ಬಾಹ್ಯಾಕಾಶದ ಮೊದಲ ಅಪರಾಧ ಪ್ರಕರಣಕ್ಕೆ ಹೊಸ ಟ್ವಿಸ್ಟ್
ನ್ಯೂಯಾರ್ಕ್, ಏಪ್ರಿಲ್ 11: ಬಾಹ್ಯಾಕಾಶದಿಂದಲೇ ಪತಿ ತನ್ನ ಬ್ಯಾಂಕ್ ಖಾತೆಯನ್ನು ಬಳಸಿದ್ದ ಎಂದು ಪತ್ನಿ ಮಾಡಿದ ಆರೋಪ ಈಗ ಸುಳ್ಳು ಎಂದು ಸಾಬೀತಾಗಿದೆ.
ಬಾಹ್ಯಾಕಾಶದಲ್ಲಿ ನಡೆದ ಮೊದಲ ಅಪರಾಧ ಪ್ರಕರಣ ಎಂದು ಇದನ್ನು ಪರಿಗಣಿಸಲಾಗಿತ್ತು.ಸಮ್ಮರ್ ವೋರ್ಡನ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ಸ್ಟೇಷನ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಳು. ಆಕೆಯ ಪತಿ ಜನವರಿಯಲ್ಲಿ ಎರಡು ಬಾರಿ ತನ್ನ ಬ್ಯಾಂಕ್ ಖಾತೆಯನ್ನು ಬಳಕೆ ಮಾಡಿದ್ದ ಎಂದು ದೂರು ನೀಡಿದ್ದಳು.
ವೋರ್ಡನ್ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿವೆ. ಇಬ್ಬರೂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.ವೋರ್ಡನ್ 2019ರಲ್ಲಿ ಫೆಡರಲ್ ಟ್ರೇಡ್ ಕಮಿಷನ್ಗೆ ದೂರು ನೀಡಿದ್ದಳು. ಆದರೆ ಆಕೆಯ ಖಾತೆಯಿಂದ ಯಾವುದೇ ಹಣ ವರ್ಗಾವಣೆಯಾಗಿರುವ ಕುರಿತು ಮಾಹಿತಿ ಇರಲಿಲ್ಲ.

ಮೆಕ್ಲೇನ್ ಮತ್ತು ವಾರ್ಡೆನ್(ವಾಯುದಳದ ಇಂಟೆಲಿಜೆನ್ಸ್ ಅಧಿಕಾರಿ) 2014ರಲ್ಲಿ ವಿವಾಹವಾಗಿದ್ದು, 2018ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಅನ್ನಾಮೆಕ್ಲೇನ್ ಮತ್ತು ಅವರ ಪತಿ ಸಮ್ಮರ್ವೋರ್ಡನ್ ಅವರು ಇತ್ತೀಚೆಗೆ ಪರಸ್ಪರ ವಿಚ್ಛೇದನ ಬಯಸಿ ಕೋರ್ಟ್ ಮೆಟ್ಟಿಲೇರಿದ್ದಾರೆ.
ಈ ದಂಪತಿ ಪುತ್ರ ಯಾರ ಬಳಿ ಇರಬೇಕೆಂಬ ವಿವಾದವು ನ್ಯಾಯಾಲಯದಲ್ಲಿದೆ. ಅನ್ನಾಮೆಕ್ಲೇನ್ಗೆ ತಮ್ಮ ಪತಿಯ ಬ್ಯಾಂಕ್ ಖಾತೆ ಲಾಗಿನ್ ಮಾಡುವ ಮಾಹಿತಿಗಳು ತಿಳಿದಿದ್ದವು.
ಅಮೆರಿಕದ ವಾಯುಸೇನೆಯ ಗುಪ್ತಚರ ಇಲಾಖೆಯ ಮಾಜಿ ಅಧಿಕಾರಿಯಾಗಿರುವ ವಾರ್ಡನ್ ಇತ್ತೀಚೆಗೆ ತಮ್ಮ ಖಾತೆಯಿಂದ ಹಣ ಕಟಾವಣೆಯಾಗಿರುವುದನ್ನು ಗಮನಿಸಿ ಬ್ಯಾಂಕಿನಿಂದ ಮಾಹಿತಿ ಪಡೆದಾಗ ಅಂತರಿಕ್ಷದಲ್ಲಿರುವ ಕಂಪ್ಯೂಟರ್ನಿಂದ ವಹಿವಾಟು ನಡೆದಿರುವುದು ಪತ್ತೆಯಾಗಿದೆ.
ನೆಲದ ಕಾನೂನು ಬಾಹ್ಯಾಕಾಶಕ್ಕೂ ಅನ್ವಯಿಸುತ್ತದೆಯೇ ಎನ್ನುವ ಪ್ರಶ್ನೆ ಎದ್ದಿದೆ. ಐಎಸ್ ಎಸ್ ನಲ್ಲಿ ಅಮೆರಿಕ, ಕೆನಡಾ, ಜಪಾನ್, ರಷ್ಯಾ ಹಾಗೂ ಕೆಲವು ಯುರೋಪಿಯನ್ ದೇಶಗಳು ಭಾಗಿಯಾಗಿವೆ. ದಂಪತಿಗೆ 2020ರ ಜನವರಿ 8ರಂದು ವಿಚ್ಛೇದನ ಸಿಕ್ಕಿದೆ.
ವೋರ್ಡನ್ ಪ್ರಾಥಮಿಕ ತನಿಖೆಯಲ್ಲಿ ಖಾಸಗಿ ಬ್ಯಾಂಕ್ ಖಾತೆಯೊಂದನ್ನು 2018ರಲ್ಲಿ ತೆರೆದಿದ್ದು ಪಾಸ್ವರ್ಡ್ ರೀ ಸೆಟ್ ಮಾಡಿದ್ದು, ಯಾವುದೇ ಎರಡನೇ ವ್ಯಕ್ತಿ ಬ್ಯಾಂಕ್ ಖಾತೆ ತೆರೆದಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಅವರು 2018ರಲ್ಲೇ ಬ್ಯಾಂಕ್ ಖಾತೆ ತೆರೆದಿದ್ದರೂ 2019ರವರೆಗೆ ಪಾಸ್ವರ್ಡ್ ಬದಲಾಯಿಸಿರಲಿಲ್ಲ ಎಂಬುದು ತಿಳಿದುಬಂದಿದೆ.
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications