ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಾಂಗ್ರೆಸ್ ಸಂಚಾಲಕರಾಗಿ ಬ್ರಿಜೇಶ್ ಕಾಳಪ್ಪ ನೇಮಕ
ಬೆಂಗಳೂರು, ಮಾರ್ಚ್ 04: ಹಿರಿಯ ವಕೀಲ ಬ್ರಿಜೇಶ್ ಕಾಳಪ್ಪ ಅವರನ್ನು ಕರ್ನಾಟಕ ಕಾಂಗ್ರೆಸ್ ಪಕ್ಷದ ಮಾಧ್ಯಮ ಸಂಚಾಲಕರನ್ನಾಗಿ ನೇಮಿಸಲಾಗಿದೆ. ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ ಅವರು ನೇಮಕ ಪತ್ರವನ್ನು ಬ್ರಿಜೇಶ್ ಕಾಳಪ್ಪ ಅವರಿಗೆ ಹಸ್ತಾಂತರಿಸಿದರು.
ಸುಪ್ರೀಂಕೋರ್ಟಿನಲ್ಲಿ ವಕೀಲರಾಗಿರುವ ಬ್ರಿಜೇಶ್ ಕಾಳಪ್ಪ ಅವರು ಈ ಹಿಂದೆ ಕರ್ನಾಟಕ ಸರ್ಕಾರದ ಕಾನೂನು ಸಲಹೆಗಾರ(ಕ್ಯಾಬಿನೆಟ್ ದರ್ಜೆ ಹುದ್ದೆ) ರಾಗಿ ಕಾರ್ಯನಿರ್ವಹಿಸಿದ್ದರು. ಹರ್ಯಾಣ ರಾಜ್ಯದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಆಗಿ ಕೂಡಾ ಕರ್ತವ್ಯ ನಿಭಾಯಿಸಿದ್ದಾರೆ.
ಸದ್ಯ ಭಾರತೀಯ ಕಾಂಗ್ರೆಸ್ ನ ರಾಷ್ಟೀಯ ವಕ್ತಾರರಾಗಿದ್ದಾರೆ. ಸಿವಿಎಲ್, ಕ್ರಿಮಿನಲ್, ಜಲ ವಿವಾದ ಹಾಗೂ ಚುನಾವಣಾ ಕಾನೂನು ಸಂಬಂಧಿಸಿದ ಕೇಸುಗಳನ್ನು ನಿಭಾಯಿಸಿರುವ ಬ್ರಿಜೇಶ್ ಅವರು ಸರ್ಕಾರದ ಪರ ವಾದ ಮಂಡಿಸಿದ ಅನುಭವ ಹೊಂದಿದ್ದಾರೆ.
Comments
brijesh kalappa kpcc congress karnataka assembly elections 2018 ಬ್ರಿಜೇಶ್ ಕಾಳಪ್ಪ ಕೆಪಿಸಿಸಿ ಕಾಂಗ್ರೆಸ್ ಕರ್ನಾಟಕ ವಿಧಾನಸಭೆ ಚುನಾವಣೆ 2018
English summary
Brijesh Kalappa has been appointed as the media coordinator of the Congress in Karnataka. The appointment was made by Karnataka Pradesh Congress Committee President, Dr. G Parameshwara.
Story first published: Sunday, March 4, 2018, 11:42 [IST]