ವಿಧಾನಸೌಧ, ವಿಕಾಸಸೌಧದಲ್ಲಿ ನಿಮ್ಮ ಸಚಿವರ ರೂಮ್ ಸಂಖ್ಯೆ ಹೀಗಿದೆ
ಬೆಂಗಳೂರು, ಆಗಸ್ಟ್ 05: ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರದಂದು ಸರಳವಾಗಿ ಸಂಪುಟ ವಿಸ್ತರಣೆ ಮಾಡಿದ್ದಾರೆ. ಆಗಸ್ಟ್ 4ರಂದು ಪ್ರಮಾಣ ವಚನ ಸ್ವೀಕರಿಸಿದ 29 ಕ್ಯಾಬಿನೆಟ್ ಸಚಿವರುಗಳಿಗೆ ವಿಧಾನಸೌಧ ಹಾಗೂ ವಿಕಾಸಸೌಧದಲ್ಲಿ ಕೊಠಡಿಗಳನ್ನು ಹಂಚಿಕೆ ಮಾಡಲಾಗಿದೆ.
ಬಹುತೇಕ ಎಲ್ಲಾ ಸಚಿವರುಗಳು ಸಾಂಪ್ರದಾಯಿಕ ಪೂಜೆ ಪುನಸ್ಕಾರ ನಡೆಸಿ ನಂತರ ತಮ್ಮ ಕೊಠಡಿ ಪ್ರವೇಶಿಸಿ ಕುರ್ಚಿ ಏರಲಿದ್ದಾರೆ. ಸದ್ಯ ಕೋವಿಡ್ 19 ಮಾರ್ಗಸೂಚಿ ಜಾರಿಯಲ್ಲಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಹೋಮ, ಪೂಜೆಗೆ ಆಸ್ಪದ ನೀಡುವುದು ಕಡಿಮೆ ಎನ್ನಬಹುದು.
ಸದ್ಯಕ್ಕೆ ಎಲ್ಲಾ ಸಚಿವರು ಪ್ರವಾಹ ಪೀಡಿತ ಜಿಲ್ಲೆಗಳ ಪ್ರವಾಸಕ್ಕೆ ತೆರಳಬೇಕಿದ್ದು, ನೆರೆ ಸಂತ್ರಸ್ತರ ನೋವಿಗೆ ಸ್ಪಂದಿಸಬೇಕಿದೆ. ಇದಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿಯನ್ನು ಬೊಮ್ಮಾಯಿ ನಿನ್ನೆಯೇ ಪ್ರಕಟಿಸಿದ್ದಾರೆ. ಇದೆಲ್ಲದರ ನಡುವೆ ಸಚಿವ ಸಂಪುಟದಲ್ಲಿ ಯಾರಿಗೆ ಯಾವ ಖಾತೆ ನೀಡುವುದು ಎಂಬುದರ ಬಗ್ಗೆ ಕೂಡಾ ಸಮಾನಾಂತರವಾಗಿ ಚರ್ಚೆ ನಡೆದಿದೆ.
ನೂತನ ಸಚಿವರುಗಳಿಗೆ ಖಾತೆ ಹಂಚಿಕೆಯಾಗುವ ಮುನ್ನ ವಿಕಾಸಸೌಧ ಹಾಗೂ ವಿಧಾನಸೌಧದಲ್ಲಿ ಕೊಠಡಿಗಳನ್ನು ಹಂಚಿಕೆ ಮಾಡಿ ಮುಖ್ಯಮಂತ್ರಿಗಳು ಆದೇಶ(ಸಂಖ್ಯೆ ಸಿಆಸುಇ 211 ಡಿಬಿಎಂ 2021) ಹೊರಡಿಸಿದ್ದಾರೆ. ನೂತನ ಸಚಿವರುಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಕೊಠಡಿಗಳನ್ನು ಹಂಚಿಕೆ ಮಾಡುವಂತೆ ಸೂಚಿಸಲಾಗಿದೆ.
ಹೊಸ ಅನುಭವ, ಹೊಸ ಕೊಠಡಿ:
ಬೊಮ್ಮಾಯಿ ಸಂಪುಟದ 6 ಮಂದಿ ಹೊಸ ಸಚಿವರುಗಳಿಗೆ ಸಚಿವರಾಗಿ ಹೊಸ ಅನುಭವ, ಹೊಸ ಕೊಠಡಿ ಲಭ್ಯವಾಗಲಿದೆ. ಬೊಮ್ಮಾಯಿ ಸಂಪುಟದಲ್ಲಿ ಪ್ರಮುಖವಾಗಿ ಮುಂಬರುವ ಬಿಬಿಎಂಪಿ ಚುನಾವಣೆ ಮೇಲೆ ಬಿಜೆಪಿ ಕಣ್ಣಿರಿಸಿಕೊಂಡು ಬೆಂಗಳೂರಿನ ಶಾಸಕರಿಗೆ ಮಣೆ ಹಾಕಲಾಗಿದೆ. 2023ರ ವಿಧಾನಸಭೆ ಚುನಾವಣೆಗೆ ಸಿದ್ಧತೆ ಆರಂಭವಾಗಿದ್ದು, ಜಾತಿವಾರು ಲೆಕ್ಕಾಚಾರದಂತೆ ಕೂಡಾ ಲಿಂಗಾಯತ, ದಲಿತ, ಹಿಂದುಳಿತ ವರ್ಗಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗಿದೆ.

ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದ ಹಲವರು ತಾವು ಈ ಹಿಂದೆ ಪಡೆದಿದ್ದ ಕೊಠಡಿಗಳನ್ನೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಹೊಸ ಸಚಿವರುಗಳಿಗೆ ವಿಕಾಸಸೌಧದಲ್ಲಿ ಕೊಠಡಿಯನ್ನು ಕಲ್ಪಿಸಲಾಗಿದೆ. ಈಶ್ವರಪ್ಪ ಅವರು ತಮ್ಮ ನೆಚ್ಚಿನ ಕೊಠಡಿ ಸಂಖ್ಯೆಯನ್ನು ಬದಲಾಯಿಸಿದ್ದಾರೆ. ವಿಧಾನಸೌಧದ 329-329ಎ ರೂಮ್ ಹೊಂದಿದ್ದ ಕೆಎಸ್ ಈಶ್ವರಪ್ಪ ಅವರು ಈ ಬಾರಿ 314 ಸಂಖ್ಯೆಗೆ ಪ್ರವೇಶ ಪಡೆದುಕೊಳ್ಳುತ್ತಿದ್ದಾರೆ.
ಮಾಜಿ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಅವರಿದ್ದ ಕೊಠಡಿಯನ್ನು ಹೊಸ ಸಚಿವ ಬಿ.ಸಿ ನಾಗೇಶ್ ಅವರಿಗೆ ಹಂಚಿಕೆ ಮಾಡಲಾಗಿದೆ.ಸಚಿವ ಸ್ಥಾನ ತೊರೆದ ಸಿಟಿ ರವಿ ಅವರಿದ್ದ ಕೊಠಡಿಯನ್ನು ಅವರ ಆಪ್ತ ಸುನಿಲ್ ಕುಮಾರ್ ಅವರಿಗೆ ನೀಡಲಾಗಿದೆ. ಈ ಹಿಂದಿನ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದಾಗ ಬಸವರಾಜ ಬೊಮ್ಮಾಯಿ ಹೊಂದಿದ್ದ ಕೊಠಡಿ ವಿ ಸೋಮಣ್ಣ ಅವರಿಗೆ ದಕ್ಕಿದೆ. ಎಚ್ ನಾಗೇಶ್ ಅವರಿದ್ದ ರೂಮ್ ಶಂಕರ್ ಪಾಟೀಲರಿಗೆ ಸಿಕ್ಕಿದೆ. ಮಿಕ್ಕಂತೆ ಯಾರಿಗೆ ಯಾವ ಕೊಠಡಿ ಎಂಬುದನ್ನು ಕೋಷ್ಟಕದಲ್ಲಿ ನೋಡಬಹುದು.
| ಕ್ರಮ ಸಂಖ್ಯೆ | ಬೊಮ್ಮಾಯಿ ಸಂಪುಟದ ಸಚಿವರ ಹೆಸರು | ಕೊಠಡಿ ಸಂಖ್ಯೆ |
| 01 | ಗೋವಿಂದ ಎಂ ಕಾರಜೋಳ | 340-340ಎ, 341 ವಿಧಾನಸೌಧ |
| 02 | ಡಾ. ಸಿ.ಎಸ್ ಅಶ್ವಥ ನಾರಾಯಣ | 242-243, ವಿಕಾಸಸೌಧ |
| 03 | ಅರಗ ಜ್ಞಾನೇಂದ್ರ | 38-39, ವಿಕಾಸಸೌಧ |
| 04 | ಕೆ.ಎಸ್ ಈಶ್ವರಪ್ಪ | 314-314ಎ, ವಿಧಾನಸೌಧ |
| 05 | ಆರ್. ಅಶೋಕ | 317-317ಎ, ವಿಧಾನಸೌಧ |
| 06 | ಉಮೇಶ್ ಕತ್ತಿ | 329-329ಎ, ವಿಧಾನಸೌಧ |
| 07 | ಬಿ. ಶ್ರೀರಾಮುಲು | 328-328ಎ, ವಿಧಾನಸೌಧ |
| 08 | ಬಿ. ಸಿ ನಾಗೇಶ್ | 262-262ಎ, ವಿಧಾನಸೌಧ |
| 09 | ವಿ ಸೋಮಣ್ಣ | 327,327ಎ ವಿಧಾನ ಸೌಧ |
| 10 | ಸುನಿಲ್ ಕುಮಾರ್ | 344-344ಎ, ವಿಧಾನಸೌಧ |
| 11 | ಎಸ್ ಅಂಗಾರ | 305-305ಎ, ವಿಧಾನಸೌಧ |
| 12 | ಕೋಟಾ ಶ್ರೀನಿವಾಸ ಪೂಜಾರಿ | 343-343ಎ, ವಿಧಾನಸೌಧ |
| 13 | ಜೆ. ಸಿ ಮಾಧುಸ್ವಾಮಿ | 316-316ಎ, ವಿಧಾನಸೌಧ |
| 14 | ಚಂದ್ರಕಾಂತಗೌಡ ಚೆನ್ನಪ್ಪಗೌಡ ಪಾಟೀಲ | 244-244ಎ, ವಿಕಾಸಸೌಧ |
| 15 | ಶಂಕರ್ ಬಿ, ಪಾಟೀಲ ಮುನ್ನೇನಕೊಪ್ಪ | 342-343, ವಿಕಾಸಸೌಧ |
| 16 | ಪ್ರಭು ಚೌಹಾಣ್ | 442-442ಎ ವಿಕಾಸಸೌಧ |
| 17 | ಜೊಲ್ಲೆ ಶಶಿಕಲಾ ಅಣ್ಣಾ ಸಾಹೇಬ್ | 141-142, ವಿಕಾಸಸೌಧ |
| 18 | ಆನಂದ್ ಸಿಂಗ್ | 36-37, ವಿಕಾಸಸೌಧ |
| 19 | ಆಚಾರ್ ಹಾಲಪ್ಪ ಬಸಪ್ಪ | 252-252ಎ, ವಿಧಾನಸೌಧ |
| 20 | ಕೆ. ಸಿ ನಾರಾಯಣ ಗೌಡ | 301-301ಎ, ವಿಧಾನಸೌಧ |
| 21 | ಮುರುಗೇಶ್ ನಿರಾಣಿ | 315-315ಎ, ವಿಧಾನಸೌಧ |
| 22 | ಅರೆಬೈಲು ಹೆಬ್ಬಾರ್ ಶಿವರಾಂ | 206-207, ವಿಕಾಸಸೌಧ |
| 23 | ಎಸ್. ಟಿ ಸೋಮಶೇಖರ್ | 143-146, ವಿಕಾಸಸೌಧ |
| 24 | ಬಸನಗೌಡ ಚನ್ನಬಸವನಗೌಡ ಪಾಟೀಲ್ | 406-407, ವಿಕಾಸಸೌಧ |
| 25 | ಬಿ.ಎ ಬಸವರಾಜ (ಬೈರತಿ) | 337-337ಎ, ವಿಧಾನಸೌಧ |
| 26 | ಡಾ. ಕೆ ಸುಧಾಕರ್ | 339-339ಎ, ವಿಧಾನಸೌಧ |
| 27 | ಕೆ ಗೋಪಾಲಯ್ಯ | 244-245, ವಿಧಾನಸೌಧ |
| 28 | ಎನ್ ನಾಗರಾಜ (ಎಂ.ಟಿ.ಬಿ) | 330-330ಎ, ವಿಧಾನಸೌಧ |
| 29 | ಮುನಿರತ್ನ | 344-345, ವಿಕಾಸಸೌಧ |
-
"ಬೆಂಗಳೂರು: 370 ಎಕ್ರೆ ಜಕ್ಕೂರು ವೈಮಾನಿಕ ಶಾಲೆ ಜಾಗದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ಗೆ ಪ್ಲ್ಯಾನ್'' -
'ಗ್ಯಾರಂಟಿ ಸಮಿತಿ' ಸಿಬ್ಬಂದಿ ಮಾಸಿಕ ವೇತನ ಸರ್ಕಾರದ ಮುಖ್ಯ ಕಾರ್ಯದರ್ಶಿಗಿಂತಲೂ ಹೆಚ್ಚು! ವರ್ಷಕ್ಕೆ ಕೋಟಿ ಕೋಟಿ.. -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ












Click it and Unblock the Notifications