ಬೆಂಗಳೂರು-ನಾಂದೆಡ್ ರೈಲಿಗೆ ಬೆಂಕಿ: ಉಗ್ರರ ಕೃತ್ಯ
ಬೆಂಗಳೂರು, ಡಿ.30- ಮೊನ್ನೆ ಅನಂತಪುರದ ಬಳಿ ರೈಲು ದುರಂತ ಘಟಿಸಿ 26 ಮಂದಿ ಸಜೀವವಾಗಿ ದಹನಗೊಂಡಿದ್ದು ಕೇಳಿ ಮನಸ್ಸು ಮಮ್ಮಲಮರುಗಿತ್ತು. ಛೆ! ಎಂಥಾ ಘೋರ ದುರಂತವಪ್ಪಾ ಎಂದು ಮನಸ್ಸು ವಿಹ್ವಲಗೊಂಡಿತ್ತು.
ಇದೀಗ ಘಟನೆಗೆ ಸಂಬಂಧಿಸಿದಂತೆ ಭಯಾನಕ ಸುದ್ದಿಯೊಂದು ಹೊರಬಿದ್ದಿದೆ. ಏನಪ್ಪಾ ಅಂದರೆ ಬೆಂಗಳೂರಿನಿಂದ ಮಹಾರಾಷ್ಟ್ರದ ನಾಂದೆಡ್ ಗೆ ಹೊರಟಿದ್ದ Bangalore-Nanded express ರೈಲು ಅನಂತಪುರದ ಕೊತ್ತಚೆರುವು ರೈಲ್ವೆ ನಿಲ್ದಾಣದ ಸಮೀಪ ದುರಂತಕ್ಕೀಡಾದ ಘಟನೆಯ ಹಿಂದೆ ಭಯೋತ್ಪಾದಕರ ಕೈವಾಡವಿದೆ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.

ಬೆಂಕಿಯ ಮೂಲಸ್ಥಾನ :
ಸೀಟ್ ನಂಬರ್ 7ರ ಕೆಳಗೆ 4 ಅಂಗುಲ ವಿಶಾಲದ ತೂತೊಂದು ಕಂಡುಬಂದಿದೆ. ಇದು ಸ್ಫೋಟಕ ಸಾಮಗ್ರಿಯಿಂದ ಅಥವಾ ಯಾವುದೋ ದಹ್ಯ ವಸ್ತುವಿನಿಂದ ಉಂಟಾದ ಕಂದಕ ಎಂಬುದನ್ನು ಗಮನಿಸಿದ್ದಾರೆ ಮತ್ತು ಇದೇ ಬೆಂಕಿಯ ಮೂಲಸ್ಥಾನ ಎಂದಿದ್ದಾರೆ. ಈ ಸೀಟಿನಡಿಯಿಂದ ಕಾಣಿಸಿಕೊಂಡಿರುವ ಬೆಂಕಿ ಇಡೀ ಬೋಗಿಯನ್ನು ದಹಿಸಿದೆ.
26 ದೇಹಗಳ ಪೈಕಿ 22 ದೇಹಗಳು ಬರ್ತ್ ಸೀಟುಗಳ ಮೇಲೆ ಶಯನಾವಸ್ಥೆಯಲ್ಲಿರುವಂತೆ ಕಂಡುಬಂದಿದೆ. ಆದ್ದರಿಂದ ಪ್ರಯಾಣಿಕರಿಗೆ ಎದ್ದು ಹೊರಹೋಗಲು ಅವಕಾಶವಿಲ್ಲದಂತೆ ಬೆಂಕಿ ಕ್ಷಿಪ್ರಗತಿಯಲ್ಲಿ ಹಬ್ಬಿದೆ ಎಂಬುದು ಗಮನಾರ್ಹ.
ಪ್ರಾಥಮಿಕವಾಗಿ ಭಾವಿಸಿದಂತೆ ಶಾರ್ಟ್ ಸರ್ಕ್ಯೂಟಿನಿಂದ ಸೃಷ್ಟಿಯಾದ ಬೆಂಕಿ ಇದಲ್ಲ. ಮತ್ತೋ ಒಂದು ತರ್ಕವೆಂದರೆ ಶಾರ್ಟ್ ಸರ್ಕ್ಯೂಟ್ ಸಂಭವಿದ್ದೇ ಆದರೆ ಬೆಂಕಿಯು ಬೋಗಿಯ ಮೇಲ್ಭಾಗದಿಂದ ಹರಡಿಕೊಳ್ಳಬೇಕಿತ್ತು. ಏಕೆಂದರೆ ವಿದ್ಯುತ್ ವೈರಿಂಗ್ ಬೋಗಿಯ ಮೇಲ್ಭಾಗದಲ್ಲೇ ಇರುವುದು.
ಹಾಗಂತ ಇಷ್ಟರಿಂದಲೇ ಅಗ್ನಿ ದುರಂತಕ್ಕೆ ಭಯೋತ್ಪಾದಕ ಕೃತ್ಯ ಕಾರಣ ಎನ್ನಲಾಗದು. ಇನ್ನೂ ಹೈದರಾಬಾದಿನಿಂದ ರಾಸಾಯನಿಕ ವರದಿ (chemical analysis report) ಬರಬೇಕಾಗಿದೆ. ಅದರಿಂದ ಪ್ರಕರಣಕ್ಕೆ ಮತ್ತಷ್ಟು ನಿಖರತೆ ಲಭಿಸುತ್ತದೆ.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications