ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಿದ್ದ ಯಡಿಯೂರಪ್ಪ ಸರಕಾರ, ಚಂದ್ರಬಾಬು ನಾಯ್ಡು ಸಂಭ್ರಮ
ಬೆಂಗಳೂರು, ಮೇ 19: ಕರ್ನಾಟದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಬಿಜೆಪಿಯ ಯಡಿಯೂರಪ್ಪ ರಾಜೀನಾಮೆ ನೀಡುತ್ತಿದ್ದಂತೆ ದೇಶದಾದ್ಯಂತ ಕಮಲ ವಿರೋಧಿ ಪಕ್ಷಗಳು ಸಂಭ್ರಮಿಸಿವೆ.
ಯಡಿಯೂರಪ್ಪ ಸಿಎಂ ಹುದ್ದೆಯಿಂದ ಕೆಳಗಿಳಿದಿದ್ದಕ್ಕೆ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸಂಭ್ರಮ ವ್ಯಕ್ತಪಡಿಸಿದ್ದಾರೆ. 'ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವವರೆಲ್ಲಾ ಸಂತೋಷಗೊಂಡಿದ್ದಾರೆ,' ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ಯಡಿಯೂರಪ್ಪ ರಾಜಿನಾಮೆ ಬೆನ್ನಲ್ಲೇ ಟ್ವಿಟ್ಟರ್ ವಾರ್ ಆರಂಭ
"ಈ ಬೆಳವಣಿಗೆ ಬಗ್ಗೆ ಎಲ್ಲರೂ ಖುಷಿಯಾಗಿದ್ದಾರೆ. ಗಣತಂತ್ರವನ್ನೇ ಹತ್ತಿಕ್ಕಲು ಪ್ರಧಾನಿ ಮತ್ತು ಬಿಜೆಪಿ ಅಧ್ಯಕ್ಷರು ಹೊರಟಿದ್ದರು. ಭ್ರಷ್ಟರನ್ನು ಬೆಂಬಲಿಸುವ ಮೂಲಕ ಅವರು ಏನು ಸಂದೇಶ ನೀಡಲು ಹೊರಟಿದ್ದರು? ಜನಾರ್ದನ ರೆಡ್ಡಿಯನ್ನು ಬಿಜೆಪಿ ಮತ್ತೆ ಮುಂಚೂಣಿಗೆ ತಂದು ರಾಜಕಾರಣ ಮಾಡಲು ಮುಂದಾಗಿತ್ತು," ಎಂದು ನಾಯ್ಡು ಕಿಡಿಕಾರಿದ್ದಾರೆ.
Comments
narendra modi amit shah yediyurappa resignation floor test congress bjp jds karnataka election results 2018 ಚಂದ್ರಬಾಬು ನಾಯ್ಡು ನರೇಂದ್ರ ಮೋದಿ ಅಮಿತ್ ಶಾ ಯಡಿಯೂರಪ್ಪ ಕಾಂಗ್ರೆಸ್ ಜೆಡಿಎಸ್ ಬಿಜೆಪಿ ಕರ್ನಾಟಕ ವಿಧಾನಸಭೆ ಚುನಾವಣೆ 2018 ರಾಜೀನಾಮೆ chandrababu naidu
English summary
"Everyone will be happy about it. All those who believe in democracy are happy," said Andhra Pradesh CM N Chandrababu Naidu after the resignation of BS Yeddyurappa.