ಅಕ್ರಮ ಆಸ್ತಿಗಳಿಕೆ : ಬಿಎಸ್ವೈ ಪುತ್ರನಿಗೆ ಸಿಬಿಐ ಸಮನ್ಸ್
ಬೆಂಗಳೂರು, ಡಿ.2 : ಶಿಕಾರಿಪುರ ಶಾಸಕ ಮತ್ತು ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಅವರಿಗೆ ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ವಿಚಾರಣೆಗೆ ಖುದ್ದು ಹಾಜರಾಗುವಂತೆ ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿದೆ.
ಶಿವಮೊಗ್ಗದ
ವಕೀಲ
ಬಿ.ವಿನೋದ್
ಅವರು
ಸಲ್ಲಿಸಿದ್ದ
ಅರ್ಜಿಯ
ವಿಚಾರಣೆಯನ್ನು
ಮಂಗಳವಾರ
ನಡೆಸಿದ
ವಿಶೇಷ
ನ್ಯಾಯಾಲಯ,
ಮುಂದಿನ
ವಿಚಾರಣೆಗೆ
ಖುದ್ದು
ಹಾಜರಾಗುವಂತೆ
ಬಿ.ವೈ.ರಾಘವೇಂದ್ರ
ಅವರಿಗೆ
ಸಮನ್ಸ್
ಜಾರಿ
ಮಾಡಿ
ವಿಚಾರಣೆಯನ್ನು
ಡಿ.15ಕ್ಕೆ
ಮುಂದೂಡಿದೆ.
ಪ್ರಕರಣದಲ್ಲಿ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ, ಅಳಿಯ ಸೋಹನ್ ಕುಮಾರ್, ಉದಯ ಕುಮಾರ್ ಅವರು ಆರೋಪಿಗಳಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಅವರಿಗೂ ನೋಟಿಸ್ ಜಾರಿಗೊಳಿಸಲಾಗಿದೆ. [ಯಡಿಯೂರಪ್ಪ ಸೋದರಳಿಯ ಬಂಧನ]
ಆರೋಪವೇನು : ಬಿ.ವೈ.ರಾಘವೇಂದ್ರ ಅವರು ಶಿವಮೊಗ್ಗದ ಸಂಸದರಾಗಿ ಆಯ್ಕೆಯಾದ ಬಳಿಕ ಅವರ ಆಸ್ತಿಯಲ್ಲಿ ಹೆಚ್ಚಳವಾಗಿದೆ. ಅಕ್ರಮವಾಗಿ ಈ ಆಸ್ತಿಯನ್ನು ಅವರು ಸಂಪಾದನೆ ಮಾಡಿದ್ದಾರೆ ಎಂದು ಆರೋಪಿಸಿ ಶಿವಮೊಗ್ಗದ ವಕೀಲ ಬಿ.ವಿನೋದ್ ಎಂಬವರು ಸಿಬಿಐ ವಿಶೇಷ ಕೋರ್ಟ್ನಲ್ಲಿ 2013ರ ನವೆಂಬರ್ನಲ್ಲಿ ದೂರು ದಾಖಲಿಸಿದ್ದರು.
ದೂರಿನಲ್ಲಿ ಬಿ.ವೈ.ರಾಘವೇಂದ್ರ ಅವರು ಪ್ರಮುಖ ಆರೋಪಿಯಾಗಿದ್ದು, ಅವರ ಸಹೋದರ ಬಿ.ವೈ.ವಿಜಯೇಂದ್ರ ಮತ್ತು ಯಡಿಯೂರಪ್ಪ ಅಳಿಯರಾದ, ಸೋಹನ್ ಕುಮಾರ್, ಉದಯ ಕುಮಾರ್ ಅವರ ಹೆಸರಗಳನ್ನು ಸೇರಿಸಲಾಗಿದೆ.
ಅಂದಹಾಗೆ 2014ರ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಬಿ.ಎಸ್.ಯಡಿಯೂರಪ್ಪ ಅವರು ಚುನಾವಣೆಗೆ ಸ್ಪರ್ಧಿಸಿ ಜಯಗಳಿಸಿದ್ದಾರೆ. ಯಡಿಯೂರಪ್ಪ ಅವರ ರಾಜೀನಾಮೆಯಿಂದ ತೆರವಾದ ಶಿಕಾರಿಪುರ ಕ್ಷೇತ್ರದಲ್ಲಿ ರಾಘವೇಂದ್ರ ಅವರು ಚುನಾವಣೆಗೆ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. [ನಮ್ಮ ಸಂಸದರು ಯಾರು ಇಲ್ಲಿದೆ ಮಾಹಿತಿ]