ಕೊವಿಡ್-19 ಆತಂಕ: ರಾಜಸ್ಥಾನದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ ಸರ್ಕಾರ
ಜೈಪುರ್, ನವೆಂಬರ್,20: ರಾಜಸ್ಥಾನದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ರಾಜ್ಯದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರವು ಆದೇಶ ಹೊರಡಿಸಿದೆ. ನವೆಂಬರ್,21ರಿಂದ 144 ಕಾಯ್ದೆ ಅಡಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗುತ್ತಿದೆ.
ರಾಜ್ಯದ ಪ್ರತಿಯೊಂದು ಜಿಲ್ಲೆಗಳಲ್ಲಿ ಕೊರೊನಾವೈರಸ್ ಸೋಂಕಿನ ಪ್ರಮಾಣ ಮತ್ತು ಪ್ರಕರಣಗಳನ್ನು ಪರಾಮರ್ಶೆ ನಡೆಸಿ ಯಾವೆಲ್ಲ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಬೇಕು ಎನ್ನುವುದರ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಹಕ್ಕನ್ನು ಆಯಾ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ.
Coronavirus in India Live Updates: Live: ದೇಶದಲ್ಲಿ 90 ಲಕ್ಷದ ಗಡಿ ದಾಟಿದ ಒಟ್ಟು ಪ್ರಕರಣಗಳು
ರಾಜಸ್ಥಾನದಲ್ಲಿ ಕಳೆದ 24 ಗಂಟೆಗಳಲ್ಲೇ 2762 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿದ್ದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆಯು 237669ಕ್ಕೆ ಏರಿಕೆಯಾಗಿದೆ. ಒಂದು ದಿನದಲ್ಲಿ 14 ಮಂದಿ ಮಹಾಮಾರಿಗೆ ಬಲಿಯಾಗಿದ್ದು, ಸಾವಿನ ಸಂಖ್ಯೆಯು 2130ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ 2,14,616 ಸೋಂಕಿತರು ಗುಣಮುಖರಾಗಿದ್ದು, 20923 ಸಕ್ರಿಯ ಪ್ರಕರಣಗಳಿರುವ ಬಗ್ಗೆ ವರದಿಯಾಗಿದೆ.
ಅಹ್ಮದಾಬಾದ್
ನಲ್ಲೂ
ನಿಷೇಧಾಜ್ಞೆ
ಜಾರಿ:
ಗುಜರಾತ್
ನಲ್ಲಿ
ಕೊರೊನಾವೈರಸ್
ಸೋಂಕಿತ
ಪ್ರಕರಣಗಳ
ಸಂಖ್ಯೆ
ದಿನದಿಂದ
ದಿನಕ್ಕೆ
ಏರಿಕೆಯಾಗುತ್ತಿರುವ
ಹಿನ್ನೆಲೆ
ರಾಜಧಾನಿ
ಅಹ್ಮದಾಬಾದ್
ನಲ್ಲಿ
ರಾತ್ರಿ
ವೇಳೆ
ನಿಷೇಧಾಜ್ಞೆ
ಜಾರಿಗೊಳಿಸಲಾಗಿದೆ.
ಕೊವಿಡ್-19
ಸೋಂಕಿತ
ಪ್ರಕರಣಗಳ
ಸಂಖ್ಯೆ
ಹೆಚ್ಚುತ್ತಿರುವ
ಹಿನ್ನೆಲೆ
ನವೆಂಬರ್.20
ರಿಂದ
ಅನ್ವಯವಾಗುವಂತೆ
ರಾತ್ರಿ
9
ಗಂಟೆಯಿಂದ
ಬೆಳಗ್ಗೆ
6
ಗಂಟೆವರೆಗೂ
ನಿಷೇಧಾಜ್ಞೆ
ಜಾರಿಗೊಳಿಸಲು
ಅಹ್ಮದಾಬಾದ್
ಮಹಾನಗರ
ಪಾಲಿಕೆಯು
ನಿರ್ಧರಿಸಿದೆ.
Recommended Video
ಭಾರತದಲ್ಲಿ
ಕೊರೊನಾವೈರಸ್
ಪ್ರಕರಣ:
ದೇಶದಲ್ಲಿ
ಒಂದೇ
ದಿನ
ಒಂದೇ
ದಿನ
45,882
ಮಂದಿಗೆ
ಕೊರೊನಾವೈರಸ್
ಸೋಂಕು
ತಗುಲಿರುವುದು
ವೈದ್ಯಕೀಯ
ತಪಾಸಣೆಯಲ್ಲಿ
ದೃಢಪಟ್ಟಿದ್ದು,
ಒಟ್ಟು
ಸೋಂಕಿತ
ಪ್ರಕರಣಗಳ
ಸಂಖ್ಯೆಯು
90,04,366ಕ್ಕೆ
ಏರಿಕೆಯಾಗಿದೆ.
ಕಳೆದ
24
ಗಂಟೆಗಳಲ್ಲಿ44,807
ಮಂದಿ
ಸೋಂಕಿತರು
ಗುಣಮುಖರಾಗಿದ್ದು,
584
ಮಂದಿ
ಮಹಾಮಾರಿಗೆ
ಬಲಿಯಾಗಿದ್ದಾರೆ.
ಮಹಾಮಾರಿಗೆ
ಈವರೆಗೂ
1,32,162.
ಮಂದಿ
ಪ್ರಾಣ
ಬಿಟ್ಟಿದ್ದಾರೆ.
84,28,410
ಕೊವಿಡ್-19
ಸೋಂಕಿತರು
ಗುಣಮುಖರಾಗಿದ್ದು,
ಉಳಿದಂತೆ
4,43,794
ಸಕ್ರಿಯ
ಪ್ರಕರಣಗಳಿವೆ.
ದೇಶಾದ್ಯಂತ
ಕೊವಿಡ್-19
ಸೋಂಕಿತ
ಪ್ರಕರಣಕ್ಕೆ
ಸಂಬಂಧಿಸಿದಂತೆ
ಕೇಂದ್ರ
ಆರೋಗ್ಯ
ಮತ್ತು
ಕುಟುಂಬ
ಕಲ್ಯಾಣ
ಸಚಿವಾಲಯವು
ಮಾಹಿತಿ
ನೀಡಿದೆ.