ನಟ ಧನಂಜಯ್ ಮಾಂಸಾಹಾರ ಸೇವನೆ: ನಾನ್ ವೆಜ್ ತಿನ್ನುವವರು ಶಿವಭಕ್ತರಲ್ಲವೇ, ಲಿಂಗಾಯತರನ್ನು ಗುರಿ ಮಾಡಿ ಟ್ರೋಲ್ ಬೇಡ - ಚರ್ಚೆ
ನಟ ಡಾಲಿ ಧನಂಜಯ್ ಅವರು ಮಾಂಸಾಹಾರ ಸೇವನೆ ಮಾಡಿರುವುದಕ್ಕೆ ಕೆಲವರು ವಿರೋಧಿಸಿದ್ದಾರೆ. ಆದರೆ ಡಾಲಿ ಧನಂಜಯ್ ಅವರು ಮಾಂಸಾಹಾರ ಸೇವನೆ ಮಾಡುವುದು ಅವರ ಆಯ್ಕೆ ಎಂದು ಕೆಲವರು ಬೆಂಬಲ ವ್ಯಕ್ತಪಡಿಸಿದ್ದಾರೆ. ಇದು ಪರ - ವಿರೋಧ ಚರ್ಚೆಗೆ ಕಾರಣವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ನಟ ಡಾಲಿ ಧನಂಜಯ್ ಅವರು ಮಾಂಸಾಹಾರ ಸೇವನೆ ಮಾಡಿರುವುದಕ್ಕೆ ಕೆಲವರು ಜಾತಿ ಪ್ರಶ್ನೆ ಮಾಡಿದ್ದು, ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಕ್ಷಣದಲ್ಲಿ ಚರ್ಚೆ ಆಗಿರುವುದೇನು ಎನ್ನುವ ವಿವರ ಇಲ್ಲಿದೆ.
ಉಪನ್ಯಾಸಕಿ, ಸಾಹಿತಿ ದೀಪಾ ಹಿರೇಗುತ್ತಿ ಅವರು, ನಾನ್ ವೆಜ್ ತಿನ್ನುವವರು ಶಿವಭಕ್ತರಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ. ಆಹಾರ ಅನ್ನೋದು ಅವರವರ ಹಕ್ಕು ಮತ್ತು ಅವರವರ ಇಷ್ಟ. ನಾನ್ ವೆಜ್ ತಿನ್ನುವ ಜಾತಿಯಲ್ಲಿ ಹುಟ್ಟಿದವರು ಅದನ್ನು ತಿನ್ನದೇ ಇರಲು ಹೇಗೆ ಅವಕಾಶವಿದೆಯೋ ತಿನ್ನದ ಜಾತಿಯವರು ತಿನ್ನಲೂ ಸ್ವಾತಂತ್ರ್ಯವಿದೆ. ಡಾಲಿ ಧನಂಜಯ್ ಊಟ ಮಾಡುತ್ತಿರುವ ಫೋಟೋ ಇಟ್ಟುಕೊಂಡು ಕೆಲವರು ಮಾಡುತ್ತಿರುವ ಕಾಮೆಂಟ್ಗಳನ್ನು ನೋಡಿ ನಗು ಬಂತು.
ನಿಜವಾಗಿಯೂ ನೋಡಿದರೆ ಈ ವಿಷಯವೇ ಸಿಲ್ಲಿ. ಅವನು ಅದು ತಿಂದ, ಇವಳು ಇದು ತಿಂದಳು ಯಾಕೆ ? ನಿಮಗೆ ಬೇಕಾ ತಿನ್ನಿ, ಬೇಡವಾ ಬಿಡಿ. ಬೇರೆಯವರ ಬಾಳೆಲೆಯಲ್ಲಿ ಬಿದ್ದ ನೊಣ ಹುಡುಕುವ ಮುನ್ನ ನಿಮ್ಮ ತಟ್ಟೆ ನೋಡಿಕೊಳ್ಳಿ. ಹಾ, ಮೊದಲು ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ. ನಾನಲ್ಲ, ಬಸವಣ್ಣ ಹೇಳಿದ್ದು ಎಂದು ಬರೆದುಕೊಂಡಿದ್ದಾರೆ.
