ನನ್ನ ಬಗ್ಗೆ ಹೇಳಿದ್ದ ಜ್ಯೋತಿಷ್ಯ ಸುಳ್ಳಾಯಿತು : ಸಿದ್ದರಾಮಯ್ಯ
ಬೆಂಗಳೂರು, ಡಿಸೆಂಬರ್ 29 : ಕರ್ನಾಟಕ ಸರ್ಕಾರ ಮೂಢನಂಬಿಕೆ ಪ್ರತಿಬಂಧಕ ಕಾಯ್ದೆಯನ್ನು ಜಾರಿಗೆ ತರಲು ಮುಂದಾಗಿದೆ. ಟಿವಿ ವಾಹಿನಿಗಳಲ್ಲಿ ಪ್ರಸಾರವಾಗುವ ಜ್ಯೋತಿಷ್ಯ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರುವ ವಿಧೇಯಕದ ರೂಪುರೇಷೆಯನ್ನು ಸಿದ್ಧಗೊಳಿಸುತ್ತಿದೆ.
'ಟಿವಿ
ವಾಹಿನಿಗಳಲ್ಲಿ
ಪ್ರಸಾರವಾಗುವ
ಜ್ಯೋತಿಷ್ಯ
ಕಾರ್ಯಕ್ರಮಗಳಿಗೆ
ನಿರ್ಬಂಧ
ಹೇರುವ
ಚಿಂತನೆ
ಇದೆ'
ಎಂದು
ಮುಖ್ಯಮಂತ್ರಿ
ಸಿದ್ದರಾಮಯ್ಯ
ಅವರು
ಕೆಲವು
ದಿನಗಳ
ಹಿಂದೆ
ಹೇಳಿದ್ದರು.
ಕಾನೂನು
ಇಲಾಖೆ
ನಿರ್ಬಂಧದ
ಸ್ವರೂಪ
ಹೇಗಿರಬೇಕು?
ಎಂಬ
ಬಗ್ಗೆ
ರೂಪುರೇಷೆ
ಸಿದ್ಧಗೊಳಿಸುತ್ತಿದೆ.
[ಜ್ಯೋತಿಷ್ಯ
ಕಾರ್ಯಕ್ರಮ
ನಿರ್ಬಂಧ
:
ಜಯಚಂದ್ರ
ಹೇಳುವುದೇನು?]
'ಇವತ್ತು ಟಿವಿಗಳಲ್ಲಿ ಮೌಢ್ಯ ಬಿತ್ತುವಂತಹ ಜ್ಯೋತಿಷ್ಯ ಕಾರ್ಯಕ್ರಮಗಳು ಹೆಚ್ಚು ಪ್ರಸಾರವಾಗುತ್ತಿವೆ. ಈ ವ್ಯವಸ್ಥಿತ ಹುನ್ನಾರದ ಬಗ್ಗೆ ಎಚ್ಚರಿಕೆಯಿಂದ ಇರಬೇಕು' ಎಂದು ಹೇಳಿದ್ದ ಸಿದ್ದರಾಮಯ್ಯ ಅವರು ಸ್ವತಃ ತಮ್ಮ ಉದಾಹರಣೆಯನ್ನು ನೀಡಿದ್ದರು. [ಜ್ಯೋತಿಷ್ಯ ಕಾರ್ಯಕ್ರಮದ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?]
'ನಾನು ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡಾಗ ಅಲ್ಪವಧಿಯಲ್ಲಿ ಮಾತ್ರ ಅಧಿಕಾರದಲ್ಲಿರುತ್ತೇನೆ' ಎಂದು ಜ್ಯೋತಿಷಿಗಳು ಹೇಳಿದ್ದರು. 'ನನ್ನ ಬಗ್ಗೆ ಹೇಳಿದ ಎಲ್ಲಾ ಜ್ಯೋತಿಷ್ಯಗಳು ಸುಳ್ಳಾಗಿವೆ' ಎಂದು ಸಿದ್ದರಾಮಯ್ಯ ಅವತು ಜ್ಯೋತಿಷ್ಯದ ಬಗ್ಗೆ ವಿವರಣೆಯನ್ನು ನೀಡಿದ್ದಾರೆ. [ಮಠದ ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ]
ವಿವಾದವಾಗಲು ಬಿಡಬಾರದು : ಮೂಢನಂಬಿಕೆ ಪ್ರತಿಬಂಧಕ ಕಾಯ್ದೆಯನ್ನು ಜಾರಿಗೆ ತರುವಾಗ ಯಾವುದೇ ವಿವಾದ ವಾಗಬಾರದು ಎಂದು ಸರ್ಕಾರ ಎಚ್ಚರಿಕೆ ವಹಿಸುತ್ತಿದೆ. ಮೂಢನಂಬಿಕೆಗಳನ್ನು ಮಾತ್ರ ನಿಷೇಧಿಸಬೇಕು. ಇದು ಯಾವುದೇ ಧರ್ಮದ ಭಾವನೆಗೆ ಧಕ್ಕೆ ಉಂಟು ಮಾಡಬಾರದು ಎಂದು ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ವೈಕುಂಠ ಏಕಾದಶಿ ನೆನೆಪು ಮಾಡಿದ ಸಿಎಂ : ವೈಕುಂಠ ಏಕಾದಶಿ ದಿನದಂದು ಸತ್ತರೆ ಸ್ವರ್ಗ ಸಿಗುತ್ತದೆ ಎಂದು ಮಹಿಳೆಯೊಬ್ಬರು ಬೆಂಗಳೂರಿನ ಉತ್ತರಾಧಿ ಮಠದಲ್ಲಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಸಿದ್ದರಾಮಯ್ಯ ಅವರು ಪ್ರಸ್ತಾಪಿಸಿದ್ದಾರೆ. ಇಂತಹ ನಂಬಿಕೆಯನ್ನು ಬಿತ್ತುವ ಕೆಲಸವನ್ನು ತಡೆಯಬೇಕು ಎಂಬುದು ಮುಖ್ಯಮಂತ್ರಿಗಳ ನಿಲುವಾಗಿದೆ.