ಸ್ಟಾರ್ ಬಕ್ಸ್ ನಲ್ಲಿ 'ಕಾಫಿ' ಬದಲಿಗೆ 'ವಿಷ' ಕೊಟ್ರಂತೆ!
ವಾಷಿಂಗ್ಟನ್, ಆಗಸ್ಟ್ 02: ವಿಶ್ವದ ಜನಪ್ರಿಯ ಕಾಫಿ ಶಾಪ್ ಜಾಲ ಸಂಸ್ಥೆ ಸ್ಟಾರ್ ಬಕ್ಸ್ ಮೇಲೆ ಅಮೆರಿಕದ ಮಹಿಳೆಯೊಬ್ಬರು ಗುರುತರ ಆರೋಪ ಮಾಡಿದ್ದಾರೆ. ಕಾಫಿ ಕೊಡಿ ಎಂದು ಆರ್ಡರ್ ಮಾಡಿದರೆ ರಾಸಾಯನಿಕ ಯುಕ್ತ ವಿಷದಂಥ ದ್ರವ ನೀಡಿದ್ದಾರೆ ಎಂದು ಆರೋಪಿಸಿ, ಭಾರಿ ಮೊತ್ತದ ಮೊಕದ್ದಮೆ ಹೂಡಿದ್ದಾರೆ.
ಉಥಾ ಮೂಲದ ಚೆರ್ಲಿ ಕಿಂಗೆರಿ ಎಂಬ ಮಹಿಳೆ ತನಗಾದ ನಷ್ಟಕ್ಕೆ, ನೋವಿಗೆ ಪರಿಹಾರ ಕೋರಿದ್ದಾರೆ. ಸ್ಟಾರ್ ಬಕ್ಸ್ ಸಂಸ್ಥೆಗೆ 2 ಮಿಲಿಯನ್ ಯುಎಸ್ ಡಾಲರ್ ಪರಿಹಾರ ನೀಡುವಂತೆ ಮೊಕದ್ದಮೆ ಹಾಕಿದ್ದಾರೆ. [ಬೆಂಗಳೂರಿನಲ್ಲೇ ಸ್ಟಾರ್ ಬಕ್ಸ್ ಕಾಫಿ ಸವಿಯಿರಿ]
ಸಾಲ್ಟ್ ಲೇಕ್ ಸಿಟಿಯ ಉತ್ತರ ಭಾಗದಲ್ಲಿದ್ದ ಒಂದು ಸ್ಟಾರ್ ಬಕ್ಸ್ ಕಾಫಿ ಶಾಪ್ ಗೆ ಹೋಗಿದ್ದೆ. ಕಾಫಿ ಆರ್ಡರ್ ಮಾಡಿದೆ. ನನಗೆ ಕೊಟ್ಟ ಕಾಫಿಯಲ್ಲಿ ಕೆಮಿಕಲ್ ಅಧಿಕವಾಗಿದ್ದರಿಂದ ನನ್ನ ಗಂಟಲು ಸಂಪೂರ್ಣ ಹಾಳಾಗಿದೆ ಎಂದು ಚೆರ್ಲಿ ಹೇಳಿದ್ದಾರೆ.

ಗಂಟಲಿನ ನರಗಳ ಬೇನೆ, ನಾಲಿಗೆ ರುಚಿ ಕಳೆದುಕೊಂಡಿರುವುದು, ಬಾಯಿ ಸುಟ್ಟ ಪರಿಸ್ಥಿತಿ, ಅನ್ನನಾಳದಲ್ಲಿ ತೊಂದರೆ, ತುಟಿಗಳ ಬಣ್ಣ ಹಾಳಾಗಿರುವುದು ಹೀಗೆ ತಮಗಾಗಿರುವ ತೊಂದರೆಗಳನ್ನು ವಿವರಿಸಿದ್ದಾರೆ.
ವೈದ್ಯಕೀಯ ವೆಚ್ಚವಾಗಿ 1.5 ಮಿಲಿಯನ್ ಡಾಲರ್ ಹಾಗೂ ಮಾನಸಿಕ ಒತ್ತಡ ಮತ್ತು ಇತರೆ ನಷ್ಟಕ್ಕಾಗಿ ಕನಿಷ್ಠ 500,000 ಯುಎಸ್ ಡಾಲರ್ ನೀಡಬೇಕು ಎಂದು ಕೋರಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ಟಾರ್ ಬಕ್ಸ್ ವಕ್ತಾರರು, ಕಾಫಿ ಮೇಕಿಂಗ್ ಯಂತ್ರಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ರಾಸಾಯನಿಕ ಬಳಕೆ ಮಾಡುವುದೇ ಇಲ್ಲ, ಗ್ರಾಹಕರ ಸುರಕ್ಷತೆ ನಮ್ಮ ಮೊದಲ ಆದ್ಯತೆ ಎಂದಿದ್ದಾರೆ.
ಕಾಫಿ ಜೊತೆಗೆ ಸ್ವಚ್ಛಗೊಳಿಸುವ ರಾಸಾಯನಿಕ ಮಿಶ್ರಣವಾದ ಪ್ರಕರಣ ಇದೇ ಮೊದಲಲ್ಲ. ಅಮೆರಿಕದ ಕಾಫಿ ಹೌಸ್ ವೊಂದರಲ್ಲಿ ವರ್ಷದ ಕೆಳಗೆ ಇದೇ ರೀತಿ ಘಟನೆ ನಡೆದಿತ್ತು. ಐಸ್ ಟೀ ಕುಡಿದ ಮಹಿಳೆಯೊಬ್ಬರ ಗಂಟಲುಬೇನೆಯಿಂದ ಆಸ್ಪತ್ರೆ ಸೇರಿದ್ದರು. (ಪಿಟಿಐ)
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications