ಜಂಟಿ ಪತ್ರಿಕಾಗೋಷ್ಠಿ ನಡೆಸಿದ ದೇವೇಗೌಡ-ಸಿದ್ದರಾಮಯ್ಯ ಹೇಳಿದ್ದೇನು?
ಬೆಂಗಳೂರು, ಅಕ್ಟೋಬರ್ 20: ದಶಕಗಳ ಬಳಿಕ ದೇವೇಗೌಡ ಹಾಗೂ ಸಿದ್ದರಾಮಯ್ಯ ಅವರು ಇಂದು ಜಂಟಿ ಸುದ್ದಿಗೋಷ್ಠಿ ನಡೆಸಲಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆಗೆ ಜಂಟಿಯಾಗಿ ಪ್ರಚಾರ ಕಾರ್ಯ ಕೈಗೊಳ್ಳುವ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಈ ಜಂಟಿ ಸುದ್ದಿಗೋಷ್ಠಿ ಹಮ್ಮಿಕೊಳ್ಳಲಾಗಿದೆ. ಆದರೆ ಬಹು ವರ್ಷಗಳ ಬಳಿಕ ಇಬ್ಬರೂ ಮಾಧ್ಯಮದ ಎದುರಿಗೆ ಬರುತ್ತಿರುವುದು ಕುತೂಹಲ ಮೂಡಿಸಿದೆ.
ಈ ಮುಂಚೆ ಒಂದೇ ಪಥದಲ್ಲಿದ್ದ ಆ ನಂತರ ವಿರುದ್ಧ ದಿಕ್ಕಿಗೆ ಸಾಗುತ್ತಿದ್ದ 'ಗುರು-ಶಿಷ್ಯ' ರೆಂದೇ ಕರೆಸಿಕೊಳ್ಳುವ ದೇವೇಗೌಡ-ಸಿದ್ದರಾಮಯ್ಯ ಅವರು ಮತ್ತೆ ಮುನ್ನೆಲೆ ರಾಜಕೀಯದಲ್ಲಿ ಒಂದಾಗುತ್ತಿರುವುದು ರಾಜಕೀಯವಾಗಿಯೂ ಬಹು ಮಹತ್ವ ಪಡೆದುಕೊಂಡಿದೆ.

ಇಂದು 12 ಗಂಟೆಗೆ ಸುದ್ದಿಗೋಷ್ಠಿ ಪ್ರಾರಂಭವಾಗಲಿದ್ದು, ಉಪಚುನಾವಣೆ, ಮುಂಬರುವ ಲೋಕಸಭೆ ಚುನಾವಣೆ, ಜೆಡಿಎಸ್-ಕಾಂಗ್ರೆಸ್ ಮೈತ್ರಿಯಲ್ಲಿನ ಒಳಮುನಿಸು ಎಲ್ಲ ವಿಷಯಗಳ ಬಗ್ಗೆ ಅವರು ಮಾತನಾಡಲಿದ್ದಾರೆ.
ತೋಂಟದಾರ್ಯ ಶ್ರೀಗಳು ನಿಧನಕ್ಕೆ ಸುದ್ದಿಗೋಷ್ಠಿಯಲ್ಲಿದ್ದ ನಾಯಕರು ಸಂತಾಪ, ಎರಡು ನಿಮಿಷಗಳ ಮೌಚಾರಣೆ.
ಸಿದ್ದರಾಮಯ್ಯ - ದೇವೇಗೌಡ ಅವರ ಹಳೆಯ ಸ್ನೇಹ, ಬಾಂದವ್ಯ ಈಗಲೂ ಹಾಗೇ ಇದೆ ದೇಹ ಬೇರೆ ಇದ್ದರೂ ಮನಸ್ಸು ಒಂದೆ - ಕುಮಾರಸ್ವಾಮಿ
ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ, ಕಾಯ, ವಾಚ, ಮನಸಾ ಒಟ್ಟಾಗಿ ಕೆಸಲ ಮಾಡುತ್ತಿದ್ದೇವೆ - ಸಿದ್ದರಾಮಯ್ಯ
ಎರಡೂ ಪಕ್ಷಕ್ಕೆ ರಾಜಕೀಯವಾಗಿ, ಸೈದ್ಧಾಂತಿಕವಾಗಿ ಬಿಜೆಪಿ ನಮ್ಮ ಸಾಮಾನ್ಯ ಎದುರಾಳಿ, ಅವರನ್ನು ಸೋಲಿಸುವುದು ನಮ್ಮ ಜವಾಬ್ದಾರಿ, ಆ ಕಾರ್ಯವನ್ನು ನಾವು ಮಾಡುತ್ತೇವೆ- ಸಿದ್ದರಾಮಯ್ಯ
30ನೇ ತಾರೀಖು ಶಿವಮೊಗ್ಗದ ಜಂಟಿ ಸಮಾವೇಶ ಮಾಡುತ್ತಿದ್ದಾರೆ ನಾನು ಸಭೆಗೆ ಹೋಗುತ್ತೇನೆ, ನಾವು ಜಂಟಿ ಸಮಾವೇಶ ಮಾಡುತ್ತೇವೆ- ಸಿದ್ದರಾಮಯ್ಯ
ಬಳ್ಳಾರಿ, ಶಿವಮೊಗ್ಗ, ಮಂಡ್ಯ, ಜಮಖಂಡಿಗೂ ಪ್ರಚಾರಕ್ಕೆ ಹೋಗುತ್ತೇನೆ ರಾಮನಗರದಲ್ಲಿ ಅಗತ್ಯ ಬಿದ್ದರೆ ಹೋಗುತ್ತೇನೆ, ಅಗತ್ಯ ಇದ್ದರೆ ಜಂಟಿ ಪ್ರಚಾರ ಸಹ ಮಾಡ್ತೇವೆ- ಸಿದ್ದರಾಮಯ್ಯ
ಕಾಂಗ್ರೆಸ್ ಕಾರ್ಯಕರತರು, ಜೆಡಿಎಸ್ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಬೇಕು, ಎರಡೂ ಪಕ್ಷಗಳು ವಿರೋಧಿಗಳಾಗಿದ್ದೆವು ನಿಜ, ಆದರೆ ಅನಿವಾರ್ಯತೆ ಇದ್ದು, ಒಟ್ಟಾಗಿ ಕೆಲಸ ಮಾಡಲೇಬೇಕಿದೆ- ಸಿದ್ದರಾಮಯ್ಯ
ಜಾತ್ಯಾತೀತ ಮತಗಳು ವಿಭಜನೆ ಆಗುತ್ತಿರುವ ಕಾರಣ ಬಿಜೆಪಿ ಗೆಲ್ಲುತ್ತಿದೆ, ಆದರೆ ಈ ಬಾರಿ ಜಾತ್ಯಾತೀತರನ್ನು ಒಂದು ಮಾಡುವ ಪ್ರಯತ್ನ ಕರ್ನಾಟಕದಿಂದ ಪ್ರಾರಂಭವಾಗುತ್ತಿದೆ- ಸಿದ್ದರಾಮಯ್ಯ
ದೇಶದ ರಾಜಕಾರಣದ ಬಗ್ಗೆ ದೇವೇಗೌಡರಿಗೆ ಅರಿವಿದೆ, ಅವರು ಮುಂಚೂಣಿಯಲ್ಲಿ ನಿಂತು ಜಾತ್ಯಾತೀತ ಶಕ್ತಿಗಳು ಒಟ್ಟು ಮಾಡುವ ಕಾರ್ಯ ಮಾಡುತ್ತಾರೆ- ಸಿದ್ದರಾಮಯ್ಯ
ಮೋದಿ ಅಧಿಕಾರಕ್ಕೆ ಬಂದ ಮೇಲೆ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ, ಜನರ ಬದುಕು ದುಸ್ತರವಾಗಿದೆ, ರೈತರ ಕಷ್ಟವನ್ನು ಮೋದಿ ಆಲಿಸಿಲ್ಲ- ಸಿದ್ದರಾಮಯ್ಯ
