ಭಾರತ್ ಜೋಡೋ ಯಾತ್ರೆ: ಪ್ರತಿ ಎಂಎಲ್ಎಗೆ 5000 ಜನರ ಸೇರಿಸಲು ಟಾರ್ಗೆಟ್
ಬೆಂಗಳೂರು, ಸೆಪ್ಟೆಂಬರ್ 02: ಕರ್ನಾಟಕದಲ್ಲಿ 21 ದಿನಗಳ ಕಾಲ ನಡೆಯಲಿರುವ ಮಹತ್ವಾಕಾಂಕ್ಷೆಯ 'ಭಾರತ್ ಜೋಡೋ' ಮೆರವಣಿಗೆಯಲ್ಲಿ ಭಾಗವಹಿಸಲು ಪಕ್ಷದ ಪ್ರತಿ ಶಾಸಕರಿಗೆ 5,000 ಜನರನ್ನು ಸಜ್ಜುಗೊಳಿಸಲು ತಿಳಿಸಲಾಗಿದೆ ಎಂದು ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಭಾರತ ಜೋಡಿಸಿ (ಭಾರತ್ ಜೋಡೋ) ಮೆರವಣಿಗೆ ಕುರಿತು ಚರ್ಚಿಸಲು ನಡೆದ ಪದಾಧಿಕಾರಿಗಳ ಸಭೆಯ ನಂತರ ಶಿವಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿದರು. ಸಭೆಯಲ್ಲಿ ಹಿರಿಯ ನಾಯಕರಾದ ದಿಗ್ವಿಜಯ್ ಸಿಂಗ್, ಜೈರಾಮ್ ರಮೇಶ್, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಮತ್ತಿತರರು ಉಪಸ್ಥಿತರಿದ್ದರು.
ಬಿಜೆಪಿಗೆ ಮತ್ತೊಂದು ಠಕ್ಕರ್ ಕೊಡಲು ಕಾಂಗ್ರೆಸ್ ಭರ್ಜರಿ ಸಿದ್ದತೆ
ಕನ್ನಡ ಪರ ಸಂಘಟನೆಗಳು, ಚಿತ್ರರಂಗದ ಗಣ್ಯರು, ಸಾಹಿತಿಗಳು, ಚಿಂತಕರು, ರೈತರು ಸೇರಿದಂತೆ ಇತರರನ್ನು ಆಹ್ವಾನಿಸಲಾಗಿದೆ ಎಂದ ಶಿವಕುಮಾರ್, ಮೆರವಣಿಗೆಯಲ್ಲಿ ಭಾಗವಹಿಸಲು ನಾಗರಿಕರು ನೋಂದಣಿ ಮಾಡಿಕೊಳ್ಳಲು ಪಕ್ಷವು ಅವಕಾಶ ನೀಡುತ್ತದೆ ಎಂದು ಹೇಳಿದರು.
ಸಮಾರಂಭದಲ್ಲಿ ಮಾತನಾಡಿದ ಜೈರಾಮ್ ರಮೇಶ್, ಭಾರತ್ ಜೋಡೋ ಮೆರವಣಿಗೆಯನ್ನು ವಿರೋಧಿಗಳು ಮತ್ತು ಟೀಕಾಕಾರರಿಂದ ದುರ್ಬಲಗೊಳಿಸಲು ಸಾಧ್ಯವಿಲ್ಲ. ಪಕ್ಷ ಬಿಡುವವರು ಹೊರಡಬಹುದು. ಕೆಲವರು ಈಗಾಗಲೇ ಡಿಪಾರ್ಚರ್ ಲಾಂಜ್ನಲ್ಲಿದ್ದಾರೆ. ಹಾಗಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹೋಗಲು ಬಯಸುವವರು ಹೋಗಬಹುದು ಮತ್ತು ಮಾತನಾಡುವವರು ಮಾತನಾಡಬಹುದು. ಆದರೆ, ಯಾವುದೇ ಕಾರಣಕ್ಕೂ ಮೆರವಣಿಗೆ ನಿಲ್ಲುವುದಿಲ್ಲ ಎಂದು ಅವರು ಹೇಳಿದರು.
ಕರ್ನಾಟಕದಲ್ಲಿ 21 ದಿನ ಪಾದಯಾತ್ರೆ
ಭಾರತ್ ಜೋಡೋ ಯಾತ್ರೆ ಸೆಪ್ಟೆಂಬರ್ 7 ರಿಂದ 12 ರಾಜ್ಯಗಳಲ್ಲಿ 3,570 ಕಿ.ಮೀ ಕ್ರಮಿಸಲಿದೆ. ತಮಿಳುನಾಡಿನಲ್ಲಿ ಮೂರು ದಿನ ಹಾಗೂ ಕೇರಳದಲ್ಲಿ 18 ದಿನ, ಕರ್ನಾಟಕ 21 ದಿನ, ತೆಲಂಗಾಣದಲ್ಲಿ 21 ದಿನ, ಆಂಧ್ರಪ್ರದೇಶದಲ್ಲಿ 3 ದಿನ, ಮಹಾರಾಷ್ಟ್ರದಲ್ಲಿ 16 ದಿನ, ಮಧ್ಯಪ್ರದೇಶದಲ್ಲಿ 16 ದಿನ, ರಾಜಸ್ಥಾನದಲ್ಲಿ 21 ದಿನ, ಉತ್ತರ ಪ್ರದೇಶದಲ್ಲಿ 3 ದಿನ, ಹರಿಯಾಣದಲ್ಲಿ 2 ದಿನ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ 2 ದಿನ ಯಾತ್ರೆ ನಡೆಯಲಿದೆ. ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಮೆರವಣಿಗೆ ನಡೆಯುವುದಿಲ್ಲ ಎಂದು ಅವರು ಹೇಳಿದರು.
ಕಾಂಗ್ರೆಸ್ ಬಣ ರಾಜಕೀಯ ಒಪ್ಪಿಕೊಂಡು, ಸಿದ್ದರಾಮೋತ್ಸವದಲ್ಲಿ ಇತಿಶ್ರೀ ಹಾಡಿದ ರಾಹುಲ್ ಗಾಂಧಿ
ಜಾತ್ಯತೀತತೆಯ ಸಿದ್ಧಾಂತದ ಮೇಲೆ ಪಾದಯಾತ್ರೆ
"ಇದು ಮನ್ ಕಿ ಬಾತ್ ಆಗುವುದಿಲ್ಲ. ಇದು ಜನತಾ ಕಿ ಚಿಂತನ್ ಯಾತ್ರೆ ಆಗಿರುತ್ತದೆ. ಪ್ರಧಾನಿ ವಿರುದ್ಧ ಭಾಷಣಗಳು ಅಥವಾ ಘೋಷಣೆಗಳು ಇರುವುದಿಲ್ಲ. ಇದು ಜನರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಮೌನ ಮೆರವಣಿಗೆಯಾಗಲಿದೆ ಎಂದರು. ಕಾಂಗ್ರೆಸ್ನ ಜಾತ್ಯತೀತತೆಯ ಸಿದ್ಧಾಂತದ ಮೇಲೆ ಪಾದಯಾತ್ರೆ ನಡೆಯಲಿದೆ. ಬಿಜೆಪಿಯವರು ಕೋಮುವಾದಿ ರಾಜಕಾರಣ ಮಾಡುತ್ತಿದ್ದಾರೆ. ಆದರೆ ನಮ್ಮದು ಅಭಿವೃದ್ಧಿಗಾಗಿ ಎಲ್ಲರನ್ನೂ ಒಳಗೊಳ್ಳುವ ಸಿದ್ಧಾಂತ ಎಂದು ಭಾರತ್ ಜೋಡೋ ಯೋಜನಾ ಗುಂಪಿನ ಮುಖ್ಯಸ್ಥ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
ಪ್ರತಿದಿನ ಮಧ್ಯಾಹ್ನ 2 ಗಂಟೆಗೆ ಸಂವಾದ
ಪ್ರತಿದಿನ ಬೆಳಗ್ಗೆ 7 ಗಂಟೆಗೆ ಮೆರವಣಿಗೆ ಆರಂಭವಾಗಲಿದೆ. ಮಧ್ಯಾಹ್ನ 2 ಗಂಟೆಗೆ ರಾಹುಲ್ ಗಾಂಧಿ ವಿವಿಧ ಜನರೊಂದಿಗೆ ಸಂವಾದ ನಡೆಸಲಿದ್ದಾರೆ. 3.30 ಕ್ಕೆ ಪಾದಯಾತ್ರೆ ಪುನರಾರಂಭವಾಗಲಿದೆ. ಪಾದಯಾತ್ರೆ ಅಗಾಧವಾಗಿ ಯಶಸ್ವಿಯಾಗಲಿದೆ ಎಂದು ಡಿಕೆಶಿ ಹೇಳಿದರು. ಈ ಮಧ್ಯೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು 148 ದಿನಗಳ ಭಾರತ್ ಜೋಡೋ ಯಾತ್ರೆಯಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಯಲಿದ್ದು, ರಾತ್ರಿ ಶಿಪ್ಪಿಂಗ್ ಕಂಟೈನರ್ ಕ್ಯಾಬಿನ್ನಲ್ಲಿ ಮಲಗಲಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.
3500 ಕಿಮೀ ಯಾತ್ರೆ ಸೆಪ್ಟೆಂಬರ್ 7 ಆರಂಭ
ಕಂಟೈನರ್ ಕ್ಯಾಬಿನ್ಗಳು ಸೆಪ್ಟೆಂಬರ್ 5 ರೊಳಗೆ ಕನ್ಯಾಕುಮಾರಿಗೆ ಆಗಮಿಸುವ ನಿರೀಕ್ಷೆಯಿದೆ. 3500 ಕಿಮೀ ಯಾತ್ರೆಯನ್ನು ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಿಂದ ಬೃಹತ್ ಸಾರ್ವಜನಿಕ ಯಾತ್ರೆಯೊಂದಿಗೆ ಚಾಲನೆ ಮಾಡಲಾಗುತ್ತದೆ. 2014ರಲ್ಲಿ ಸೋಲಿನ ನಂತರ ಅಧೋಗತಿಯಲ್ಲಿರುವ ಪಕ್ಷವು 2024 ರ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ಬೃಹತ್ ಸಾಮೂಹಿಕ ಸಂಪರ್ಕದ ಭಾಗವಾಗಿ ಮೆರವಣಿಗೆಯನ್ನು ಯೋಜಿಸಿದೆ.