17 ಕಲುಷಿತ ನದಿಗಳನ್ನು ಸ್ವಚ್ಛಗೊಳಿಸಲು ಕ್ರಿಯಾ ಯೋಜನೆ
ಬೆಂಗಳೂರು, ಜೂನ್ 8: ಕಾವೇರಿ, ಕೃಷ್ಣಾ ಮತ್ತು ತುಂಗಭದ್ರಾ ಸೇರಿದಂತೆ 17 ಕಲುಷಿತ ನದಿಗಳನ್ನು ಸ್ವಚ್ಛಗೊಳಿಸಲು ರಾಜ್ಯ ಸರ್ಕಾರ ಶೀಘ್ರದಲ್ಲೇ ಸಮಗ್ರ ಕ್ರಿಯಾ ಯೋಜನೆಯನ್ನು ರೂಪಿಸಲಿದೆ.
2018ರಿಂದ 17 ನದಿಗಳಿಗೆ ಕೊಳಚೆ ನೀರು ಸೇರುವುದನ್ನು ತಡೆಯುವ ಕಾಮಗಾರಿಗಳು, ವಿಶೇಷವಾಗಿ ಒಳಚರಂಡಿ ಸಂಸ್ಕರಣಾ ಘಟಕಗಳ (ಎಸ್ಟಿಪಿ) ನಿರ್ಮಾಣದ ಕಾಮಗಾರಿಗಳನ್ನು ಪರಿಶೀಲಿಸುತ್ತಿರುವ ಕೇಂದ್ರ ಮೇಲ್ವಿಚಾರಣಾ ಸಮಿತಿಯ ಮುಂದೆ ರಾಜ್ಯ ಸರ್ಕಾರದ ಕ್ರಿಯಾ ಯೋಜನೆಯ ಭರವಸೆ ನೀಡಲಾಗಿತ್ತು.
ಇತ್ತೀಚೆಗೆ ನಡೆದ ಸಭೆಯಲ್ಲಿ ಕೇಂದ್ರ ಸಮಿತಿಯು ಮಲಪ್ರಭಾ ಮತ್ತು ಕಾಳಿ ಎಂಬ ಎರಡು ನದಿಗಳನ್ನು ಕಲುಷಿತ ಪ್ರದೇಶಗಳಿಂದ ತೆಗೆದುಹಾಕಿದ್ದರೂ ಮತ್ತೆರಡು ನದಿಗಳಾದ ದಕ್ಷಿಣ ಪಿನಾಕಿನಿ ಮತ್ತು ತೆನ್ಪೆಣ್ಣೈ ಅನ್ನು ಕಳೆದ ತಿಂಗಳು ಸೇರಿಸಲಾಯಿತು. ಇಲ್ಲಿ ರಾಜ್ಯ ಸರ್ಕಾರದ ಸಂಖ್ಯೆಗಳೊಂದಿಗೆ ಹಲವಾರು ಸಮಸ್ಯೆಗಳಿವೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಕರ್ನಾಟಕದಲ್ಲಿ ಒಟ್ಟು 4,458 ಎಂಎಲ್ಡಿ ಕೊಳಚೆ ನೀರು ಉತ್ಪತ್ತಿಯಾಗುತ್ತಿದೆ ಎಂದು ಹೇಳಿದರೆ, ರಾಜ್ಯ ಸರ್ಕಾರವು 3,356 ಎಂಎಲ್ಡಿ ಎಂದು ಅಂದಾಜಿಸಿದೆ. ಅದರೊಳಗೂ 569 ಎಂಎಲ್ಡಿ ಪೂರಕವಾಗುತ್ತಿಲ್ಲ. 169 ಎಸ್ಟಿಪಿಗಳಲ್ಲಿ, 12 ಕಾರ್ಯನಿರ್ವಹಿಸುತ್ತಿಲ್ಲ ಮತ್ತು ನಾಲ್ಕು ಮಾನದಂಡಗಳಿಗೆ ಅನುಗುಣವಾಗಿಲ್ಲ. ಸಾಮರ್ಥ್ಯದ ಬಳಕೆಯನ್ನು 65% ಎಂದು ಸರ್ಕಾರವು ಹಾಕುವುದರೊಂದಿಗೆ ಅಸ್ತಿತ್ವದಲ್ಲಿರುವ ಎಸ್ಟಿಪಿಗಳನ್ನು ಸಹ ಸಂಪೂರ್ಣವಾಗಿ ಬಳಸಲಾಗಿಲ್ಲ.
ದಬ್ಬಗುಳಿ: ಕಾವೇರಿ ನದಿ ತಟದಲ್ಲಿ ಕುಳಿತು ಮೀನು ಹಿಡಿಯುತ್ತಾ, ಪ್ರಕೃತಿ ಸೌಂದರ್ಯ ಸವಿಯಿರಿ!
ಹೆಚ್ಚುತ್ತಿರುವ ನಗರೀಕರಣದೊಂದಿಗೆ ಹೆಚ್ಚಿನ ಕೊಳಚೆ ನೀರು ಪಟ್ಟಣಗಳು ಮತ್ತು ನಗರಗಳಿಂದ ಉತ್ಪತ್ತಿಯಾಗುತ್ತಿದೆ ಎಂದು ಪರಿಗಣಿಸಿ, ಸರ್ಕಾರವು ಕ್ರಿಯಾ ಯೋಜನೆ ಸಿದ್ದಪಡಿಸುತ್ತಿದೆ ಎಂದು ಕೆಎಸ್ಪಿಸಿಬಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಕ್ರಿಯಾ ಯೋಜನೆಯು ರಾಜ್ಯದ ಎಲ್ಲಾ ಕಲುಷಿತ ನದಿಗಳ ವ್ಯಾಪ್ತಿಯ ಪರಿಹಾರಗಳ ಮೇಲೆ ಕೇಂದ್ರೀಕರಿಸುತ್ತದೆ. ಬೆಂಗಳೂರಿನಲ್ಲಿ ಉತ್ಪತ್ತಿಯಾಗುವ ಎಲ್ಲಾ ಕೊಳಚೆನೀರನ್ನು ಸಂಸ್ಕರಿಸಲು 1,500 ಕೋಟಿ ರೂಪಾಯಿಗಳ ಯೋಜನೆ ಸಿದ್ಧವಾಗಿದೆ ಎಂದು 2021 ರಲ್ಲಿ ಮಾಡಿದ ಭರವಸೆಯನ್ನು ಸರ್ಕಾರ ಪುನರುಚ್ಚರಿಸಿತು ಎಂದು ತಿಳಿಸಿದರು.
ಆದಾಗ್ಯೂ ಒಳಚರಂಡಿ ಸಂಸ್ಕರಣಾ ಘಟಕಗಳ ಪ್ರಗತಿಗೆ ಸಂಬಂಧಿಸಿದಂತೆ ನವೀಕರಿಸಿದ ಅಂಕಿಅಂಶಗಳನ್ನು ಒದಗಿಸಲು ರಾಜ್ಯ ಸರ್ಕಾರ ತಿಳಿಸಿದೆ. Paani.org ನ ಸಹ ಸಂಸ್ಥಾಪಕಿ, ಕಾರ್ಯಕರ್ತೆ ನಿರ್ಮಲಾ ಗೌಡ ಮಾತನಾಡಿ, ಸರ್ಕಾರ ಸಲ್ಲಿಸಿರುವ ನದಿ ಮಾಲಿನ್ಯದ ಮಾಹಿತಿಯಲ್ಲಿ ಗಂಭೀರ ಲೋಪಗಳಿವೆ. ಕಲುಷಿತ ನದಿಗಳ ವಿಶೇಷವಾಗಿ ವೃಷಭಾವತಿ ಮತ್ತು ಅರ್ಕಾವತಿಯಲ್ಲಿ ರಾಸಾಯನಿಕ ಆಮ್ಲಜನಕದ ಬೇಡಿಕೆ (COD) ಅನ್ನು ಮೇಲ್ವಿಚಾರಣೆ ಮಾಡುವ ಅಗತ್ಯವನ್ನು ನಾವು ಪದೇ ಪದೇ ಸೂಚಿಸಿದ್ದೇವೆ. ಸಿಒಡಿ ನದಿ ನೀರಿನಲ್ಲಿ ಇರುವ ಜೈವಿಕ ವಿಘಟನೀಯವಲ್ಲದ ವಸ್ತುಗಳ ವ್ಯಾಪ್ತಿಯ ಸ್ಪಷ್ಟ ಸೂಚನೆಯನ್ನು ನೀಡುತ್ತದೆ. ಆದರೆ, ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ನಿರ್ದೇಶನದ ಹೊರತಾಗಿಯೂ ಅಧಿಕಾರಿಗಳು ಇದನ್ನು ಇನ್ನೂ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಅವರು ಹೇಳಿದರು.