'ಮಹಿಳೆಯರು ದೇಗುಲಗಳ ಪ್ರವೇಶಕ್ಕೆ ಹಾಕುವ ಶ್ರಮ ಸಂಸತ್ ಪ್ರವೇಶಕ್ಕೆ ಹಾಕಲಿ'
ಕಲಬುರಗಿ, ಫೆಬ್ರವರಿ 6: ''ದೇಶದಲ್ಲಿ ಮಹಿಳೆಯರು ದೇಗುಲಗಳ ಪ್ರವೇಶಕ್ಕೆ ಹಾಕುತ್ತಿರುವ ಪರಿಶ್ರಮವನ್ನು ಸಂಸತ್ ಪ್ರವೇಶಕ್ಕಾಗಿ ಹಾಕಲಿ'' ಎಂದು ಪ್ರೊ. ಶಿವಗಂಗಾ ರುಮ್ಮಾ ಅಭಿಪ್ರಾಯಪಟ್ಟರು.
ಕಲಬುರಗಿ ವಿಶ್ವವಿದ್ಯಾಲಯ ಆವರಣದಲ್ಲಿ ನಡೆಯುತ್ತಿರುವ 85 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೆ ದಿನ ಶ್ರೀವಿಜಯ ಪ್ರಧಾನ ವೇದಿಕೆಯಲ್ಲಿ ಏರ್ಪಡಿಸಲಾಗಿದ್ದ 'ಸ್ತ್ರೀ ಲೋಕ : ತಲ್ಲಣಗಳು' ಗೋಷ್ಠಿಯಲ್ಲಿ ಭಾಗವಹಿಸಿ 'ಮಹಿಳೆ ಮತ್ತು ಲೋಕಗ್ರಹಿಕೆ' ಕುರಿತ ವಿಚಾರ ಮಂಡಿಸಿದರು.
''ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಮಹಿಳೆಯರಿಗೆ ದೇಗುಲ ಪ್ರವೇಶಕ್ಕೆ ರಹದಾರಿಯಂತೂ ದೊರಕಿತು. ಇಂದಿನ ಮಹಿಳೆಯರ ಗುರಿ ದೇವಾಲಯ ಪ್ರವೇಶ ಮಾತ್ರ ಆಗಬಾರದು, ಸಂಸತ್ ಪ್ರವೇಶದ ಗುರಿ ಮಹಿಳೆಯರಿಗಿರಬೇಕು. ಏಕೆಂದರೆ ಕಾನೂನುಗಳು ರೂಪುಗೊಳ್ಳುವುದು ದೇವಾಲಯಗಳಲ್ಲಿ ಅಲ್ಲ, ಸಂಸತ್ತಿನಲ್ಲಿ'' ಎಂದರು.

''ದಕ್ಷಿಣ ಭಾರತ ಹಾಗೂ ಉತ್ತರ ಭಾರತದ ದೇಶೀ ಕಾವ್ಯಗಳನ್ನು ಹೋಲಿಸಿದಾಗ, ಮಹಿಳೆಯರನ್ನೇ ಕಥಾ ನಾಯಕಿಯಾಗಿ ರೂಪಿಸಿದ್ದು ದಕ್ಷಿಣ ಭಾರತದಲ್ಲಿಯೇ ಹೆಚ್ಚು. ಬಾಣ ಕಾದಂಬರಿ, ಕರ್ನಾಟಕ ಕಾದಂಬರಿ ಅಲ್ಲದೆ ಕಾಳಿದಾಸರ ಶಾಕುಂತಲೆಯ ಕಾವ್ಯವೂ ಕೂಡ ಇದಕ್ಕೆ ನಿದರ್ಶನ ಎನ್ನಬಹುದು. ಸಾಹಿತ್ಯ ಎನ್ನುವುದು ಬದುಕಿನ ಉಪ ಉತ್ಪನ್ನ, ಮಹಿಳೆ ಅಬಲೆ ಎನ್ನುವುದು ಕೇವಲ ಲೋಕಗ್ರಹಿಕೆಯ ಭಾಗ. ಆದರೆ ಮಹಿಳೆ ಅಬಲೆಯಲ್ಲ ಎನ್ನುವುದು ಸರ್ವ ಕಾಲದಲ್ಲಿಯೂ ಸಾಬೀತಾಗಿದೆ'' ಎಂದರು.
-
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ











Click it and Unblock the Notifications