ಕಪ್ಪು ಖಾತೆ ವಿವರ ಲೀಕ್ ಮಾಡಿದ್ದ ಎಲ್ಮಾರ್ ಎಲ್ಲಿ?

ಭಾರತದಲ್ಲಿ ಈಗ ನರೇಂದ್ರ ಮೋದಿ ಸರ್ಕಾರ ಬಂದಿರುವುದು ವಿದೇಶಗಳಲ್ಲಿನ ಬ್ಯಾಂಕ್ ಗಳಿಂದ ಕಪ್ಪು ಹಣ ವಾಪಸ್ ತರುವ ವಿಚಾರದಲ್ಲಿ ಸಾಕಷ್ಟು ಚರ್ಚೆ, ಕೋರ್ಟಿನಲ್ಲಿ ವಿಚಾರಣೆ ಎಲ್ಲವೂ ತಿಳಿದಿದೆ. ಅದರೆ, ಮೋದಿ ಸರ್ಕಾರವಿರಲಿ ಈ ಹಿಂದಿನ ಮನಮೋಹನ್ ಸಿಂಗ್ ಸರ್ಕಾರವಾಗಲಿ ವಿಳಂಬ ನೀತಿ ಅನುಸರಿಸುವುದರಲ್ಲಿ ಎತ್ತಿದ ಕೈ ಎಂದು ಎಲ್ಮಾರ್ ಹೇಳಿದ್ದಾರೆ.
ಬ್ಯಾಂಕಿನ ಖಾತೆದಾರರ ಸಂಪೂರ್ಣ ಮಾಹಿತಿ ಹೊಂದಿರದ ಹೊರತು ಈ ವಿಷಯದಲ್ಲಿ ಮುಂದುವರೆಯುವುದು ಕಷ್ಟ. ಸ್ವಿಸ್ ನಲ್ಲಿ ತನ್ನ ಖಾತೆದಾರರಿಗೆ ಗರಿಷ್ಠ ಪ್ರಮಾಣದ ಭದ್ರತೆ ಒದಗಿಸಲಾಗುತ್ತದೆ. ಸ್ವಿಸ್ ಸರ್ಕಾರದಿಂದ ಮಾಹಿತಿ ನಾಳೆ ಸಿಗಬಹುದು ಅಥವಾ 2019ರ ಹೊತ್ತ್ತಿಗೆ ಸಿಗಬಹುದು(ಈ ವೇಳೆಗೆ ಸ್ವಯಂಚಾಲಿತ ಮಾಹಿತಿ ವಿನಿಮಯ ವ್ಯವಸ್ಥೆ ಜಾರಿಗೊಳ್ಳಲಿದೆ) ಹೀಗಾಗಿ ಮಾಹಿತಿ ಕೈಗೆ ಸಿಗದ ಹೊರತು ಹೆಸರು ಬಹಿರಂಗ ಪಡಿಸುವುದು, ಕೋರ್ಟಿನಲ್ಲಿ ವಿಚಾರಣೆಗೆ ಹಾಜರಾಗುವುದು ಎಲ್ಲವೂ ಸಮಯ ವ್ಯರ್ಥ ಮಾಡಿದಂತೆ ಎಂದಿದ್ದಾರೆ. [ಟೈಮ್ ಲೈನ್ : ವಿದೇಶದ ಬ್ಯಾಂಕುಗಳಲ್ಲಿ ಕಪ್ಪು ಹಣ]
ಆದರೆ, ಕಪ್ಪು ಹಣದ ಬಗ್ಗೆ ಮಾಹಿತಿ ಕೋರಿ ಭಾರತ ಸರ್ಕಾರದಿಂದ ಯಾವುದೇ ಕೋರಿಕೆ ಬಂದಿಲ್ಲ ಹಾಗೂ ತಾನು ಯಾವುದೇ ಮಾಹಿತಿಯನ್ನು ಯುಪಿಎ ಸರ್ಕಾರಕ್ಕೆ ನೀಡಿಲ್ಲ ಎಂದು ಎಲ್ಮಾರ್ ಹೇಳಿದ್ದಾರೆ. ರಾಜಕಾರಣಿಗಳು, ಕ್ರಿಕೆಟರ್ ಗಳು ಇದ್ದಾರೆ ಎಂದು 2012ರಲ್ಲಿ ಸಿಎನ್ಎನ್ ಐಬಿಎನ್ ಜೊತೆ ಮಾತನಾಡುವಾಗ ಹೇಳಿದ್ದರು[ವಿವರ ಇಲ್ಲಿ ಓದಿ]
