿಯಮ ಪಾಲನೆಯಲ್ಲಿ ವಿಫಲವಾಗಿದ್ದಾರೆ. ಹೀಗಿದ್ದರೂ ಗಣಿಗಾರಿಕೆ ಮುಂದುವರಿಸಿದ್ದಾಗಿ ಅವರೇ ಒಪ್ಪಿಕೊಂಡಿದ್ದಾರೆ. ಸದ್ಯ ಅರಣ್ಯ ಪರಿಸರಕ್ಕೆ ಆದ ಅನ್ಯಾಯ ಸರಿದೂಗಿಸಲು, ಕಂಪನಿಯು ಗುಡೇಕೋಟೆ ಸ್ಲಾತ್ ಕರಡಿ ಅಭಯಾರಣ್ಯದ ಪಕ್ಕದ 95 ಎಕರೆ ಪ್ರದೇಶದಲ್ಲಿ ಸಂರಕ್ಷಣೆ ಮಾಡಲು ಮುಂದಾಗಿದೆ.

ನಿರ್ವಹಣಾ ಯೋಜನೆ ರೂಪಿಸಲು ನಿರ್ದೇಶನ

ಗಣಿಗಾರಿಕೆ ಕಂಪನಿಯಿಂದ ಒಟ್ಟು 582.27 ಎಕರೆ ಅರಣ್ಯ ಪ್ರದೇಶದಲ್ಲಿ ನಿಯಮ ಉಲ್ಲಂಘನೆ ಆಗಿದೆ. ಇದರ ಆಧಾರದಲ್ಲಿ ರಾಜ್ಯ ಅರಣ್ಯ ಇಲಾಖೆಯು ಗುತ್ತಿಗೆ ಪಡೆದ ಸಂಪೂರ್ಣ ಪ್ರದೇಶವನ್ನೇ ಪರಿಶೀಲಿಸುವಂತೆ ಸೂಚಿಸಲಾಗಿದೆ. ಕೇಂದ್ರ ಸಮಿತಿ ದಂಡವನ್ನು 249.37 ಎಕರೆಗೆ ಸೀಮಿತಗೊಳಿಸದೇ ಉಳಿದ 342.92 ಎಕರೆಗೆ ಅರಣ್ಯ ಪ್ರದೇಶಕ್ಕೂ ನಿರ್ವಹಣಾ ಯೋಜನೆ ರೂಪಿಸಲು ಸಮಿತಿ ನಿರ್ದೇಶಿಸಿದೆ.

ಕರ್ನಾಟಕ ಸರ್ಕಾರ ಅರಣ್ಯ ಪ್ರದೇಶದ ಸುತ್ತಮುತ್ತಲಿನ ಪರಿಸರದಲ್ಲಿ ಸಂಯೋಜಿತ ವನ್ಯಜೀವಿ ನಿರ್ವಹಣಾ ಯೋಜನೆ ಸಿದ್ಧಪಡಿಸುತ್ತಿದೆ. ಅದನ್ನು ಕಂಪನಿಯ ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಯೋಚಿಸಿದೆ ಎಂದು ಹೆಚ್ಚುವರಿ ಅರಣ್ಯ ನಿರ್ದೇಶಕರು (ಅರಣ್ಯ ಸಂರಕ್ಷಣೆ) ಎಸ್‌ಪಿ ಯಾದವ್ ತಿಳಿಸಿದರು. ಸದ್ಯ ಉಲ್ಲಂಘನೆಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿರುವ ಬಗ್ಗೆ ರಾಜ್ಯ ಸರ್ಕಾರ ಯಾವುದೇ ಮಾಹಿತಿ ನೀಡಿಲ್ಲ ಎಂದು ಸಮಿತಿ ತಿಳಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+