10 ಲಕ್ಷ ರೂಪಾಯಿ ಹಣಕ್ಕಾಗಿ ಅಪಹರಿಸಿದ್ದ ಬಾಲಕನ ರಕ್ಷಣೆ
ಕಲಬುರ್ಗಿ, ಜನವರಿ 6: ಕಲಬುರಗಿಯ ಸಿದ್ದೇಶ್ವರ ಕಾಲೋನಿಯಲ್ಲಿ 10 ಲಕ್ಷ ರೂಪಾಯಿ ಹಣಕ್ಕಾಗಿ ಅಪಹರಿಸಿದ್ದ 10 ವರ್ಷದ ಬಾಲಕನನ್ನು ಪೊಲೀಸರು ರಕ್ಷಿಸಿದ್ದಾರೆ.
ಆಟೋ ರಿಕ್ಷಾದಲ್ಲಿ ಬಂದ ದುಷ್ಕರ್ಮಿಗಳು ಶಾಲಾ ಬಸ್ಗಾಗಿ ಕಾಯುತ್ತಿದ್ದ ಸುದರ್ಶನ್ ರಾಥೋಡ್ ಎಂಬ ಬಾಲಕನನ್ನು ಅಪಹರಿಸಿದ್ದರು. ಬಳಿಕ ಅಪಹರಣಕಾರರು ಬಾಲಕನ ತಂದೆ ಗುರುನಾಥ್ ಅವರಿಗೆ ಕರೆ ಮಾಡಿ 10 ಲಕ್ಷ ರೂಪಾಯಿ ನೀಡಿದರೆ ಅವರ ಮಗನನ್ನು ಬಿಡುವುದಾಗಿ ತಿಳಿಸಿದ್ದರು.
ದುಷ್ಕರ್ಮಿಗಳು ತಮ್ಮ ಮಗು ಸುರಕ್ಷಿತವಾಗಿರಬೇಕಾದರೆ ಪೊಲೀಸರಿಗೆ ಮೊರೆ ಹೋಗದಂತೆಯೂ ಎಚ್ಚರಿಕೆ ನೀಡಿದರು. ನಗರದ ಹೊರವಲಯದಲ್ಲಿರುವ ಪಾಲಾ ಗ್ರಾಮದ ಶಾಲೆಯೊಂದರ ಬಳಿ ಸುಲಿಗೆ ಮೊತ್ತವನ್ನು ಬ್ಯಾಗ್ನಲ್ಲಿ ಇಡುವಂತೆ ಅಪಹರಣಕಾರರು ಬಾಲಕನ ತಂದೆಗೆ ತಿಳಿಸಿದ್ದರು.

ಆ ನಂತರ ಬಾಲಕನ ತಂದೆ ಗುರುನಾಥ ಅಪಹರಣದ ಬಗ್ಗೆ ಕಲಬುರಗಿ ವಿಶ್ವವಿದ್ಯಾಲಯ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಆರಂಭದಲ್ಲಿ, ಪೊಲೀಸರು ಅಪಹರಣಕಾರರ ಸಂಪರ್ಕ ಸಂಖ್ಯೆಯನ್ನು ಪತ್ತೆಹಚ್ಚಲು ಪ್ರಯತ್ನಿಸಿದರು. ಬಳಿಕ ನಕಲಿ ಕರೆ ಮಾಡಲು ಬಳಸಿದ ಸಿಮ್ ಕಾರ್ಡ್ ಕಾಲ್ಪನಿಕ ಹೆಸರಿನಲ್ಲಿ ನೋಂದಾಯಿಸಲಾಗಿದೆ ಎಂದು ಕಂಡುಬಂದಿದೆ.
ಏತನ್ಮಧ್ಯೆ, ಅಪಹರಣಕಾರರನ್ನು ಹಿಡಿಯಲು ಪೊಲೀಸರು ನಗರದಾದ್ಯಂತ ಡ್ರ್ಯಾಗ್ನೆಟ್ ಅನ್ನು ಹರಡಿದರು. ಸ್ಥಳಕ್ಕೆ ಬಂದ ಆರೋಪಿಗಳು ಪೊಲೀಸರ ಇರುವಿಕೆಯನ್ನು ಗಮನಿಸಿ ಬಾಲಕನನ್ನು ಬಿಟ್ಟು ಪರಾರಿಯಾದರು. ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿ ಬಾಲಕನನ್ನು ರಕ್ಷಿದರು. ಬಳಿಕ ತಂದೆ ರಂಗನಾಥ್ ಅವರಿಗೆ ಅವರ ಮಗ ಸುದರ್ಶನ್ ರಾಥೋಡ್ನನ್ನು ಒಪ್ಪಿಸಲಾಯಿತು.
ಬಾಲಕನ ಅಪಹರಣಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಗಳು ಬಾಲಕನನ್ನು ಪಾಲಾ ಗ್ರಾಮದ ಹೊರವಲಯದ ನಿರ್ಜನ ಪ್ರದೇಶದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ ಎಂದು ಕಲಬುರಗಿ ಡಿಸಿಪಿ ಶ್ರೀನಿವಾಸುಲು ತಿಳಿಸಿದ್ದಾರೆ.
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications