ಚಂದ್ರಗ್ರಹಣ ಸಮಯದಲ್ಲಿ ತಿನ್ನಬಾರದೇ, ಈ 5 ಸತ್ಯಗಳನ್ನು ತಿಳಿದುಕೊಳ್ಳಿ! Blood Moon Eclipse 2025
Blood Moon Eclipse 2025: ಅಪರೂಪದ ಹಾಗೂ ವರ್ಷದ ಕೊನೆಯ ಚಂದ್ರಗ್ರಹಣವು ಭಾನುವಾರ (ಸೆಪ್ಟೆಂಬರ್ 07)ದಂದು ಗೋಚರಿಸಿದೆ. ಇದು ಅಪರೂಪದಲ್ಲಿ ಅಪರೂಪದ ಚಂದ್ರಗ್ರಹಣ ಎಂದೇ ಪರಿಗಣಿಸಲಾಗಿದೆ. ಆದರೆ ಚಂದ್ರಗ್ರಹಣವನ್ನು ನೋಡಬೇಕೇ ಅಥವಾ ನೋಡಬಾರದೇ ಎನ್ನುವ ವಿಚಾರದಲ್ಲಿ ಹಲವರಲ್ಲಿ ಗೊಂದಲಗಳು ಇವೆ. ಇನ್ನು ಚಂದ್ರಗ್ರಹಣವು ಸಂಪೂರ್ಣವಾಗಿ ನೈಸರ್ಗಿಕ ಪ್ರಕ್ರಿಯೆಯಾಗಿದೆ. ಇನ್ನು ಚಂದ್ರಗ್ರಹಣಕ್ಕೆ ಸಂಬಂಧಿಸಿದಂತೆ ಜನರಲ್ಲಿ ಇರುವ ಐದು ಮಿಥ್ಯೆ ಮತ್ತು ಸಂತ್ಯಾಂಶ ಎನ್ನುವುದನ್ನು ಈ ಲೇಖದಲ್ಲಿ ನೋಡೋಣ.
ಚಂದ್ರನ ಬಣ್ಣವು ಕಡುಗೆಂಪು ಬಣ್ಣಕ್ಕೆ ತಿರುಗುವುದರಿಂದ ಈ ಚಂದ್ರಗ್ರಹಣವನ್ನು ರಕ್ತ ಚಂದ್ರಗ್ರಹಣ ಎಂದು ಕರೆಯಲಾಗುತ್ತದೆ. ಚಂದ್ರಗ್ರಹಣ ಹಾಗೂ ರಕ್ತ ಚಂದ್ರನ ಬಗ್ಗೆ ಬೆರಗುಗೊಳಿಸುವ ಸಂಗತಿಗಳಿವೆ. ಇದೇ ಕಾರಣಕ್ಕೆ ಇಂದಿನ ಚಂದ್ರಗ್ರಹಣ ವಿಶೇಷವಾಗಿದೆ. ಚಂದ್ರಗ್ರಹಣಕ್ಕೆ ಸಂಬಂಧಿಸಿದಂತೆ 5 ಪ್ರಮುಖ ಮಿಥ್ಯೆ ಹಾಗೂ ವಾಸ್ತವಾಂಶ ಇಲ್ಲಿವೆ. ಈ ಬಗ್ಗೆ TN ವರದಿ ಮಾಡಿದೆ.

1. ಮಿಥ್ಯೆ: ಚಂದ್ರಗ್ರಹಣವನ್ನು ನೋಡುವುದರಿಂದ ನಿಮ್ಮ ಕಣ್ಣುಗಳಿಗೆ ಹಾನಿ ಆಗುತ್ತದೆ ?
ವಾಸ್ತವ: ಚಂದ್ರಗ್ರಹಣಗಳನ್ನು ಬರಿಗಣ್ಣಿನಿಂದ ನೋಡುವುದು ಸಂಪೂರ್ಣವಾಗಿ ಸುರಕ್ಷಿತವಾಗಿದೆ. ನೀವು ಚಂದ್ರಗ್ರಹಣವನ್ನು ನೋಡುವುದಕ್ಕೆ ಕನ್ನಡಕ ಅಥವಾ ಫಿಲ್ಟರ್ ಸಾಧನಗಳನ್ನು ಬಳಸುವ ಅವಶ್ಯಕತೆ ಇಲ್ಲ. ಆದರೆ ಸೂರ್ಯಗ್ರಹಣವನ್ನು ನೋಡುವ ಸಂದರ್ಭದಲ್ಲಿ ನೀವು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. ಯಾಕೆಂದರೆ ಸೂರ್ಯಗ್ರಹಣವನ್ನು ಬರಿಗಣ್ಣಿನಲ್ಲಿ ನೋಡಲು ಸಾಧ್ಯವಿಲ್ಲ. ಅಲ್ಲದೇ ಬರಿಗಣ್ಣಿನಿಂದ ನೋಡುವುದರಿಂದ ಕಣ್ಣಿಗೆ ಹಾನಿಯಾಗುವ ಸಾಧ್ಯತೆಯೂ ಇರುತ್ತದೆ.
