ಈಶ್ವರಪ್ಪನ ಮೂಲೆಗೆ ತಳ್ಳಿ ಒಗ್ಗೂಡಿದ ಬಿಜೆಪಿ ನಾಯಕರು
ಬೆಂಗಳೂರು, ಜುಲೈ 02 : ಕರ್ನಾಟಕ ಬಿಜೆಪಿ ಭಿನ್ನಮತ ಅಂತಿಮ ಘಟಕ್ಕೆ ಬಂದು ತಲುಪಿದ್ದು, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಏಕಾಂಗಿಯಾಗಿದ್ದಾರೆ. ಭಿನ್ನಮತೀಯ ಚಟುವಟಿಕೆ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ ನೀಡಿದರು.
ಕರ್ನಾಟಕ
ಬಿಜೆಪಿ
ಕಚೇರಿಯಲ್ಲಿ
ಶನಿವಾರ
ಸಂಸದರು,
ಶಾಸಕರು
ಮತ್ತು
ಜಿಲ್ಲಾಧ್ಯಕ್ಷರ
ಸಭೆ
ನಡೆಯಿತು.
ಪಕ್ಷದಲ್ಲಿನ
ಭಿನ್ನಮತದ
ಚಟುವಟಿಕೆ
ಹಿನ್ನಲೆಯಲ್ಲಿ
ಬಿ.ಎಸ್.ಯಡಿಯೂರಪ್ಪ
ಅವರೇ
ಈ
ಸಭೆ
ಕರೆದಿದ್ದರು.
ಕೆ.ಎಸ್.ಈಶ್ವರಪ್ಪ
ಅವರು
ಸಭೆಗೆ
ಗೈರಾಗಿದ್ದರು.
[ದೆಹಲಿಗೆ
ಹೊರಟ
ಬಿಜೆಪಿ
ಅತೃಪ್ತ
ನಾಯಕರು?]
ಸಭೆಯಲ್ಲಿ ಮಾತನಾಡಿದ ಯಡಿಯೂರಪ್ಪ ಅವರು, 'ಭಿನ್ನಮತೀಯ ಚಟುವಟಿಕೆ ನಡೆಸುವ ನಾಯಕರು ಎಷ್ಟೇ ದೊಡ್ಡವರಾಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಪಕ್ಷದ ವೇದಿಕೆಯಲ್ಲಿ ಚರ್ಚಿಸಬೇಕಾದ ವಿಚಾರಗಳ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡುವುದನ್ನು ಸಹಿಸುವುದಿಲ್ಲ' ಎಂದು ಹೇಳಿದರು. [ರಾಜ್ಯ ಬಿಜೆಪಿಯಲ್ಲಿನ ಭಿನ್ನಮತ ಎಲ್ಲಿಗೆ ಬಂತು?]
ಕೆಲಸ
ಮುಗಿಸಿಕೊಳ್ಳಿ
:
'ಜುಲೈ
4ರಿಂದ
ವಿಧಾನ
ಮಂಡಲ
ಅಧಿವೇಶನ
ಆರಂಭವಾಗಲಿದೆ.
ಅದಕ್ಕೂ
ಮುನ್ನ
ಕ್ಷೇತ್ರದ
ಕೆಲಸಗಳನ್ನು
ಮುಗಿಸಿಕೊಳ್ಳಿ.
ಎಲ್ಲಾ
ಶಾಸಕರು
ಕಲಾಪದಲ್ಲಿ
ಪಾಲ್ಗೊಂಡು
ಸರ್ಕಾರ
ವಿರುದ್ಧ
ಹೋರಾಟ
ಮಾಡಬೇಕು'
ಎಂದು
ಸೂಚನೆ
ನೀಡಿದರು.
[ಶೋಭಾ
ಕರಂದ್ಲಾಜೆ
ನೋಡಿದ್ರೆ
ಸಿಟಿ
ರವಿ
ಸಿಟ್ಟಾಗ್ತಾರೆ
ಏಕೆ?]
ಸಭೆಯಲ್ಲಿ ಪಾಲ್ಗೊಂಡಿದ್ದ ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ಅವರು, 'ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ಕಿತ್ತೊಗೆದು ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಬೇಕಾಗಿದೆ. ರಾಜ್ಯ ಸರ್ಕಾರದ ವೈಫಲ್ಯವನ್ನು ಜಿಲ್ಲಾಧ್ಯಕ್ಷರು ಮನೆ-ಮನೆಗೆ ತಲುಪಿಸುವ ಕಾರ್ಯವನ್ನು ಮಾಡಬೇಕು' ಎಂದು ಕರೆ ನೀಡಿದರು.
ರಾಜ್ಯ
ಬಿಜೆಪಿ
ಉಸ್ತುವಾರಿ
ಮುರುಳೀಧರ್
ರಾವ್,
ವಿಧಾನಸಭೆಯ
ವಿರೋಧ
ಪಕ್ಷದ
ನಾಯಕ
ಜಗದೀಶ್
ಶೆಟ್ಟರ್,
ಆರ್.
ಅಶೋಕ್,
ಶೋಭಾ
ಕರಂದ್ಲಾಜೆ,
ಸಿ.ಟಿ.
ರವಿ,
ವಿಧಾನ
ಪರಿಷತ್ನ
ಪ್ರತಿಪಕ್ಷದ
ಉಪನಾಯಕ
ಕೆ.ಬಿ.
ಶಾಣಪ್ಪ
ಮುಂತಾದವರು
ಸಭೆಯಲ್ಲಿ
ಪಾಲ್ಗೊಂಡಿದ್ದರು.