ಬೆಂಗಳೂರಿಂದ ಹುಬ್ಬಳ್ಳಿಗೆ ಬಸ್ ರೇಟ್ ಜಸ್ಟ್ 6000 ಸಾವಿರ ರೂಪಾಯಿ! ಖಾಸಗಿ ಬಸ್ ಮಾಲೀಕರ ಹಗಲು ದರೋಡೆಗೆ ಕೊನೆ ಇಲ್ವಾ?
ರಜೆ ಬಂದಿದೆ ಒಂದೆರಡು ದಿನ ನಮ್ಮ ಊರಿಗೆ ಹೋಗಿ ಅಪ್ಪ ಮತ್ತು ಅಮ್ಮನ ಯೋಗಕ್ಷೇಮ ವಿಚಾರಿಸಿಕೊಂಡು ಬರೋಣ ಅಂತಾ ಬೆಂಗಳೂರಿನ ಮಂದಿ ಬ್ಯಾಗ್ ರೆಡಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಬಸ್ ಬುಕ್ ಮಾಡಲು ಮುಂದಾದ ಅವರಿಗೆ ಒಂದು ಕ್ಷಣ ಹೃದಯವೇ ನಿಂತು ಹೋಗಿದೆ ಅಂತಾ ಕಾಣುತ್ತೆ. ಯಾಕಂದ್ರೆ ಖಾಸಗಿ ಬಸ್ನ ಮಾಲೀಕರು ಆ ರೀತಿ ದರೋಡೆ ಮಾಡ್ತಾ ಇದ್ದಾರೆ ಅನ್ನೋ ಆರೋಪ ಕೇಳಿಬರುತ್ತಿದೆ. ಎಷ್ಟಂದ್ರೆ ಬೆಂಗಳೂರಿಂದ ಹುಬ್ಬಳ್ಳಿಗೆ ಬಸ್ ರೇಟ್ ಜಸ್ಟ್ 6000 ಸಾವಿರ ರೂಪಾಯಿ ಇದೆ!
ಇನ್ನೇನು ಕ್ರಿಸ್ಮಸ್ ಬಂತು, ಹೇಗೋ ಮಂಗಳವಾರ ಒಂದು ರಜೆ ತಗೋಂಡು ಊರಿಗೆ ಹೋದ್ರೆ 3-4 ದಿನ ಊರಲ್ಲೇ ಹಾಯಾಗಿ ಇರಬಹುದು. ಅಪ್ಪ-ಅಮ್ಮ ಮತ್ತು ಕುಟುಂಬ ಸದಸ್ಯರ ಜೊತೆ ಕಾಲ ಕಳೆಯಬಹುದು ಅಂತಾ ಲೆಕ್ಕ ಹಾಕಿ ಊರಿಗೆ ಹೋಗಲು ಬ್ಯಾಗ್ ರೆಡಿ ಮಾಡಿಕೊಂಡಿರುವ ಕನ್ನಡಿಗರಿಗೆ ಬಸ್ ದರ ಆಘಾತ ನೀಡಿದೆ. ಸೋಮವಾರದಿಂದ ಗುರುವಾರದ ತನಕ ಅರ್ಧಕರ್ಧ ರೇಟ್ ಕಡಿಮೆ ಇದ್ದರೆ, ವಾರದ ಅಂತ್ಯಕ್ಕೆ ಡಬಲ್, ತ್ರಿಬಲ್ ರೇಟ್ ಮಾಡಿವೆ ಖಾಸಗಿ ಬಸ್ಗಳು! ಇದನ್ನ ನೋಡಿಯೇ ತಲೆ ಸುತ್ತಿಬಿಡುತ್ತೆ.

ಖಾಸಗಿ ಬಸ್ಗೆ ಕಡಿವಾಣ ಹಾಕಲ್ವಾ?
ಬಹುತೇಕರಿಗೆ ವರ್ಕ್ ಫ್ರಂ ಹೋಂ ಮುಗಿದ ಅಧ್ಯಾಯ. ಬಹುತೇಕ ಕಂಪನಿ ಆಡಳಿತ ಮಂಡಳಿ ನೌಕರರಿಗೆ ಕಚೇರಿಗೆ ಬರಲು ಆದೇಶ ನೀಡಿವೆ. ಹೀಗಾಗಿ ಬೆಂಗಳೂರಲ್ಲಿ ಬಾಡಿಗೆ ದರ & ಸಂಚಾರ ದಟ್ಟಣೆ ಹೆಚ್ಚಾಗಿದೆ. ಇದೇ ಹೊತ್ತಲ್ಲಿ ಬಸ್ ರೇಟ್ಗೆ ಕೂಡ ಕಡಿವಾಣ ಬೀಳುತ್ತಿಲ್ಲ. ವರ್ಕ್ ಫ್ರಂ ಹೋಂ ಇಲ್ಲದ ಕಾರಣ ರಜೆಯಲ್ಲೇ ಊರಿಗೆ ಹೋಗುವವರಿಗೆ ಆಘಾತ ಎದುರಾಗಿದೆ. ಅದರಲ್ಲೂ ಡಿಸೆಂಬರ್ 25ರಂದು ಕ್ರಿಸ್ಮಸ್ ಇರುವ ಹಿನ್ನೆಲೆಯಲ್ಲಿ ಊರಿಗೆ ಹೊರಟ್ಟಿದ್ದವರಿಗೆ ಇದೀಗ ಹಾರ್ಟ್ ಅಟ್ಯಾಕ್ ಒಂದು ಬಾಕಿ ಎನ್ನುವಂತಾಗಿದೆ. ಯಾಕಂದ್ರೆ ಒಂದು ಸಾವಿರ ರೂಪಾಯಿ ಇಲ್ಲ 500 ರೂಪಾಯಿ ಇರುತ್ತಿದ್ದ ಬಸ್ ರೇಟ್ ಈಗ 5000 ರೂಪಾಯಿಗೂ ಹೆಚ್ಚಾಗಿದೆ.
ಯಾವ ಯಾವ ಊರಿಗೆ ಎಷ್ಟು ರೇಟ್?
ಅಂದಹಾಗೆ ಸಾಮಾನ್ಯವಾಗಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ತೆರಳಲು ಸುಮಾರು 600, 700 ಅಬ್ಬಬ್ಬಾ ಅಂದ್ರೂ 1000 ರೂಪಾಯಿ ತನಕ ರೇಟ್ ಇರುತ್ತಿತ್ತು. ಆದರೆ ಕ್ರಿಸ್ಮಸ್ ಕಾರಣ ಖಾಸಗಿ ಬಸ್ ಮಾಲೀಕರಿಂದ ರಾತ್ರಿ ದರೋಡೆ ಶುರುವಾಗಿದೆ ಅಂತಾ ಇದೀಗ ಕನ್ನಡಿಗರು ಭಾರಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಶುಕ್ರವಾರ ಅಂದರೆ ಇಂದು ಬೆಂಗಳೂರಿಂದ ಹುಬ್ಬಳ್ಳಿ ಕಡೆ ಪ್ರಯಾಣ ಮಾಡಲು 5000ರಿಂದ 6000 ಸಾವಿರದ ತನಕ ಬಸ್ ರೇಟ್ ಫಿಕ್ಸ್ ಆಗಿದೆ. ಹೀಗೆ, ಬಸ್ ಟಿಕೆಟ್ ಏರಿಕೆ ಪರಿಣಾಮ ಗ್ರಾಹಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಬೆಳಗಾವಿಗೆ ಬಸ್ ರೇಟ್ ಎಷ್ಟು?
ಬೆಂಗಳೂರಿನಿಂದ ಹುಬ್ಬಳ್ಳಿಗೆ ಮಾತ್ರವಲ್ಲ, ಬೆಂಗಳೂರಿನಿಂದ ಬೆಳಗಾವಿಗೆ ಹೋಗುವವರಿಗು ಇದೇ ರೀತಿ ಸಮಸ್ಯೆ ಎದುರಾಗಿದೆ. ಈ ಮೊದಲು ಒಂದು ಸಾವಿರ ರೂಪಾಯಿ ಒಳಗೆ ಬಸ್ ಟಿಕೆಟ್ ದರ ಇರುತ್ತಿತ್ತು. ಆದರೆ ಈಗ ಬೇಕು ಅಂತ 2500 ದಿಂದ 4500 ರೂಪಾಯಿ ತನಕ ಬಸ್ ಟಿಕೆಟ್ ಬೆಲೆ ಏರಿಕೆ ಮಾಡಿದ್ದಾರೆ ಅಂತಾ ಆರೋಪ ಮಾಡಲಾಗುತ್ತಿದೆ. ಈ ಬಗ್ಗೆ ಈಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ. ಹಾಗೇ ರಾಜ್ಯದ ವಿವಿಧಡೆ ಈ ರೀತಿ ಬಸ್ ಟಿಕೆಟ್ ದರ ಏರಿಕೆ ಕಂಡಿರುವುದು ಗ್ರಾಹಕರನ್ನು ರೊಚ್ಚಿಗೆಬ್ಬಿಸಿದೆ.
ಇದು ಬಸ್ ಪರಿಸ್ಥಿತಿಯಾದರೆ, ಇನ್ನು ರೈಲಿನಲ್ಲಿ ಹೋಗೋಣ ಅಂದರೆ ಮುಂಗಡವಾಗಿ ಬುಕ್ ಮಾಡಲು ಆಗಲ್ಲ ಅಂತಹ ಸ್ಥಿತಿ ಇದೆ. ಇನ್ನು ಟಿಕೆಟ್ ಪಡೆದು ನೇರವಾಗಿ ಹೋಗೋಣ ಅಂದ್ರೆ ಅಲ್ಲೂ ಜನಜಂಗುಳಿ. ಹೀಗಾಗಿ ಲಾಂಗ್ ವೀಕೆಂಡ್ ಬಂದಾಗ ಅಂದ್ರೆ ಸಾಲು ಸಾಲು ರಜೆ ಸಿಕ್ಕಾಗ ಸರ್ಕಾರಿ ಬಸ್ ಸಂಖ್ಯೆ ಹೆಚ್ಚಿಸಬೇಕು ಎಂಬ ಒತ್ತಾಯ ಪ್ರಯಾಣಿಕರದ್ದು. ಖಾಸಗಿ ಸಾರಿಗೆಗಳಿಗೆ ಸರ್ಕಾರ ಖಡಕ್ ಸೂಚನೆ ನೀಡಬೇಕು ಎನ್ನುವ ಆಗ್ರಹ ಕೂಡ ಕೇಳಿಬಂದಿದೆ.
-
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ -
National Highway: ಕರ್ನಾಟಕದ ನಾಲ್ಕು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ನಿತಿನ್ ಗಡ್ಕರಿ -
ರಾಜ್ಯದಲ್ಲಿ 4,824 ಕೋಟಿ ರೂ. ಕೈಗಾರಿಕಾ ಹೂಡಿಕೆಗೆ ಸರ್ಕಾರ ಅಸ್ತು; 14,525 ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
LPG Crisis: ಎಲ್ಪಿಜಿ ಬಿಕ್ಕಟ್ಟಿನ ಸುಳಿಯಲ್ಲಿ ಭಾರತದ ಪ್ರಮುಖ ನಗರಗಳು: ದರ್ಶಿನಿಗಳು ಬಂದ್, ಪಿಜಿಗಳಲ್ಲಿ ಮೆನು ಚೇಂಜ್ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ












Click it and Unblock the Notifications