ಸಸ್ಯದಲ್ಲೂ ಜೀವವಿದೆ, ಪ್ರಾಣಿಯಲ್ಲೂ ಜೀವವಿದೆ
ಡಾಲಿ ಧನಂಜಯ ತಿಂದರು ಮಾಂಸವ; ಅದಕ್ಕೆ ಯಾಕೆ ಮಾಡಬೇಕು ದ್ವೇಷವ ಕನ್ನಡ್ವಿರಾಟ ಎನ್ನುವ ಎಕ್ಸ್ಖಾತೆಯಿಂದ ಟ್ವೀಟ್ವೊಂದನ್ನು ಮಾಡಲಾಗಿದೆ. ಆಹಾರ ಅನ್ನೋದು ವೈಯಕ್ತಿಕ ಆಯ್ಕೆ, ಅಲ್ಲಿ ದ್ವೇಷಕ್ಕೆ ಜಾಗವೇಕೆ. ಆಹಾರ ಸೇವನೆಯಲ್ಲೂ ದ್ವೇಷ ಸಾರೋದು ಯಾಕೆ, ಮನುಷ್ಯ ತನಗೆ ಬೇಕಾದುದ್ದನ್ನು ತಿನ್ನಲು ಧರ್ಮ ಹಾಗು ಜಾತಿಯ ಅಪ್ಪಣೆ ಕೇಳಬೇಕೇ, ಆಹಾರ ಆಯ್ಕೆಯನ್ನು,ವ್ಯಕ್ತಿ ನಿರ್ಧಾರ ಮಾಡಬೇಕು ಹೊರೆತು ಹಳೆಯ ಕಟ್ಟುಪಾಡುಗಳಲ್ಲ, ಇಂತಹ ಅವೈಜ್ಞಾನಿಕ ಕಟ್ಟುಪಾಡುಗಳನ್ನು ದಾಟಿ ಆತ ಸೇವನೆ ಮಾಡುವತ್ತ ಮನ ಮಾಡಿದ್ದಾನೆ ಅಂದರೆ ಅವನು ಈ ಮೂಡ ಕಟ್ಟುಪಾಡುಗಳಿಂದ ಹೊರಬಂದು, ಪ್ರಗತಿಯತ್ತ ಮುಖ ಮಾಡಿರುವ ಎಂದು ಅರ್ಥ.

ಸಸ್ಯ ತಿನ್ನುವವನು ಸಸ್ಯಾಹಾರಿ ಪ್ರಾಣಿ ಮಾಂಸ ತಿನ್ನುವವನು ಮಾಂಸಾಹಾರಿ ಸಸ್ಯದಲ್ಲೂ ಕೂಡ ಜೀವವಿದೆ.ಪ್ರಾಣಿಯಲ್ಲೂ ಕೂಡ ಜೀವವಿದೆ. ಜೀವ ತಗೆದೆನೆ ತಿನ್ನುವೆವು ಅಂದ ಮೇಲೆ ಎರಡು ಕಡೆ ಹಿಂಸೆ ಇದೆ, ಬದುಕಲು ಆಹಾರ ಮುಖ್ಯ, ನಮಗೆ ಆಹಾರ ಸಿಗಲು ಸಸ್ಯ ಹಾಗು ಪ್ರಾಣಿಗಳನ್ನು ಉಪಯೋಗಿಸಿಕೊಳ್ಳೋದು ತಪ್ಪು ಅಲ್ಲ ಅಪರಾಧವು ಅಲ್ಲ.
ಸಸ್ಯಾಹಾರಿಗಳು ಸಸ್ಯ ತಿಂದುಕೊಂಡು ನಾವು ಹಿಂಸೆ ಮಾಡೋಲ್ಲ ಅಂದರೆ ಅದು ಅವರ ಮೂರ್ಖತನ. ಆಹಾರ ಬದುಕಲು ಅನಿವಾರ್ಯ ಆಹಾರ ಆಯ್ಕೆ ಪ್ರೆಶ್ನೆ ಮಾಡೋದು ಯಾಕ್ರಯ್ಯ ಎಂದು ಪ್ರಶ್ನೆ ಮಾಡಲಾಗಿದೆ.
🚨ಡಾಲಿ ಧನಂಜಯ ತಿಂದರು ಮಾಂಸವ
— ಕನ್ನಡ್ವಿರಾಟ (@kohlificationn) January 25, 2026
ಅದಕ್ಕೆ ಯಾಕೆ ಮಾಡಬೇಕು ದ್ವೇಷವ🚨
ಆಹಾರ ಅನ್ನೋದು ವೈಯಕ್ತಿಕ ಆಯ್ಕೆ, ಅಲ್ಲಿ ದ್ವೇಷಕ್ಕೆ ಜಾಗವೇಕೆ? 🍽️
ಆಹಾರ ಸೇವನೆಯಲ್ಲೂ ದ್ವೇಷ ಸಾರೋದು ಯಾಕೆ, ಮನುಷ್ಯ ತನಗೆ ಬೇಕಾದುದ್ದನ್ನು ತಿನ್ನಲು ಧರ್ಮ ಹಾಗು ಜಾತಿಯ ಅಪ್ಪಣೆ ಕೇಳಬೇಕೇ🤔
ಆಹಾರ ಆಯ್ಕೆಯನ್ನು,ವ್ಯಕ್ತಿ ನಿರ್ಧಾರ ಮಾಡಬೇಕು ಹೊರೆತು ಹಳೆಯ… pic.twitter.com/gcYdwgRcfM
ಸುಭಾನು ರಾರಾವಿ ಅವರು, ಲಿಂಗಾಯತರು ಮಾಂಸಾಹಾರ ಸೇವಿಸಬಹುದು. ಲಿಂಗಾಯತ ತತ್ವವು ಸಂಕುಚಿತವಲ್ಲ, ವಿಶಾಲ ಆಶಯಗಳನ್ನು ಹೊಂದಿದೆ. ಬಸವ ತತ್ವ ಅನುಯಾಯಿಯಾಗಿರುವ ನಟ ಡಾಲಿ ಧನಂಜಯ್ ಅವರು ಮಾಂಸಾಹಾರ ಸೇವಿಸುತ್ತಿರುವ ವಿಡಿಯೋವನ್ನು ಗಮನಿಸಬಹುದು ಎಂದು ಹೇಳಿದ್ದಾರೆ.
ಲಿಂಗಾಯತರನ್ನು ಗುರಿ ಮಾಡಿ ಟ್ರೋಲ್ ಮಾಡಬೇಡಿ
ಬೆಳಗಾವಿ ಎನ್ನುವ ಖಾತೆಯಿಂದ ಲಿಂಗಾಯತರನ್ನು ಗುರಿ ಮಾಡಿ ಟ್ರೋಲ್ ಮಾಡಬೇಡಿ ಎಂದು ಹೇಳಲಾಗಿದೆ. ಲಿಂಗಾಯತರು ಚಿಕನ್, ಮಟನ್ ತಿಂತಾರಾ ? ಈ ತೆರನಾದ Caption ಹಾಕಿ, ಡಾಲಿ ಧನಂಜಯ ಅವರು ಊಟ ಮಾಡೋದನ್ನಾ ಕೆಲವ್ರು ಟ್ರೋಲ್ ಮಾಡ್ತಾ ಇದಾರೆ. ಇಂದಿನ ಕಾಲದಲ್ಲಿ ಮಾಂ*ಸಹಾರ ಬಹುತೇಕ ಎಲ್ಲಾ ಜಾತಿ/ಧರ್ಮ ದವರು ತಿಂತಾರೆ. ಆದರೆ ಕೇವಲ ಲಿಂಗಾಯತ ಸಮಾಜವನ್ನಾ ಗುರಿ ಮಾಡಿ, ಈ ತೆರನಾಗಿ ಟ್ರೋಲ್ ಮಾಡೋದು ಸರಿ ಅಲ್ಲಾ ಎಂದು ಅಭಿಪ್ರಾಯಪಡಲಾಗಿದೆ.
ಲಿಂಗಾಯತರು ಚಿಕನ್, ಮಟನ್ ತಿಂತಾರಾ ?
— Belagavi - ಬೆಳಗಾವಿ (@BelagaviKA) January 25, 2026
ಈ ತೆರನಾದ Caption ಹಾಕಿ, ಡಾಲಿ ಧನಂಜಯ ಅವರು ಊಟ ಮಾಡೋದನ್ನಾ ಕೆಲವ್ರು ಟ್ರೋಲ್ ಮಾಡ್ತಾ ಇದಾರೆ.
ಇಂದಿನ ಕಾಲದಲ್ಲಿ ಮಾಂ*ಸಹಾರ ಬಹುತೇಕ ಎಲ್ಲಾ ಜಾತಿ/ಧರ್ಮ ದವರು ತಿಂತಾರೆ. ಆದರೆ ಕೇವಲ ಲಿಂಗಾಯತ ಸಮಾಜವನ್ನಾ ಗುರಿ ಮಾಡಿ, ಈ ತೆರನಾಗಿ ಟ್ರೋಲ್ ಮಾಡೋದು ಸರಿ ಅಲ್ಲಾ. pic.twitter.com/in9iHzqIcy
Team Daali Dhananjaya ಎನ್ನುವ ಖಾತೆಯಿಂದ
ಚೆಂದ ಕೋಳಿ ಸಾರು
ಅಷ್ಟೆ ಚೆಂದ ಕೀರು
ನನ್ನ ರುಚಿ ನಂದು
ನಿನ್ನ ರುಚಿ ನಿಂದು
ಚೆಂದ ಸುಟ್ಟ ಮೀನು
ಅಷ್ಟೆ ಚೆಂದ ಗಿಣ್ಣು
ನನ್ನ ರುಚಿ ನಂದು
ನಿನ್ನ ರುಚಿ ನಿಂದು
ಹಸಿವು ದ್ಯಾವರಲ್ವ
ಹಸಿರು ದ್ಯಾವರಲ್ವ
ರುಚಿಯು ದ್ಯಾವರಲ್ಲವೆ..
ಸಿನಿಮಾ ಹೆಸರು "ಟಗರು ಪಲ್ಯ"
ಸಾಹಿತ್ಯ ಬರೆದವರು "ಡಾಲಿ ಧನಂಜಯ" ಎನ್ನುವ ಸಾಲುಗಳನ್ನು ಹಂಚಿಕೊಳ್ಳಲಾಗಿದೆ.
ಚೆಂದ ಕೋಳಿ ಸಾರು
— Team Daali Dhananjaya (@Team_Dhananjaya) January 25, 2026
ಅಷ್ಟೆ ಚೆಂದ ಕೀರು
ನನ್ನ ರುಚಿ ನಂದು
ನಿನ್ನ ರುಚಿ ನಿಂದು
ಚೆಂದ ಸುಟ್ಟ ಮೀನು
ಅಷ್ಟೆ ಚೆಂದ ಗಿಣ್ಣು
ನನ್ನ ರುಚಿ ನಂದು
ನಿನ್ನ ರುಚಿ ನಿಂದು
ಹಸಿವು ದ್ಯಾವರಲ್ವ
ಹಸಿರು ದ್ಯಾವರಲ್ವ
ರುಚಿಯು ದ್ಯಾವರಲ್ಲವೆ..
ಸಿನಿಮಾ ಹೆಸರು "ಟಗರು ಪಲ್ಯ"
ಸಾಹಿತ್ಯ ಬರೆದವರು "ಡಾಲಿ ಧನಂಜಯ"#DaaliDhananjaya #Dhananjayafans pic.twitter.com/J4kXVxuw98
-
ಯುಗಾದಿ ಹಬ್ಬ - ಶಿವರಾತ್ರಿಯಂದು ನಾನು ಮಾಂಸ ತಿಂತಿನಿ, ಅದು ನನ್ನಿಷ್ಟ: ಮುಖ್ಯಮಂತ್ರಿ ಸಿದ್ದರಾಮಯ್ಯ -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Love Mocktail 3: ಲವ್ ಮಾಕ್ಟೇಲ್ 3 ಸಿನಿಮಾ ಕದ್ದ ಕಥೆ: ಮಾರಿ ಗೋಲ್ಡ್ ನಿರ್ದೇಶಕ ರಾಘವೇಂದ್ರ ನಾಯ್ಕ್ ಗಂಭೀರ ಆರೋಪ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Foundation of IT ಆಯ್ಕೆ ವೈರಲ್: ಭಾಷಾ ಸಮಾನತೆಗೆ ದಕ್ಷಿಣ ಭಾರತೀಯರ ಪ್ರಶ್ನೆ, ನಾರ್ಥಿ ಮಾರ್ಕ್ಸ್ ಕಾರ್ಡ್ Viral Post -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ












Click it and Unblock the Notifications