ಜೆಸಿಬಿ ಹಿಡಿದು ಮಹಿಳೆಯ ಜೋಕಾಲಿ: ಅಧಿಕಾರಿಗಳು ಫುಲ್ ಗಲಿಬಿಲಿ!
ಜೈಪುರ್, ನವೆಂಬರ್.22: ಒಲಿದರೆ ನಾರಿ, ಮುನಿದರೆ ಮಾರಿ ಅನ್ನೋ ಮಾತು ಕೇಳಿದ್ದೀರಿ ಅಲ್ವಾ. ಇಲ್ಲೊಬ್ಬ ಮಹಿಳೆ ತೋರಿದ ರೌದ್ರಾವತಾರ ಇಂದು ಇಡೀ ದೇಶಾದ್ಯಂತ ಸಖತ್ ಸದ್ದು ಮಾಡುತ್ತಿದೆ.
ಅತಿಕ್ರಮಣ ಒತ್ತುವರಿ ತೆರವಿಗೆ ಧಾವಿಸಿದ ಅಧಿಕಾರಿಗಳ ವಿರುದ್ಧವೇ ಮಹಿಳೆ ಕೆರಳಿ ಕೆಂಡವಾಗಿದ್ದಾಳೆ. ಇದಿಷ್ಟೇ ಆಗಿದ್ದರೆ, ಅಷ್ಟರ ಮಟ್ಟಿಗೆ ಸುದ್ದಿ ಆಗುತ್ತಿರುಲಿಲ್ಲ. ಆದರೆ, ಅಕ್ರಮ ತೆರವಿಗೆ ಮುಂದಾದ ಜೆಸಿಬಿ ವಾಹನಗಳಿಗೆ ಅಂಜದೇ ಮಹಿಳೆ ಮೊಂಡುತನ ಪ್ರದರ್ಶಿಸಿದ್ದಾರೆ.
ಹಿರಿಯ ಅಧಿಕಾರಿಗಳ ಎದುರಿನಲ್ಲೇ ಅಕ್ರಮ ಕಟ್ಟಡಗಳ ತೆರವಿಗೆ ಮುಂದಾದ ಜೆಸಿಬಿ ವಾಹನಕ್ಕೆ ಮಹಿಳೆ ಜೋತು ಬಿದ್ದು ನೇತಾಡಿದ್ದಾಳೆ. ಈ ದೃಶ್ಯವನ್ನು ಸ್ಥಳೀಯರೊಬ್ಬರು ಸೆರೆ ಹಿಡಿದಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಅಷ್ಟಕ್ಕೂ ಇಂಥದೊಂದು ಘಟನೆ ನಡೆದಿದ್ದು ರಾಜಸ್ಥಾನದ ಜಾಲೋರ್ ನಲ್ಲಿ ನಡೆದಿದೆ. ಮಂಡವಾಲಾ ಗ್ರಾಮದ ರೇಖಾ ದೇವಿ, ಜಾಲೋರ್ ಗ್ರಾಮದಲ್ಲಿ ನಡೆಯುತ್ತಿದ್ದ ಅಕ್ರಮ ಒತ್ತುವರಿ ತೆರವಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸೊಪ್ಪು ಹಾಕದೇ ಅಧಿಕಾರಿಗಳು ಅಕ್ರಮ ತೆರವಿಗೆ ಮುಂದಾದಾಗ ರೇಖಾ ದೇವಿ ಸ್ವತಃ ತಾವೊಬ್ಬ ಮಹಿಳೆಯನ್ನೊದನ್ನೂ ಲೆಕ್ಕಿಸದೇ, ಜೆಸಿಬಿಗೆ ಅಡ್ಡಲಾಗಿ ನಿಂತಿದ್ದಾರೆ. ಹೀಗೆ ಮುಂದೆ ಸಾಗಿ ಬಂದ ವಾಹನಕ್ಕೂ ಅಂಜದೇ ಅದರ ಮೇಲೆ ಜೋತು ಬೀಳುವ ಪ್ರಹಸನಕ್ಕೆ ಕೈ ಹಾಕಿದ್ದಾರೆ.
#WATCH: Rekha Devi, sarpanch of Mandawala village tries to climb a JCB machine in an attempt to stop anti-encroachment drive in Jalore, Rajasthan. (21.11) pic.twitter.com/fxpd93TvVi
— ANI (@ANI) November 22, 2019
ಇನ್ನು, ಮಹಿಳೆಯ ತಮ್ಮ ಜಾಗವ್ನನು ಉಳಿಸಿಕೊಳ್ಳುವುದಕ್ಕೆ ಮಹಿಳೆ ತೋರಿದ ದುಸ್ಸಾಹಸವನ್ನು ನೋಡಿ ಜೆಸಿಬಿ ಚಾಲಕನೇ ವಾಹನವನ್ನು ಹಿಂದೆ ತೆಗೆದುಕೊಂಡಿದ್ದಾರೆ. ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications