ಬೆಂಗಳೂರು-ನಾಂದೆಡ್ ರೈಲಿಗೆ ಬೆಂಕಿ: ಉಗ್ರರ ಕೃತ್ಯ
ಬೆಂಗಳೂರು, ಡಿ.30- ಮೊನ್ನೆ ಅನಂತಪುರದ ಬಳಿ ರೈಲು ದುರಂತ ಘಟಿಸಿ 26 ಮಂದಿ ಸಜೀವವಾಗಿ ದಹನಗೊಂಡಿದ್ದು ಕೇಳಿ ಮನಸ್ಸು ಮಮ್ಮಲಮರುಗಿತ್ತು. ಛೆ! ಎಂಥಾ ಘೋರ ದುರಂತವಪ್ಪಾ ಎಂದು ಮನಸ್ಸು ವಿಹ್ವಲಗೊಂಡಿತ್ತು.
ಇದೀಗ ಘಟನೆಗೆ ಸಂಬಂಧಿಸಿದಂತೆ ಭಯಾನಕ ಸುದ್ದಿಯೊಂದು ಹೊರಬಿದ್ದಿದೆ. ಏನಪ್ಪಾ ಅಂದರೆ ಬೆಂಗಳೂರಿನಿಂದ ಮಹಾರಾಷ್ಟ್ರದ ನಾಂದೆಡ್ ಗೆ ಹೊರಟಿದ್ದ Bangalore-Nanded express ರೈಲು ಅನಂತಪುರದ ಕೊತ್ತಚೆರುವು ರೈಲ್ವೆ ನಿಲ್ದಾಣದ ಸಮೀಪ ದುರಂತಕ್ಕೀಡಾದ ಘಟನೆಯ ಹಿಂದೆ ಭಯೋತ್ಪಾದಕರ ಕೈವಾಡವಿದೆ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.

ಬೆಂಕಿಯ ಮೂಲಸ್ಥಾನ :
ಸೀಟ್ ನಂಬರ್ 7ರ ಕೆಳಗೆ 4 ಅಂಗುಲ ವಿಶಾಲದ ತೂತೊಂದು ಕಂಡುಬಂದಿದೆ. ಇದು ಸ್ಫೋಟಕ ಸಾಮಗ್ರಿಯಿಂದ ಅಥವಾ ಯಾವುದೋ ದಹ್ಯ ವಸ್ತುವಿನಿಂದ ಉಂಟಾದ ಕಂದಕ ಎಂಬುದನ್ನು ಗಮನಿಸಿದ್ದಾರೆ ಮತ್ತು ಇದೇ ಬೆಂಕಿಯ ಮೂಲಸ್ಥಾನ ಎಂದಿದ್ದಾರೆ. ಈ ಸೀಟಿನಡಿಯಿಂದ ಕಾಣಿಸಿಕೊಂಡಿರುವ ಬೆಂಕಿ ಇಡೀ ಬೋಗಿಯನ್ನು ದಹಿಸಿದೆ.
26 ದೇಹಗಳ ಪೈಕಿ 22 ದೇಹಗಳು ಬರ್ತ್ ಸೀಟುಗಳ ಮೇಲೆ ಶಯನಾವಸ್ಥೆಯಲ್ಲಿರುವಂತೆ ಕಂಡುಬಂದಿದೆ. ಆದ್ದರಿಂದ ಪ್ರಯಾಣಿಕರಿಗೆ ಎದ್ದು ಹೊರಹೋಗಲು ಅವಕಾಶವಿಲ್ಲದಂತೆ ಬೆಂಕಿ ಕ್ಷಿಪ್ರಗತಿಯಲ್ಲಿ ಹಬ್ಬಿದೆ ಎಂಬುದು ಗಮನಾರ್ಹ.
ಪ್ರಾಥಮಿಕವಾಗಿ ಭಾವಿಸಿದಂತೆ ಶಾರ್ಟ್ ಸರ್ಕ್ಯೂಟಿನಿಂದ ಸೃಷ್ಟಿಯಾದ ಬೆಂಕಿ ಇದಲ್ಲ. ಮತ್ತೋ ಒಂದು ತರ್ಕವೆಂದರೆ ಶಾರ್ಟ್ ಸರ್ಕ್ಯೂಟ್ ಸಂಭವಿದ್ದೇ ಆದರೆ ಬೆಂಕಿಯು ಬೋಗಿಯ ಮೇಲ್ಭಾಗದಿಂದ ಹರಡಿಕೊಳ್ಳಬೇಕಿತ್ತು. ಏಕೆಂದರೆ ವಿದ್ಯುತ್ ವೈರಿಂಗ್ ಬೋಗಿಯ ಮೇಲ್ಭಾಗದಲ್ಲೇ ಇರುವುದು.
ಹಾಗಂತ ಇಷ್ಟರಿಂದಲೇ ಅಗ್ನಿ ದುರಂತಕ್ಕೆ ಭಯೋತ್ಪಾದಕ ಕೃತ್ಯ ಕಾರಣ ಎನ್ನಲಾಗದು. ಇನ್ನೂ ಹೈದರಾಬಾದಿನಿಂದ ರಾಸಾಯನಿಕ ವರದಿ (chemical analysis report) ಬರಬೇಕಾಗಿದೆ. ಅದರಿಂದ ಪ್ರಕರಣಕ್ಕೆ ಮತ್ತಷ್ಟು ನಿಖರತೆ ಲಭಿಸುತ್ತದೆ.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು












Click it and Unblock the Notifications