ದರ್ಶನ್ ಮೇಲೆ ಚಾರ್ಜ್ಶೀಟ್ ಹಾಕಿದ ಬಳಿಕ ಕಾದಿದೆ ಸಂಕಷ್ಟ!
ನಟ ದರ್ಶನ್, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೀಡಾಗಿದ್ದು, ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ಶನಿವಾರ ಜುಲೈ ಮೂರವರೆಗೆ ನ್ಯಾಯಾಂಗ ಬಂಧನವನ್ನು ವಿಧಿಸಿದೆ. ಸದ್ಯ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.
ದರ್ಶನ್, ಪ್ರೇಯಸಿ ಗೆಳತಿಗೆ ಚಿತ್ರದುರ್ಗದ ರೇಣುಕಾಸ್ವಾಮಿ ಅಸಭ್ಯ ಮೆಸೇಜ್ ಕಳುಹಿಸಿದ್ದಾರೆಂದು, ನಟ ತನ್ನ ಅಭಿಮಾನಿಗಳ ಮೂಲಕ ಅವನನ್ನು ಬೆಂಗಳೂರಿಗೆ ಕರಿಸಿಕೊಂಡು, ಪಟ್ಟಣಗೆರೆ ಶೆಡ್ಡನಲ್ಲಿ ಹಲ್ಲೆ ನಡೆಸಿದ್ದಾರೆ. ರೇಣುಕಾಸ್ವಾಮಿ ಹಲ್ಲೆಯ ವೇಳೆ ಸಾವನ್ನಪ್ಪಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ದರ್ಶನ್ ಅವರನ್ನು ಜೂನ್ 11 ರಂದು ಬಂಧಿಸಲಾಗಿತ್ತು. ಶನಿವಾರ ಪೊಲೀಸ್ ಕಸ್ಟಡಿಯಿಂದ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಸದ್ಯ ದರ್ಶನ್ ಹಾಗೂ ಸಹಚರರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

ದರ್ಶನ್ ಜೈಲಿನಲಿರುವ ಸುದ್ದಿ ಸದ್ಯ ಕರ್ನಾಟಕದಲ್ಲಿ ಬಿಸಿಬಿಸಿ ಚರ್ಚಾ ವಿಷಯವಾಗಿದೆ. ಸದ್ಯ ನಟನ ಮೇಲೆ ದರ್ಶನ್ ಅವರ ಮೇಲೆ ಚಾರ್ಜಶೀಟ್ ಸಲ್ಲಿಕೆ ಆದ ಮೇಲೆ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಲಿದೆ. ಈ ಸುದ್ದಿ ಚಿತ್ರರಂಗದಲ್ಲಿರುವ ಹಲವರಿಗೆ ಆಘಾತ ತರಲಿದೆ. ದರ್ಶನ್ ಅವರನ್ನು ಹಾಕಿಕೊಂಡು ಚಿತ್ರ ಮಾಡುವವರು ಎರಡು ಕೈಗಳನ್ನು ಹಿಚಿಕೊಳ್ಳುವ ಸ್ಥಿತಿಗೆ ಬಂದಿದ್ದಾರೆ.
ಏಕೆ ಸಂಕಷ್ಟ?
ದರ್ಶನ್ ಕರ್ನಾಟಕದಲ್ಲಿ ಪ್ರಭಾವಿ ವ್ಯಕ್ತಿ. ಇವರ ಮೇಲೆ ಚಾರ್ಜ್ಶೀಟ್ ಆದಮೇಲೆ ಇವರ ಪಾಸ್ ಪೋರ್ಟ್ ರದ್ದಾಗಲಿದೆ. ಕೊಲೆ ಆರೋಪವನ್ನು ಹೊಂದಿರುವವರು ಬೇರೆ ದೇಶಗಳಿಗೆ ಹೋಗಿ ಎಸ್ಕೇಪ್ ಆಗಬಹುದು ಎಂಬ ಕಾರಣದಿಂದ ಪಾಸ್ ಪೋರ್ಟ್ ರದ್ದತಿಗೆ ಪೊಲೀಸರು ಪತ್ರ ಬರೆಯುತ್ತಾರೆ ಎನ್ನಲಾಗಿದೆ. ಆರೋಪಿ ಎಂದ ಮೇಲೆ ಅವರು ಎಷ್ಟು ಪ್ರಭಾವಿ ಎಂದು ನೋಡುವುದಿಲ್ಲ. ಆರೋಪಿ, ಆರೋಪಿನೇ.. ಇನ್ನು ಆರೋಪಿ ಪರಾರಿ ಆಗದಂತೆ ಪೊಲೀಸರು ಏನೆಲ್ಲಾ ಮುನ್ನೆಚ್ಚರಿಕೆ ವಹಿಸಬೇಕು ಅದನೆಲ್ಲಾ ವಹಿಸುತ್ತಾರೆ.

ದರ್ಶನ್ ಮುಂದಿನ ಚಿತ್ರಗಳ ಕಥೆ?
ನಟ ದರ್ಶನ್ ಅವರನ್ನು ಹಾಕಿಕೊಂಡು ಚಿತ್ರವನ್ನು ಮಾಡಲು ಬಯಸುವವರು ಇನ್ನು ಮುಂದೆ ತಮ್ಮ ಸಿನಿಮಾದ ಶೂಟಿಂಗ್ ಭಾರತದಲ್ಲೇ ನಡೆಯುವಂತೆ ನೋಡಿಕೊಳ್ಳಬೇಕು. ಏಕೆಂದರೆ ಇವರ ಪಾಸ್ಪೋರ್ಟ್ ರದ್ದು ಮಾಡಲು ಪೊಲೀಸರು ಮುಂದಾದರೆ, ಇವರು ದೇಶ ಬಿಟ್ಟು ಬೇರೆ ದೇಶಕ್ಕೆ ಹೋಗಿ ಚಿತ್ರ ಶೂಟಿಂಗ್ ಮಾಡಲು ಆಗದು. ದರ್ಶನ್ ಜಾಮೀನು ಮೇಲೆ ರಿಲೀಸ್ ಆದ್ಮೇಲೆ ವಿದೇಶದಲ್ಲಿಯ ಶೂಟಿಂಗ್ಗೆ ಬ್ರೇಕ್ ಬೀಳುತ್ತದೆ. ಅಲ್ಲದೆ ಈಗಿನ ಟ್ರೆಂಡ್ಗೆ ವಿರುದ್ಧವಾಗಿ ನಿರ್ಮಾಪಕರು ಯೋಚಿಸಬೇಕು.
ಈಗಂತೂ ಚಿತ್ರಗಳ ಶೂಟಿಂಗ್ ಹಾಗೂ ಧಾರವಾಹಿಗಳ ಶೂಟಿಂಗ್ ವಿದೇಶದಲ್ಲಿ ಮಾಡುವುದು ಒಂದು ಟ್ರೆಂಡ್.. ದರ್ಶನ್ರನ್ನು ಹಾಕಿಕೊಂಡು ಚಿತ್ರ ಮಾಡುವ ನಿರ್ಮಾಪಕರು ಇನ್ನು ಮುಂದೆ ವಿದೇಶಿ ಫ್ಲೈಟ್ ಹತ್ತಿ ಶೂಟ್ ಮಾಡಬೇಕೆಂದಿದ್ದರೆ, ಕೋರ್ಟ್ ಅನುಮತಿ ಪಡೆಯಬೇಕಾಗುತ್ತದೆ. ಕೋರ್ಟ್ ಅನುಮತಿ ನೀಡಿದರೆ ಮಾತ್ರ ವಿದೇಶಕ್ಕೆ ತೆರಳಬಹುದು. ಇಲ್ಲದೇ ಇದ್ದಲ್ಲಿ ಭಾರತದಲ್ಲೇ ಶೂಟಿಂಗ್ ಮುಗಿಸಬೇಕು.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications