ವಿಶ್ವದ ಹಿರಿಯಜ್ಜನೆಂಬ ದಾಖಲೆ ಹೊಂದಿದ್ದ ಜಪಾನ್ ನ ನೊನಕ ಇನ್ನಿಲ್ಲ
113 ವರ್ಷ ವಯಸ್ಸಿನ ಜಪಾನ್ ನ ಪುರುಷ ಮಸಜೋ ನೊನಕ ಭಾನುವಾರ ಸಾವನ್ನಪ್ಪಿದ್ದಾರೆ. 2018ರ ಏಪ್ರಿಲ್ ನಲ್ಲಿ ಗಿನ್ನಿಸ್ ವಿಶ್ವ ದಾಖಲೆಯಿಂದ ಅವರನ್ನು ಗುರುತಿಸಿ, ವಿಶ್ವದ ಅತ್ಯಂತ ಹಿರಿಯ ವಯಸ್ಸಿನ ಪುರುಷ ಎಂದು ಘೋಷಿಸಲಾಗಿತ್ತು. ಅಂದಹಾಗೆ ನೊನಕ ಅವರು ಜಪಾನ್ ನ ಉತ್ತರ ದ್ವೀಪ ಹೊಕ್ಕಾಯ್ಡೊನವರು. ಜುಲೈ 25, 1905ರಲ್ಲಿ ಜನಿಸಿದವರು.
ನೊನಕ ಅವರು ಉಸಿರಾಡುತ್ತಿಲ್ಲ ಎಂಬ ಸಂಗತಿಯನ್ನು ಭಾನುವಾರ ಬೆಳಗ್ಗೆ ಕುಟುಂಬ ಸದಸ್ಯರು ಗಮನಿಸಿದ್ದಾರೆ. ಮೃತಪಟ್ಟಿದ್ದಾರೆ ಎಂಬುದನ್ನು ಆ ನಂತರ ವೈದ್ಯರು ಖಚಿತಪಡಿಸಿದ್ದಾರೆ. ಜಗತ್ತಿನ ಅತ್ಯಂತ ಹಿರಿಯ ವಯಸ್ಸಿನ ಪುರುಷ ಎಂದು ಗಿನ್ನಿಸ್ ನಿಂದ 2018ನೇ ಇಸವಿ ಏಪ್ರಿಲ್ ನಲ್ಲಿ ಹೆಸರು ದಾಖಲಾಯಿತು.
ಆಗ ನೊನಕ ಅವರಿಗೆ 112 ವರ್ಷ 259 ದಿನ ವಯಸ್ಸು. ಪತ್ರಿಕೆಗಳನ್ನು ಓದುತ್ತಾ, ಸಿಹಿ-ಕೇಕ್ ಗಳನ್ನು ತಿನ್ನುತ್ತಾ, ಟೀವಿಯಲ್ಲಿ ಸುಮೋ ಕುಸ್ತಿ ನೋಡುತ್ತಾ ತಮ್ಮ ನಿವೃತ್ತಿ ಜೀವನವನ್ನು ನೊನಕ ಕಳೆದಿದ್ದಾರೆ ಎಂದು ಗಿನ್ನಿಸ್ ವಿಶ್ವ ದಾಖಲೆಯಲ್ಲಿ ಬರೆಯಲಾಗಿದೆ. ಬಿಸಿ ನೀರಿನ ಹಬೆ ತೆಗೆದುಕೊಳ್ಳುವುದು, ಸಿಹಿ ತಿನ್ನುವುದರಿಂದ ಹೆಚ್ಚು ಕಾಲ ಬಾಳಬಹುದು ಎಂಬುದು ನೊನಕ ನಂಬಿಕೆ ಆಗಿತ್ತಂತೆ. ಆದರೆ ಅವರ ಮಗಳ ಪ್ರಕಾರ, ಒತ್ತಡರಹಿತ ಜೀವನದ ಕಾರಣಕ್ಕೆ ದೀರ್ಘ ಕಾಲ ಬದುಕಿದ್ದರು.

ಇದುವರೆಗೆ ಸುದೀರ್ಘ ಕಾಲ ಬದುಕಿದ ಪುರುಷ ಎಂಬ ದಾಖಲೆ ಇರುವುದು ಜಪಾನಿನ ಜಿರೋಮನ್ ಕಿಮುರಾ ಹೆಸರಿನಲ್ಲಿ 2013ರ ಜೂನ್ ನಲ್ಲಿ ತೀರಿಕೊಂಡಾಗ ಅವರ ವಯಸ್ಸು 116 ವರ್ಷ 54 ದಿನ ಆಗಿತ್ತು.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications