ಬಿಜೆಪಿಯಿಂದ ನಾಲ್ವರು ಸಚಿವರು ಸೇರಿದಂತೆ 11 ಜನರ ಉಚ್ಛಾಟನೆ
ಜೈಪುರ, ನವೆಂಬರ್ 23: ಟಿಕೆಟ್ ಸಿಗದ ಕಾರಣಕ್ಕೆ ಬಂಡಾಯ ಎದ್ದಿರುವ ಬಿಜೆಪಿಯ ನಾಲ್ವರು ಸಚಿವರು ಸೇರಿದಂತೆ 11 ಸದಸ್ಯರನ್ನು ರಾಜಸ್ಥಾನ ಬಿಜೆಪಿ ಉಚ್ಛಾಟನೆ ಮಾಡಿದೆ.
ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಹನ್ನೊಂದು ಜನರನ್ನು ಕೈಬಿಟ್ಟಿರುವುದಾಗಿ ಬಿಜೆಪಿಯೇ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಸುರೇಂದ್ರ ಗೋಯಲ್, ಲಕ್ಷ್ಮಿನಾರಾಯಣ ದೇವೆ, ರಾಧೇಶ್ಯಾಮ್ ಗಂಗಾನಗರ್, ಹೇಮಸಿಂಗ್ ಭದಾನಾ, ರಾಜಕುಮಾರ್ ರಿನಾವಾ, ರಾಮೇಶ್ವರ್ ಭಾಟಿ, ಕುಲದೀಪ್ ಧಂಕಡ್, ದೀನ್ ದಯಾಳ್ ಕುಮಾವತ್. ಕೃಷ್ಣರಾಮ್ ನೈ, ಧಾನ್ ಸಿಂಗ್ ರಾವತ್ ಮತ್ತು ಅನಿತಾ ಕಟಾರಾ ಅವರನ್ನು ಉಚ್ಛಾಟಿಸಲಾಗಿದೆ ಎಂದು ಬಿಜೆಪಿ ತಿಳಿಸಿದೆ.
ಶಮನವಾಗದ ಬಂಡಾಯ, ಕಾಂಗ್ರೆಸ್ಸಿಗೆ ಕಾಂಗ್ರೆಸ್ಸಿಗರಿಂದಲೇ ತಾಪತ್ರಯ!
ಟಿಕೆಟ್ ಸಿಗದಿದ ಕಾರಣಕ್ಕೆ ಸ್ವತಂತ್ರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದ ಈ ಎಲ್ಲಾ ಸದಸ್ಯರು, ನಾಮಪತ್ರ ಹಿಂಪಡೆಯಲು ಒಪ್ಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ರಾಜಸ್ತಾನ ಅಖಾಡದಲ್ಲಿ ಮೋದಿ-ಯೋಗಿಯೇ ಬಿಜೆಪಿಗೆ ಜೀವಾಳ, ಕಾಂಗ್ರೆಸ್ ಗೆ ರಾಹುಲ್
ರಾಜಸ್ಥಾನದಲ್ಲಿ ಡಿಸೆಂಬರ್ 7 ರಂದು ಚುನಾವಣೆ ನಡೆಯಲಿದ್ದು, ಡಿ.11 ರಂದು ಫಲಿತಾಂಶ ಪ್ರಕಟವಾಗಲಿದೆ. 200 ಕ್ಷೇತ್ರಗಳ ರಾಜಸ್ಥಾನ ವಿಧಾನಸಭೆಯಲ್ಲಿ ಪ್ರಸ್ತುತ ಬಿಜೆಪಿಯ ವಸುಂಧರಾ ರಾಜೆ ನೇತೃತ್ವದ ಸರ್ಕಾರ ಅಸ್ತಿತ್ವದಲ್ಲಿದೆ.