ಕನ್ನಡದ ಸಿರಿವಂತಿಕೆಗೆ ಹೊಸ ಸೇರ್ಪಡೆ "ಬಂಬಯಿಯಾ ಕನ್ನಡ": ರಾಜಾರಾಂ ತಲ್ಲೂರು ಬರಹ
ಕನ್ನಡದ ಸಿರಿವಂತಿಕೆಗೆ ಹೊಸ ಸೇರ್ಪಡೆ "ಬಂಬಯಿಯಾ ಕನ್ನಡ" - ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರ ಬರಹ ಇಲ್ಲಿದೆ.
ಈ "ಬಿಗ್ ಬಾಸ್" ರಿಯಾಲಿಟಿ ಶೋ ಮುಗಿದ ಬಳಿಕ ಹೊರಬಂದಿರುವ ರನ್ನರ್ ಅಪ್, ನಮ್ಮೂರು ಸಮೀಪದ ರಕ್ಷಿತಾ ಶೆಟ್ಟಿ ಅವರ ಕನ್ನಡ ಈಗ ಏಕಾಏಕಿ "ಪಾನ್ ಕರ್ನಾಟಕ" ಪ್ರಸಿದ್ಧಿ ಪಡೆದಿದೆ. ಕರಾವಳಿಯ ಈ ಭಾಗದವರಿಗೆ ಇದೇನೂ ಹೊಸ ಕನ್ನಡ ಅಲ್ಲ.
ತುಳು ಮನೆಮಾತಾಗಿರುವ, ಕನ್ನಡ ವ್ಯಾವಹಾರಿಕ ಭಾಷೆ ಆಗಿರುವ ಕುಟುಂಬಗಳು ಮುಂಬಯಿಗೆ ಹೋಗಿ ನೆಲೆಸಿ, ಅಲ್ಲಿ ಶ್ರಮದ ದುಡಿಮೆಯ ಜೊತೆಗೆ ತಮ್ಮ ಭಾಷೆಗೆ ಹದವಾದ ಮರಾಠಿ, ಹಿಂದಿ, ಗುಜರಾತಿ, ರಾಜಸ್ಥಾನಿ ಭಾಷೆಗಳನ್ನು ರುಚಿಗೆ ತಕ್ಕಂತೆ (ಅಂದರೆ ಅಗತ್ಯಕ್ಕೆ ತಕ್ಕಂತೆ) ಸೇರಿಸಿಕೊಂಡು, ಜೊತೆಗೆ ಅಲ್ಲಿನ ಇಂಗ್ಲಿಷ್ ಮೀಡಿಯಂ ಶಿಕ್ಷಣದ ಮೇಲೋಗರ ಎರೆದುಕೊಂಡು ಕಟ್ಟಿಕೊಂಡಿರುವ ಕನ್ನಡವೇ "ಬಂಬಯಿಯಾ ಕನ್ನಡ." ಈ ಕನ್ನಡ ಬಳಸಿದ ಹಲವು ರೀಲ್ಸ್ಗಳೂ ಈ ಭಾಗದಲ್ಲಿ ವೈರಲ್ ಆದದ್ದಿದೆ.

ನನ್ನ ಶಾಲಾ ದಿನಗಳಲ್ಲಿ, ಹಿಂದಿ ಎಂದರೆ ಈ ಬಂಬಯಿಯಾ ಹಿಂದಿ ಎಂದೇ ತಿಳಿದಿದ್ದವನು ನಾನು. ಊರಲ್ಲಿ ಹಿಂದಿ ಮಾತಾಡುವವರು (ಮುಂಬಯಿಗೆ ವಲಸೆ ಹೋಗಿರುವವರು) ಮತ್ತು ಹಿಂದಿ ಚಿತ್ರರಂಗಗಳನ್ನು ಗಮನಿಸಿ ಗೊತ್ತಿರುವ ಎಲ್ಲರಿಗೂ ಇದು ಬಹಳ ಸಹಜ. ಅಪುನ್, ಆಯೇಲಾ-ಗಯೇಲಾ ಎಂದೆಲ್ಲ ಬಿಂದಾಸ್ ಹಿಂದಿ ಮಾತನಾಡಿಕೊಂಡಿದ್ದ ನನಗೆ ಪಿ.ಯು. ವೇಳೆಗೆ ಹಿಂದಿ ಉಪನ್ಯಾಸಕಿ ಆಗಿ ಬಂದವರು ಉತ್ತರ ಪ್ರದೇಶ ಮೂಲದ, ಹಿಂದಿ ಮನೆಮಾತಿನವರು.
ಅದ್ಭುತವಾದ ಅವರ ಉರ್ದು ಮಿಶ್ರಿತ - ಹಿಂದೂಸ್ಥಾನಿ; ಅವರ ಬಾಯಿಯಿಂದ ಕೇಳಿದ ಮತ್ತು ಮೂಲಕ್ಕೆ ಹತ್ತಿರದ ಉಚ್ಛಾರಗಳ ಸಹಿತ ಸೂರದಾಸರ ಬೃಜ್ಭಾಷಾ, ಕಬೀರರ ಸಾಧುಕ್ಕಡೀ (ಪಂಚಮೇಳ), ಹರಿವಂಶ್ ರಾಯ್ ಬಚ್ಚನ್, ಮಹಾದೇವೀ ವರ್ಮಾ ಅವರ ಕಢೀಬೋಲಿ ಅಲ್ಲದೇ ಅವಧೀ, ಹರ್ಯಾಣವೀ ಎಂದೆಲ್ಲ ಹಿಂದಿಯ ಬಗೆಗಳನ್ನು ಕೇಳಿದ ಬಳಿಕ ನಮ್ಮ ಬಂಬಯಿಯಾ ಹಿಂದಿ ಎಷ್ಟು ಸಜ್ಜಿಗೆ-ಬಜೀಲ್ ಎಂದು ಅರ್ಥ ಆಗತೊಡಗಿತ್ತು. ಹಿಂದಿ-ಉರ್ದು ಸಾಹಿತ್ಯದಲ್ಲಿ ಸಣ್ಣ ಆಸಕ್ತಿ ಹುಟ್ಟಲು ಈ ಘಟನೆ ಕಾರಣ ಆಯ್ತು.
ರಕ್ಷಿತಾ ಶೆಟ್ಟಿ ಅವರ ಈ ಬಂಬಯಿಯಾ ಕನ್ನಡ ಅವರನ್ನು ರಿಯಾಲಿಟಿ ಷೋನಲ್ಲಿ ಗೆಲ್ಲಿಸಿದಂತಿದೆ. ಜೊತೆಗೆ ಮುಂಬಯಿಯಲ್ಲಿ ಶ್ರಮ ಜೀವನ ತಂದುಕೊಡುವ ಅನುಭವಗಳು ಅಪಾರ. ಅವು ಆ ಬಿಗ್ಬಾಸ್ ಶೋದಲ್ಲಿ ಆಕೆಗೆ ಉಳಿದ ಸ್ಪರ್ಧಿಗಳೊಂದಿಗೆ ಸಮರ್ಥವಾಗಿ ಸ್ಪರ್ಧಿಸಲು ಅನುವು ಮಾಡಿಕೊಟ್ಟಿತು ಅನ್ನಿಸುತ್ತದೆ. ಒಟ್ಟಿನಲ್ಲಿ ಕರ್ನಾಟಕದ ವೈವಿಧ್ಯಮಯ ಕನ್ನಡಂಗಳಿಗೆ "ಬಂಬಯಿಯಾ ಕನ್ನಡ" ಈಗ ಅಧಿಕೃತವಾಗಿ ಸೇರ್ಪಡೆಗೊಂಡಿದೆ.
ಅಂದಹಾಗೆ, ನಾನು ಕಳೆದ 15ವರ್ಷಗಳಿಂದ ಸಾಧ್ಯವಾದಾಗಲೆಲ್ಲ ನೋಡುವ ಏಕೈಕ ರಿಯಾಲಿಟಿ ಷೋ ಎಂದರೆ, "ಇಂಡಿಯನ್ ಐಡಲ್ಸ್." ಶನಿವಾರ -ಭಾನುವಾರ ಅದನ್ನು ನೋಡುವ ಮಧ್ಯದಲ್ಲಿ ಜಾಹೀರಾತುಗಳಿರುವಾಗ ಮತ್ತು ಇಂಟರೆಸ್ಟಿಂಗ್ ಅನ್ನಿಸಿದರೆ, ಕೆಲವೊಮ್ಮೆ ಕನ್ನಡದ ನಟ ಸುದೀಪ್ ಅವರು ನಡೆಸಿಕೊಡುವ ವಾರಾಂತ್ಯದ ಪಂಚಾತಿಕೆ ಕಾರ್ಯಕ್ರಮವನ್ನು ನೋಡುವುದಿದೆ. ಅಲ್ಲಿ ಇಡೀ ದೇಹ ಬಳಸಿ ಕನ್ನಡದಲ್ಲಿ ಮಾತನಾಡುವ ಈ ಹುಡುಗಿಯ ಕಮ್ಯುನಿಕೇಷನ್ ಶ್ರಮ ಕುತೂಹಲಕರ ಅನ್ನಿಸಿತ್ತು.
ರಾಜಾರಾಂ ತಲ್ಲೂರು, ಹಿರಿಯ ಪತ್ರಕರ್ತ
-
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ












Click it and Unblock the Notifications