2. ಮಿಥ್ಯೆ: ಗ್ರಹಣದ ಸಮಯದಲ್ಲಿ ಆಹಾರವನ್ನು ಸೇವಿಸುವುದು ಅಸುರಕ್ಷಿತ ಅಥವಾ ತಪ್ಪು ?
ಸತ್ಯ: ಗ್ರಹಣದ ಸಮಯದಲ್ಲಿ ಆಹಾರವನ್ನು ಸೇವಿಸುವುದು ಅಸುರಕ್ಷಿತ ಅಥವಾ ತಿನ್ನಬಾರದು ಎನ್ನುವುದಕ್ಕೆ ಸಂಬಂಧಿಸಿದಂತೆ ಯಾವುದೇ ವೈಜ್ಞಾನಿಕ ಅಧ್ಯಯನವಿಲ್ಲ. ಚಂದ್ರಗ್ರಹಣ ಸಮಯದಲ್ಲಿ ಭೂಮಿಗೆ ಯಾವುದೇ ವಿಕಿರಣ ಬೀಳುವುದಿಲ್ಲ ಅಥವಾ ಪರಿಣಾಮ ಬೀರುವುದಿಲ್ಲ.
3. ಮಿಥ್ಯೆ: ಗರ್ಭಿಣಿಯರು ಗ್ರಹಣದ ಸಮಯದಲ್ಲಿ ಹೊರಗೆ ಹೋಗಬಾರದು. ಹೋದರೆ ಮಗುವಿಗೆ ಗಾಯದ ಗುರುತು ಬೀಳುವ ಸಾಧ್ಯತೆ ಇದೆ ?
ಸತ್ಯ: ವಿಜ್ಞಾನದ ಪ್ರಕಾರ ಈ ವಿಷಯವನ್ನು ಸಾಬೀತು ಮಾಡುವ ಯಾವುದೇ ಪುರಾವೆಗಳಿಲ್ಲ. ಮಗುವಿನ ದೈಹಿಕ ಗುರುತುಗಳು ಮತ್ತು ಲಕ್ಷಣಗಳು ಅವರ ಬೆಳವಣಿಗೆಗೆ ಮಾತ್ರ ಸಂಬಂಧಿಸಿವೆ. ಅಲ್ಲದೇ ಇದು ಡಿಎನ್ಎಯಿಂದ ನಿರ್ಧರಿಸಲ್ಪಡುತ್ತವೆ. ಇದಕ್ಕೂ ಚಂದ್ರಗ್ರಹಣಕ್ಕೂ ಯಾವುದೇ ಸಂಬಂಧವಿಲ್ಲ.
4. ಮಿಥ್ಯೆ: ಗ್ರಹಣವು ಭೂಕಂಪ ಹಾಗೂ ಪ್ರಕೃತಿ ವಿಕೋಪಗಳಿಗೆ ಕಾರಣವಾಗಬಹುದು ?
ಸತ್ಯ: ಗ್ರಹಣಗಳು ಯಾವುದೇ ರೀತಿಯ ನೈಸರ್ಗಿಕ ವಿಕೋಪಗಳಿಗೆ ಕಾರಣವಾಗುವ ಸಾಧ್ಯತೆ ಇಲ್ಲ. ಇದು ಆಕಾಶದಲ್ಲಿ ಸಂಭವಿಸುವ ಪ್ರಕ್ರಿಯೆಯಾಗಿದೆ ಮತ್ತು ಅತ್ಯಂತ ಸಹಜ ಪ್ರಕೃತಿ ಪ್ರಕ್ರಿಯೆಯಾಗಿದೆ.
5. ಮಿಥ್ಯೆ: ಗ್ರಹಣಗಳು ಸಂಭವಿಸಿದರೆ ದುರದೃಷ್ಟ ಬರುವ ಸಾಧ್ಯತೆ ಇದೆ ?
ಸತ್ಯ: ಗ್ರಹಣಗಳು ಜನರಿಗೆ ಯಾವುದೇ ದುರದೃಷ್ಟವನ್ನು ಉಂಟುಮಾಡುವುದಿಲ್ಲ. ಇದು ಕೇವಲ ಮೂಢನಂಬಿಕೆಯ ವಿಷಯವಾಗಿದೆ. ಚಂದ್ರನು ಕೆಂಪು ಬಣ್ಣಕ್ಕೆ ತಿರುಗುತ್ತಿದ್ದಂತೆ, ಜನರು ಅದನ್ನು ದುರದೃಷ್ಟ ಎಂದು ಭಾವಿಸುವ ಅವಶ್ಯಕತೆ ಇಲ್ಲ.
-
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ












Click it and Unblock the Notifications