ಯಾರೀತ ಎಲ್ಮಾರ್ ?: ಜ್ಯೂರಿಚ್ ನಲ್ಲಿರುವ ಜ್ಯೂಲಿಯಸ್ ಬಾರ್ ಎಂಬ ಖಾಸಗಿ ಸ್ವಿಸ್ ಬ್ಯಾಂಕ್ ನಲ್ಲಿ ಸುಮಾರು ಎರಡು ದಶಕಗಳ ಕಾಲ ಉದ್ಯೋಗಿಯಾಗಿದ್ದರು. 2008ರಲ್ಲಿ ವಿಕಿಲೀಕ್ಸ್ ಗೆ ಬ್ಯಾಂಕಿನ ರಹಸ್ಯ ದಾಖಲೆಗಳನ್ನು ಒದಗಿಸಿ ಬೆಳಕಿಗೆ ಬಂದರು. ಒಬ್ಬ ಬ್ಯಾಂಕರ್ ಆಗಿ ನಾನು ನನ್ನ ಕರ್ತವ್ಯ ನಿಭಾಯಿಸಿದ್ದೇನೆ. ತೆರಿಗೆ ವಂಚಕರ ವಿರುದ್ಧ ದಾಖಲೆ ಸಂಗ್ರಹಿಸಿ ಅದನ್ನು ಜುಲಿಯನ್ ಅಸ್ಸಾಂಜೆಗೆ ಕೈಗಿತ್ತಿದ್ದೇನೆ ಇದರಲ್ಲಿ ತಪ್ಪೇನಿಲ್ಲ. ಇಲ್ಲಿರುವ ವ್ಯವಸ್ಥೆಯಿಂದ ಇಡೀ ಸಮಾಜ ಹಾಳಾಗುವುದನ್ನು ತಡೆಗಟ್ಟು ಈ ಕ್ರಮ ಕೈಗೊಂಡೆ ಎಂದು 17 ಜನವರಿ, 2011 ರಂದು ಬಹಿರಂಗವಾಗಿ ಎಲ್ಮಾರ್ ಹೇಳಿಕೆ ನೀಡಿದ್ದರು.[ಲಕೋಟೆ ಒಡೆಯುವ ಅಧಿಕಾರ ವಿಶೇಷ ತಂಡಕ್ಕೆ]
ಮಾಹಿತಿ ಹೊರ ಹಾಕಿದ್ದಕ್ಕಾಗಿ 7,200 ಸ್ವಿಸ್ ಫ್ರಾಂಕ್ ದಂಡ ಹಾಗೂ 240 ದಿನ ಜೈಲುವಾಸ ಕಂಡಿದ್ದ ಎಲ್ಮಾರ್ 25 ಜುಲೈ 2011ರಂದು ಬಿಡುಗಡೆ ಹೊಂದಿದ್ದರು. ಒಂದು ಅಂದಾಜಿನ ಪ್ರಕಾರ 2011ರಲ್ಲಿ ಸ್ವಿಸ್ ಬ್ಯಾಂಕುಗಳಲ್ಲಿರುವ ಒಟ್ಟಾರೆ ಭಾರತದ ಹಣ 11,673 ಕೋಟಿ ರು ಇತ್ತು ಎನ್ನಲಾಗಿದೆ. ನಂತರ 2012ರಲ್ಲಿ ಮತ್ತೊಮ್ಮೆ ಬಂಧನಕ್ಕೊಳಲ್ಪಟ್ಟು ಜೈಲು ಸೇರಿ ನಂತರ ಬಿಡುಗಡೆಯಾಗಿದ್ದರು. ಎಲ್ಮಾರ್ ಪರ ಅಮೆರಿಕ ಮೂಲದ ವಕೀಲ ಜಾಕ್ ಬ್ಲಮ್ ಬೆಂಬಲಕ್ಕೆ ನಿಂತಿದ್ದಾರೆ.ಅದರೆ, ಮತ್ತೊಮ್ಮೆ @SwissWB ನಾಲ್ಕೂವರೆ ವರ್ಷ ಶಿಕ್ಷೆ ಭೀತಿ ಎದುರಿಸುತ್ತಿದ್ದಾರೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications