'ಸಿದ್ದರಾಮಯ್ಯ ಒಂದು ಸಮುದಾಯದ ಓಲೈಕೆ ಮಾಡುತ್ತಿದ್ದಾರೆ'
ಬೆಂಗಳೂರು, ನವೆಂಬರ್ 02 : 'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದು ಸಮುದಾಯದ ಓಲೈಕೆ ಮಾಡಲು ಗೋಮಾಂಸ ಸೇವಿಸುತ್ತೇನೆ ಎಂದು ಹೇಳಿಕೆ ಕೊಟ್ಟಿದ್ದಾರೆ. ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ' ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಆರೋಪಿಸಿದರು.
'ಗೋಮಾಂಸ
ಸೇವಿಸುತ್ತೇನೆ'
ಎಂದು
ಸಿದ್ದರಾಮಯ್ಯ
ಅವರು
ನೀಡಿರುವ
ಹೇಳಿಕೆ
ಖಂಡಿಸಿ
ಬೆಂಗಳೂರಿನ
ಟೌನ್ಹಾಲ್
ಮುಂದೆ
ಬಿಜೆಪಿ
ನಾಯಕರು
ಸೋಮವಾರ
ಪತ್ರಿಭಟನೆ
ನಡೆಸಿದರು.
'ಗೋಮಾಂಸ
ತಿನ್ನುತ್ತೇನೆ
ಎಂದು
ಹೇಳುವ
ಮೂಲಕ
ಸಿದ್ದರಾಮಯ್ಯ
ಅವರು
ಹಿಂದೂಗಳ
ಭಾವನೆಗಳಿಗೆ
ಧಕ್ಕೆ
ತರುತ್ತಿದ್ದಾರೆ'
ಎಂದು
ಪ್ರತಿಭಟನಾಕಾರರು
ಆರೋಪಿಸಿದರು.
['ಗೋಮಾಂಸ
ತಿನ್ನಬೇಕೆನಿಸಿದರೆ
ತಿನ್ನುತ್ತೇನೆ']
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಆರ್.ಅಶೋಕ್ ಅವರು, 'ಒಂದು ಸಮುದಾಯದ ಓಲೈಕೆ ಮಾಡಲು ಗೋಮಾಂಸ ಸೇವಿಸುತ್ತೇನೆ ಎಂದು ಮುಖ್ಯಮಂತ್ರಿಗಳು ಹೇಳಿಕೆ ಕೊಟ್ಟಿದ್ದಾರೆ. ಈ ಮೂಲಕ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ' ಎಂದು ದೂರಿದರು. ['ನಾನು ಬೀಫ್ ತಿನ್ನುತ್ತೀನಿ ಎಂದು ಹೇಳಿಲ್ಲ': ಸಿದ್ದರಾಮಯ್ಯ]
'ಮುಖ್ಯಮಂತ್ರಿಗಳು ತಮ್ಮ ಹೇಳಿಕೆ ಮೂಲಕ ಬಹುಸಂಖ್ಯಾತ ಸಮುದಾಯದ ಭಾವನೆಗಳಿಗೆ ಧಕ್ಕೆ ಮಾಡಿದ್ದಾರೆ. ಅವರು ನೀಡಿರುವ ಹೇಳಿಕೆ ಅವರ ಸ್ಥಾನಕ್ಕೆ ಘನತೆ ತರುವಂಥದ್ದಲ್ಲ. ಮುಖ್ಯಮಂತ್ರಿಗಳು ತಮ್ಮ ಆಹಾರ ಪದ್ಧತಿಯನ್ನು ಮನೆಯಲ್ಲಿ ಇಟ್ಟುಕೊಳ್ಳಲಿ. ಅದನ್ನು ಬಹಿರಂಗವಾಗಿ ಹೇಳಿಕೊಳ್ಳುವುದು ಸರಿಯಲ್ಲ' ಎಂದರು.
ಸಿದ್ದರಾಮಯ್ಯ ಏನು ಹೇಳಿದ್ದರು? : ಬೆಂಗಳೂರಿನ ಟೌನ್ ಹಾಲ್ನಲ್ಲಿ ಗುರುವಾರ ನಡೆದ ಯುವ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ ಅವರು 'ಗೋಮಾಂಸ ತಿನ್ನಬೇಕೆನಿಸಿದರೆ ತಿನ್ನುತ್ತೇನೆ. ಇದನ್ನು ತಡೆಯಲು ನೀವು ಯಾರು?. ನಾನು ಇದುವರೆಗೆ ಗೋಮಾಂಸ ತಿಂದಿಲ್ಲ. ಗೋಮಾಂಸ ತಿನ್ನಬೇಕೆನಿಸಿದರೆ ತಿನ್ನುತ್ತೇನೆ' ಎಂದು ಹೇಳಿದ್ದರು.