ರಾಜಸ್ಥಾನ ಕಾಂಗ್ರೆಸ್ ಶಾಸಕರು ಜೈಸಲ್ಮೇರ್ಗೆ ಸ್ಥಳಾಂತರ!
ಜೈಪುರ, ಜುಲೈ 31 : ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಬೆಂಬಲಿಸುವ ರಾಜಸ್ಥಾನದ ಕಾಂಗ್ರೆಸ್ ಶಾಸಕರನ್ನು ಜೈಸಲ್ಮೇರ್ನ ಹೋಟೆಲ್ಗೆ ಸ್ಥಳಾಂತರ ಮಾಡಲಾಗಿದೆ. ಆಗಸ್ಟ್ 14ರ ತನಕ ಶಾಸಕರು ಹೋಟೆಲ್ನಲ್ಲಿಯೇ ಇರಲಿದ್ದಾರೆ.
ಶುಕ್ರವಾರ ಜೈಪುರ ವಿಮಾನ ನಿಲ್ದಾಣದಿಂದ ರಾಜಸ್ಥಾನದ ಕಾಂಗ್ರೆಸ್ ಶಾಸಕರು ಜೈಸಲ್ಮೇರ್ಗೆ ಪ್ರಯಾಣ ಬೆಳೆಸಿದರು. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಸಹ ತಮ್ಮ ಬೆಂಬಲಿಗ ಶಾಸಕರ ಜೊತೆ ತೆರಳಿದರು.
ಅಶೋಕ್ ಗೆಹ್ಲೋಟ್ ಗುರುವಾರ ಶಾಸಕರ ಸಭೆ ನಡೆಸಿ ಆಗಸ್ಟ್ 14ರ ತನಕ ಶಾಸಕರು ಹೋಟೆಲ್ನಲ್ಲಿಯೇ ಇರಬೇಕು. ಸಚಿವರು ವಿಧಾನಸೌಧಕ್ಕೆ ಹೋಗಿ ಇಲಾಖೆಯ ಕೆಲಸಗಳನ್ನು ಮಾಡಬೇಕು ಎಂದು ಸೂಚನೆ ಕೊಟ್ಟಿದ್ದರು.

ಸಚಿನ್ ಪೈಲೆಟ್ ಬಣ ಮತ್ತು ಬಿಜೆಪಿ ಶಾಸಕರನ್ನು ಸೆಳೆಯಲು ಭಾರಿ ಪ್ರಯತ್ನ ಮಾಡುತ್ತಿದೆ. ಆದ್ದರಿಂದ, ಎಲ್ಲರನ್ನೂ ಜೈಪುರದ ಹೋಟೆಲ್ನಿಂದ ಜೈಸಲ್ಮೇರ್ನ ಹೋಟೆಲ್ಗೆ ಸ್ಥಳಾಂತರ ಮಾಡಲಾಗಿದೆ.
ರಾಜಸ್ಥಾನ ವಿಧಾನಸಭೆ ಅಧಿವೇಶನ ಆಗಸ್ಟ್ 14ರಂದು ಆರಂಭವಾಗಲಿದೆ. ಅಲ್ಲಿಯ ತನಕ ಎಲ್ಲಾ ಶಾಸಕರು ಹೋಟೆಲ್ನಲ್ಲಿಯೇ ಇರಲಿದ್ದಾರೆ. ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲೆಟ್ ನಡುವಿನ ಅಸಮಾಧಾನ ಭುಗಿಲೆದ್ದ ಬಳಿಕ ಎಲ್ಲಾ ಶಾಸಕರು ಹೋಟೆಲ್ನಲ್ಲಿಯೇ ಇದ್ದಾರೆ.
ಮತ್ತೊಂದು ಕಡೆ ಸಚಿನ್ ಪೈಲೆಟ್ ಬಣದ ಶಾಸಕರು ಹರ್ಯಾಣದ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಸಚಿನ್ ಪೈಲೆಟ್ ಜೊತೆ 21, ಗೆಹ್ಲೋಟ್ ಜೊತೆ 103 ಶಾಸಕರು ಇದ್ದಾರೆ ಎಂದು ಅಂದಾಜಿಸಲಾಗಿದೆ.












Click it and Unblock the Notifications