ಹಸುಗೂಸು ಎತ್ತಿಕೊಂಡು ಹುಷಾರಾಗಿ ಸೇತುವೆ ದಾಟಿಸಿದ ಸಬ್‌ಇನ್ಸ್‌ಪೆಕ್ಟರ್‌!

ಕಲಬುರಗಿ, ಅ. 19: ಜನರು ಪ್ರವಾಹ ಸಂಕಷ್ಟದಲ್ಲಿ ಇರುವಾಗ ಕರ್ತವ್ಯ ಲೋಪದಿಂದ ಅಮಾನತಾಗುತ್ತಿರುವ ಅಧಿಕಾರಿಗಳು ಒಂದೆಡೆ, ತಮ್ಮ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುವ ಮೂಲಕ ಮಾನವೀಯತೆ ಮೆರೆಯುತ್ತಿರುವ ಅಧಿಕಾರಿಗಳು ಮತ್ತೊಂದೆಡೆ. ವಿಪರ್ಯಾಸ ಎಂದರೆ ಈ ಎರಡೂ ದೃಶ್ಯಗಳು ಕಂಡು ಬಂದಿದ್ದು ಒಂದೇ ಜಿಲ್ಲೆಯಲ್ಲಿ.

ಕರ್ತವ್ಯ ಲೋಪದ ಆರೋಪದಡಿ ಮೂವರು ಸರ್ಕಾರಿ ನೌಕರರು ಕಲಬುರಗಿ ಜಿಲ್ಲೆಯಲ್ಲಿ ಅಮಾನತಾಗಿದ್ದಾರೆ ಘಟನೆಯೂ ನಡೆದಿದೆ. ಆದರೆ ಇದೇ ಜಿಲ್ಲೆಯ ಜೇವರ್ಗಿಯಲ್ಲಿ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್‌ ಸಂಗಮೇಶ್ ಅಂಗಡಿ ಎಂಬುವರು ಹಸುಗೂಸನ್ನು ಎತ್ತಿಕೊಂಡು ಸುರಕ್ಷಿತವಾಗಿ ಸಂತ್ರಸ್ತರ ಇಡೀ ಕುಟುಂಬವನ್ನು ಸೇತುವೆ ದಾಟಿಸುವ ಮೂಲಕ ಗಮನ ಸೆಳೆದಿದ್ದಾರೆ.

Sangamesh Angadi Evacuated Family Of Flood Victims Who Struggling To Cross Bridge

ಜಿಲ್ಲೆಯ ಜೇವರ್ಗಿ ಪೊಲೀಸ್ ಠಾಣೆಯ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್‌ ಸಂಗಮೇಶ್ ಅಂಗಡಿ ಅವರು ಪ್ರವಾಹ ಪೀಡಿತ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಭೀಮಾನದಿ ಹಿನ್ನಿರಿನಿಂದಾಗಿ ಜೇವರ್ಗಿ ಸಮೀಪದ ಕೋನಹಿಪ್ಪರಗಿ ಗ್ರಾಮ ಸಂಪೂರ್ಣವಾಗಿ ಮುಳುಗಡೆಯಾಗಿದ್ದು, ಪ್ರವಾಹದ ವೇಳೆ ಸೇತುವೆ ದಾಟಲು ಪರದಾಡುತ್ತಿದ್ದ ಸಂತ್ರಸ್ತ ಕುಟುಂಬವೊಂದನ್ನು ಸುರಕ್ಷಿತವಾಗಿ ದಡ ಸೇರಿಸಿದ್ದಾರೆ. ಆ ಕುಟುಂಬದೊಂದಿಗೆ ಹಸುಗೂಸು ಇದ್ದಿದ್ದನ್ನು ಕಂಡ ಸಂಗಮೇಶ್ ಅಂಗಡಿ ಅವರು, ತಾವೇ ಖುದ್ದಾಗಿ ಮಗುವನ್ನು ಎತ್ತಿಕೊಂಡು ಸುರಕ್ಷಿತವಾಗಿ ದಡ ಸೇರಿಸಿದ್ದಾರೆ. ಪೊಲೀಸ್ ಅಧಿಕಾರಿಯ ಈ ಕೆಲಸ ಸ್ಥಳೀಯರ ಪ್ರಶಂಸೆಗೆ ಕಾರಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+