ಬಿಬಿಎಂಪಿ ಚುನಾವಣೆ ಬಳಿಕ ತಟ್ಟಲಿದೆ ದರ ಏರಿಕೆ ಬಿಸಿ?
ಬೆಂಗಳೂರು, ಆಗಸ್ಟ್ 20 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಮುಗಿದ ಬಳಿಕ ರಾಜ್ಯದ ಜನರಿಗೆ ದರ ಹೆಚ್ಚಳದ ಬಿಸಿ ತಟ್ಟಲಿದೆಯೇ?. ಬಸ್, ವಿದ್ಯುತ್, ಹಾಲಿನ ದರಗಳಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ ಎಂಬ ಸುದ್ದಿ ಹರಿದಾಡುತ್ತಿದೆ.
ಕರ್ನಾಟಕ
ಹಾಲು
ಮಹಾಮಂಡಳಿ
(ಕೆಎಂಎಫ್)
ಹಾಲಿನ
ದರವನ್ನು
4
ರೂ.
ಏರಿಕೆ
ಮಾಡಲು
ಅನುಮತಿ
ನೀಡಬೇಕು
ಎಂದು
ಸರ್ಕಾರಕ್ಕೆ
ಮನವಿ
ಸಲ್ಲಿಸಿ
ಹಲವು
ತಿಂಗಳುಗಳು
ಕಳೆದಿವೆ.
ಸರ್ಕಾರದ
ಕಡೆಯಿಂದ
ಈ
ಪ್ರಸ್ತಾವನೆಗೆ
ಅಂಕಿತ
ಬಿದ್ದಿಲ್ಲ.
[ಬಿಬಿಎಂಪಿ
ಚುನಾವಣೆ
ಬಳಿಕ
ನಂದಿನಿ
ಹಾಲಿನ
ದರ
ಏರಿಕೆ?]
ಮಧುಗಿರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ಎನ್.ರಾಜಣ್ಣ ಅವರು, 'ಬಿಬಿಎಂಪಿ ಚುನಾವಣೆ ನಂತರ ಹಾಲಿನ ದರವನ್ನು ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸಿದೆ. ಹೆಚ್ಚಿಸಿದ ದರವನ್ನು ರೈತರಿಗೆ ನೀಡುವಂತೆ ಸರ್ಕಾರವನ್ನು ಒತ್ತಾಯಿಸುತ್ತೇನೆ' ಎಂದು ಹೇಳುವ ಮೂಲಕ ದರ ಹೆಚ್ಚಳದ ಸುಳಿವು ಕೊಟ್ಟಿದ್ದಾರೆ. [ನಂದಿನಿ ಹಾಲಿನ ದರ 4 ರೂ. ಏರಿಕೆ?]
ದರ ಹೆಚ್ಚಳವಾಗುತ್ತೆ ರೇವಣ್ಣ : ಬಿಬಿಎಂಪಿ ಚುನಾವಣೆ ಮುಗಿದ ಬಳಿಕ ಹಾಲು, ವಿದ್ಯುತ್, ಬಸ್ ಪ್ರಯಾಣ ದರ ಏರಿಸಲು ಸರ್ಕಾರ ಸಿದ್ಧತೆ ನಡೆಸಿದೆ ಎಂದು ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ ಅವರು ಮಂಗಳವಾರ ಹೇಳಿಕೆ ನೀಡಿದ್ದಾರೆ. [ಮಣಿಪಾಲ್-ಬೆಂಗಳೂರು ನಡುವೆ ಫ್ಲೈ ಬಸ್]
ಈಗಾಗಲೇ ಹಾಲಿನ ದರ ಹೆಚ್ಚಿಸುವ ಸಂಬಂಧ ಕೆಎಂಎಫ್ನಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಬಸ್, ವಿದ್ಯುತ್ ಮತ್ತು ಕುಡಿಯುವ ನೀರಿನ ದರ ಹೆಚ್ಚಿಸುವ ಕಡತಗಳು ಸರ್ಕಾರದ ಮಟ್ಟದಲ್ಲಿ ಸಿದ್ಧಗೊಂಡಿವೆ. ಚುನಾವಣೆ ಮುಗಿದ ಇದಕ್ಕೆ ಒಪ್ಪಿಗೆ ನೀಡುವ ಸಾಧ್ಯತೆ ಇದೆ ಎಂದು ರೇವಣ್ಣ ಅವರು ತಿಳಿಸಿದ್ದಾರೆ.