ಲೋಕಸಭಾ ಚುನಾವಣೆ: 28 ಕ್ಷೇತ್ರಗಳಿಗೂ ಸಂಯೋಜಕರನ್ನ ನೇಮಕ ಮಾಡಿದ ಕಾಂಗ್ರೆಸ್ ಹೈಕಮಾಂಡ್
ಬೆಂಗಳೂರು, ಜನವರಿ 10: 2024 ರ ಲೋಕಸಭಾ ಚುನಾವಣೆಗೆ ಕೆಲ ತಿಂಗಳೂ ಮಾತ್ರ ಬಾಕಿ ಉಳಿದಿದೆ. ಕರ್ನಾಟಕದಲ್ಲಿ 28 ಲೋಕಸಭಾ ಕ್ಷೇತ್ರಗಳ ಪೈಕಿ ಕನಿಷ್ಠ 20 ಕ್ಷೇತ್ರಗಳನ್ನ ಗೆಲ್ಲುವ ನಿಟ್ಟಿನಲ್ಲಿ ಕಾಂಗ್ರೆಸ್ ಪ್ರತಿಯೊಂದು ಕ್ಷೇತ್ರವನ್ನ ಸಜ್ಜುಗೊಳಿಸುತ್ತಿದೆ.
ಹೌದು, ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಲೋಕಸಭಾ ಕ್ಷೇತ್ರಗಳಿಗೆ ಸಂಯೋಜಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಆಯಾ ಜಿಲ್ಲೆಯನ್ನು ಒಳಗೊಂಡ ಕ್ಷೇತ್ರದ ಹೊಣೆಯನ್ನು ನೀಡಲಾಗಿದೆ. ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರ ಸಂಪುಟ ಸಹೋದ್ಯೋಗಿಗಳನ್ನು ರಾಜ್ಯದ 28 ಕ್ಷೇತ್ರಗಳಿಗೆ ಸಂಯೋಜಕರನ್ನಾಗಿ ನೇಮಿಸಿದ್ದು, ಈ ಕೆಳಗೆ ಪಟ್ಟಿಯಲ್ಲಿ ಮಾಹಿತಿಯನ್ನ ನೀಡಲಾಗಿದೆ.

ಸಂಯೋಜಕರ ಪಟ್ಟಿ ಇಲ್ಲಿದೆ?
- ಚಿಕ್ಕೋಡಿ- ಎಚ್.ಕೆ. ಪಾಟೀಲ
- ಬೆಳಗಾವಿ- ಸತೀಶ ಜಾರಕಿಹೊಳಿ
- ಬಾಗಲಕೋಟೆ- ಆರ್.ಬಿ.ತಿಮ್ಮಾಪುರ
- ವಿಜಯಪುರ- ಎಂ.ಬಿ. ಪಾಟೀಲ್
- ಕಲಬುರಗಿ- ಪ್ರಿಯಾಂಕ್ ಖರ್ಗೆ
- ರಾಯಚೂರು- ಎನ್.ಎಸ್. ಬೋಸರಾಜು
- ಬೀದರ್-ಈಶ್ವರ ಖಂಡ್ರೆ
- ಕೊಪ್ಪಳ- ಶಿವರಾಜ ತಂಗಡಗಿ
- ಬಳ್ಳಾರಿ- ಬಿ. ನಾಗೇಂದ್ರ
- ಹಾವೇರಿ- ಶಿವಾನಂದ ಪಾಟೀಲ
- ಧಾರವಾಡ- ಸಂತೋಷ್ ಲಾಡ್
- ಉತ್ತರಕನ್ನಡ- ಮಂಕಾಳ ವೈದ್ಯ
- ದಾವಣಗೆರೆ- ಎಸ್.ಎಸ್. ಮಲ್ಲಿಕಾರ್ಜುನ
- ಶಿವಮೊಗ್ಗ-ಮಧುಬಂಗಾರಪ್ಪ
- ಉಡುಪಿ- ಚಿಕ್ಕಮಗಳೂರು- ಕೆ.ಜೆ. ಜಾರ್ಜ್
- ಹಾಸನ- ಕೆ.ಎನ್. ರಾಜಣ್ಣ
- ದಕ್ಷಿಣಕನ್ನಡ- ದಿನೇಶ್ ಗುಂಡೂರಾವ್
- ಚಿತ್ರದುರ್ಗ ಡಿ. ಸುಧಾಕರ್
- ಚಿಕ್ಕಬಳ್ಳಾಪುರ- ಕೆ.ಎಚ್. ಮುನಿಯಪ್ಪ,
- ತುಮಕೂರು-ಜಿ. ಪರಮೇಶ್ವರ
- ಮಂಡ್ಯ-ಎನ್. ಚಲುವರಾಯಸ್ವಾಮಿ
- ಮೈಸೂರು- ಕೆ. ವೆಂಕಟೇಶ್
- ಚಾಮರಾಜನಗರ- ಎಚ್.ಸಿ. ಮಹದೇವಪ್ಪ
- ಬೆಂಗಳೂರು ಗ್ರಾಮಾಂತರ- ಬೈರತಿ ಸುರೇಶ್
- ಬೆಂಗಳೂರು ಉತ್ತರ- ಕೃಷ್ಣ ಬೈರೇಗೌಡ.
- ಬೆಂಗಳೂರು ಕೇಂದ್ರ- ಜಮೀರ್ ಅಹಮದ್ ಖಾನ್
- ಬೆಂಗಳೂರು ದಕ್ಷಿಣ- ರಾಮಲಿಂಗಾರೆಡ್ಡಿ
- ಕೋಲಾರ- ಡಾ.ಎಂ.ಸಿ. ಸುಧಾಕರ್.

ಕರ್ನಾಟಕ ಕಾಂಗ್ರೆಸ್ ಲೋಕಸಭೆ ಚುನಾವಣೆಯಲ್ಲಿ 20-25 ಗೆಲುವಿನ ಗುರಿಯನ್ನು ಸಾಧಿಸುವ ದೊಡ್ಡ ಸವಾಲನ್ನು ಎದುರಿಸುತ್ತಿದೆ. ಇದೀಗ, ಕರ್ನಾಟಕದಿಂದ ಲೋಕಸಭೆಯಲ್ಲಿ ಪಕ್ಷವು ಕೇವಲ ಒಂದು ಸ್ಥಾನವನ್ನು ಹೊಂದಿದೆ. ಉಪಮುಖ್ಯಮಂತ್ರಿಯವರ ಸಹೋದರ ಡಿಕೆ ಸುರೇಶ್ ಪ್ರತಿನಿಧಿಸುವ ಬೆಂಗಳೂರು ಗ್ರಾಮಾಂತರ. 2019 ರ ಚುನಾವಣೆಯಲ್ಲಿ, ಪಕ್ಷವು ಲೋಕಸಭೆಯಲ್ಲಿ ಹೊಂದಿದ್ದ ಒಂಬತ್ತು ಸ್ಥಾನಗಳಲ್ಲಿ ಎಂಟು ಸ್ಥಾನಗಳನ್ನು ಕಳೆದುಕೊಂಡು ಕೇವಲ ಒಂದು ಸ್ಥಾನದಲ್ಲಿ ಮಾತ್ರ ಗೆಲುವು ಸಾಧಿಸಿತ್ತು.
ಮೇ 2023 ರ ವಿಧಾನಸಭಾ ಚುನಾವಣೆಯ ಗೆಲುವು ಕಾಂಗ್ರೆಸ್ ಅನ್ನು ಹುರಿದುಂಬಿಸಿದೆ, ಅದು 25 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಹೊಂದಿದೆ ಎಂದು ಹೊರನೋಟಕ್ಕೆ ಹೇಳಿಕೊಳ್ಳಬಹುದು, ಆದರೆ ಸುಮಾರು 10 ಸ್ಥಾನಗಳನ್ನ ಗೆಲ್ಲಬಹುದು ಎಂದು ಹೇಳಲಾಗಿದೆ. ಇನ್ನೂ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಸೋಲಿನಿಂದಲ್ಲ, ಸೋಲಿನ ನಂತರ ಆ ಪಕ್ಷದಲ್ಲಿನ ಒಗ್ಗಟ್ಟು ಮತ್ತು ಆಂತರಿಕ ಕಚ್ಚಾಟದ ಕೊರತೆಯಿಂದಾಗಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ನಿರೀಕ್ಷೆಯಿದೆ. ರಾಜ್ಯ ಘಟಕದ ಅಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿ ಮಾಜಿ ಸಚಿವ ಆರ್.ಅಶೋಕ ಅವರನ್ನು ನೇಮಕ ಮಾಡಿರುವುದು ಪಕ್ಷದೊಳಗೆ ಅಸಮಾಧಾನಕ್ಕೆ ಕಾರಣವಾಗಿದ್ದು, ಅದು ಶಮನವಾಗುವ ಲಕ್ಷಣ ಕಾಣುತ್ತಿಲ್ಲ.
ಬಿಜೆಪಿಯಲ್ಲಿ ಆಂತರಿಕ ಕಲಹ
ಬಿಜೆಪಿಯ ಹಿರಿಯ ನಾಯಕರಾದ ಬಸನಗೌಡ ಪಾಟೀಲ್ ಯತ್ನಾಳ್, ಸಿ.ಟಿ.ರವಿ, ಕೆ.ಎಸ್.ಈಶ್ವರಪ್ಪ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರ ನೇಮಕಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಪಕ್ಷ ಸಂಘಟನೆ ಪುನಶ್ಚೇತನಕ್ಕೆ ಹಾಗೂ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಲು ಹಲವು ಕ್ರಮಗಳನ್ನು ಕೈಗೊಂಡಿರುವ ವಿಜಯೇಂದ್ರ ಅವರನ್ನು ಲೋಕಸಭೆ ಚುನಾವಣೆಗೆ ಸಜ್ಜುಗೊಳಿಸಲು ಈ ಪೈಕಿ ಹಲವು ನಾಯಕರು ಸಹಕಾರ ನೀಡುತ್ತಿಲ್ಲ ಎಂದು ಹೇಳಲಾಗಿದೆ.












Click it and Unblock the Notifications