ಲೋಕಸಭೆ ಚುನಾವಣೆಗೆ ಇದು ಅಡಿಪಾಯ, ರಾಜ್ಯದ 28 ಕ್ಷೇತ್ರಗಳನ್ನೂ ಗೆದ್ದೇ ಗೆಲ್ಲುತ್ತೇವೆ- ಸಿದ್ದರಾಮಯ್ಯ
ಎರಡೂ ಪಕ್ಷಗಳು ಒಟ್ಟಾಗಿ ಕೆಲಸ ಮಾಡುತ್ತಿರುವ ಕಾರಣ ಐದೂ ಕ್ಷೇತ್ರಗಳ ಉಪಚುನಾವಣೆಯಲ್ಲಿ 100% ಗೆದ್ದೇ ಗೆಲ್ಲುತ್ತೇವೆ - ಸಿದ್ದರಾಮಯ್ಯ
ಬಿಜೆಪಿ ಅಧಿಕಾರಕ್ಕೆ ಬಂದರೆ ಜನ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ, ಕೋಮುವಾದ ಹೆಚ್ಚಾಗುತ್ತದೆ - ಸಿದ್ದರಾಮಯ್ಯ
ಅಧಿಕಾರ ಹಿಡಿಯಲು ಈ ಹಿಂದೆ ಅವರು ಬಹಳ ಕೆಟ್ಟ ರೀತಿಯಲ್ಲಿ ಪ್ರಯತ್ನ ಮಾಡಿದ್ದರು, ಈಗಲೂ ಮಾಡುತ್ತಿದ್ದಾರೆ ಆದರೆ ಅವರ ಯತ್ನ ಫಲಿಸದು- ಸಿದ್ದರಾಮಯ್ಯ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮಗೆ ಹೆಚ್ಚು ಮತ ಹೆಚ್ಚು ಬಂದಿತ್ತು, ಜೆಡಿಎಸ್ಗೂ ಸಹ 20% ಫಲಿತಾಂಶ ಬಂದಿತ್ತು- ಸಿದ್ದರಾಮಯ್ಯ
ಮುಂಬರುವ ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು, ಕೋಮುವಾದಿ ಬಿಜೆಪಿಯನ್ನು ಸೋಲಿಸಲು ಜಾತ್ಯಾತೀತ ಪಕ್ಷಗಳು ಒಟ್ಟುಗೂಡಬೇಕು ಎಂದು ನಾವು ಒಂದುಗೂಡಿದ್ದೇವೆ- ಸಿದ್ದರಾಮಯ್ಯ
ಕಾಂಗ್ರೆಸ್ ಮತ್ತು ಜೆಡಿಎಸ್ ಒಟ್ಟಾಗಿ ಉಪಚುನಾವಣೆಯನ್ನು ಎದುರಿಸುತ್ತಿದ್ದೇವೆ, ಹಂಚಿಕೆ ಆಧಾರದಲ್ಲಿ ಈ ಉಪಚುನಾವಣೆಯಲ್ಲಿ ನಾವು ಸ್ಪರ್ಧಿಸುತ್ತಿದ್ದೇವೆ-ಸಿದ್ದರಾಮಯ್ಯ
ಸ್ವಲ್ಪ ಮುನಿಸುಗಳು ಇವೆ, ಅದನ್ನೆಲ್ಲಾ ಸರಿಪಡಿಸುವ ಹೊಣೆ ಹೊರುತ್ತೇವೆ, ನಮ್ಮ ಜಂಟಿ ಪ್ರಚಾರ ರಾಜ್ಯದ ರಾಜಕೀಯ ಇತಿಹಾಸವನ್ನು ಬದಲಾಯಿಸಲಿದೆ- ದೇವೇಗೌಡ
ನಾವು ಮಾಡಿರುವ ತಪ್ಪುಗಳನ್ನು ಕ್ಷಮಿಸಿ, ಉಪಚುನಾವಣೆಯಲ್ಲಿ ನಮ್ಮ ಕೈ ಬಲಪಡಿಸಿ ಎಂದು ಕೈ ಮುಗಿದು ಕೋರಿಕೊಳ್ಳುತ್ತೇನೆ- ದೇವೇಗೌಡ
ವೈಯಕ್ತಿಕ ಲಾಭಕ್ಕಾಗಿ ಅಲ್ಲ, ದೇಶದ ಹಿತದೃಷ್ಠಿಯಿಂದ ಈ ಕಾರ್ಯಕೈಗೊಂಡಿದ್ದೇವೆ, ಕೈ ಮುಗಿದು ಕೇಳಿಕೊಳ್ಳುತ್ತೇವೆ, ಎರಡೂ ಪಕ್ಷದ ಕಾರ್ಯಕರ್ತರು ಕೈ ಜೋಡಿಸಿಕೊಳ್ಳಿ-ದೇವೇಗೌಡ
ಹಳೆಯ ನೆನಪುಗಳನ್ನು ಮರೆತು ಉಪಚುನಾವಣೆಯಲ್ಲಿ ಗೆದ್ದೇ ಗೆಲ್ಲಬೇಕು ಎಂದು ಹೊರಟಿದ್ದೇವೆ-ದೇವೇಗೌಡ
More From
-
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
ಡಿವೋರ್ಸ್ವರೆಗೆ ಪತಿಯ ನಿವಾಸದಲ್ಲೇ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿ: ನಟ ವಿಜಯ್ ಪತ್ನಿ ಕೋರ್ಟ್ಗೆ ಮನವಿ -
Yash: ಪತ್ನಿ ರಾಧಿಕಾ ಪಂಡಿತ್ ಹುಟ್ಟುಹಬ್ಬಕ್ಕೆ ಹೊಸ ಲುಕ್ನಲ್ಲಿ ಯಶ್ ಪ್ರತ್ಯಕ್ಷ -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
ಟಿ20 ವಿಶ್ವಕಪ್ 2026 ಫೈನಲ್ ನಂತರ ಎಲ್ಲಾ ಮಾದರಿಯ ಕ್ರಿಕೆಟ್ಗೆ ಸೂರ್ಯಕುಮಾರ್ ಯಾದವ್ ನಿವೃತ್ತಿ ಘೋಷಣೆ ವದಂತಿ -
Vijay Divorce: ಡಿವೋರ್ಸ್ ವದಂತಿ ನಡುವೆಯೇ ನಟಿ ತ್ರಿಶಾ ಜೊತೆ ಕಾಣಿಸಿಕೊಂಡ ದಳಪತಿ ವಿಜಯ್; ವಿಡಿಯೋ ವೈರಲ್ -
UPSC Results: ಯಾದಗಿರಿ ಜಿಲ್ಲೆ ಒಂದರಲ್ಲೇ 4 ಮಂದಿ ಯುಪಿಎಸ್ಸಿ ಪಾಸ್, ಯಾರವರು? ಹಿನ್ನೆಲೆ ಏನು -
Karnataka Weather: ಕಲಬುರಗಿಯಲ್ಲಿ 39 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಸಿಲ ಬೇಗೆ -
ದುಬೈ ವಿಮಾನ ನಿಲ್ದಾಣಕ್ಕೆ ನುಗ್ಗಿದ ಡ್ರೋನ್, ಎಲ್ಲಾ ವಿಮಾನ ಹಾರಾಟ ದಿಢೀರ್ ಸ್ಥಗಿತ | Operation Roaring Lion -
LPG Price Hike: ಗೃಹಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆ 60 ರೂಪಾಯಿ ಏರಿಕೆ, ವಾಣಿಜ್ಯ ಸಿಲಿಂಡರ್ ದರ 115 ರೂಪಾಯಿ ಹೆಚ್ಚಳ -
SWR: ಬೆಂಗಳೂರಿನಿಂದ ಇಲ್ಲಿಗೆ ಮಾ.10ರಿಂದ ವಿಶೇಷ ರೈಲುಗಳ ಸಂಚಾರ, ವೇಳಾಪಟ್ಟಿ ಹೀಗಿದೆ












Click it and Unblock the Notifications