ಭಾರತ- ಪಾಕಿಸ್ತಾನ ಬಾಂಧವ್ಯ ವೃದ್ಧಿ ನಮ್ಮ ಗುರಿ : ಇಮ್ರಾನ್
Recommended Video

ವಇಸ್ಲಾಮಾಬಾದ್, ಜುಲೈ 26: ಪಾಕಿಸ್ತಾನ ಚುನಾವಣೆಯಲ್ಲಿ ಸರ್ಕಾರ ರಚನೆಯ ಹೊಸ್ತಿಲಲ್ಲಿರುವ ಪಿಟಿಐ ಪಕ್ಷದ ಪರವಾಗಿ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಅವರು ಮತದಾರರಿಗೆ ಧನ್ಯವಾದ ಅರ್ಪಿಸಿದ್ದಾರೆ. ಗುರುವಾರ ಸಂಜೆ ಸುದ್ದಿಗೋಷ್ಠಿ ನಡೆಸಿದ ಇಮ್ರಾನ್ ಖಾನ್ ಅವರು, ಭಾರತದ ಜತೆ ಉತ್ತಮ ಬಾಂಧವ್ಯ ವೃದ್ಧಿಗೊಳಿಸುವುದು ನಮ್ಮ ಗುರಿ ಎಂದರು.
ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ, ಪಾಕಿಸ್ತಾನದಲ್ಲಿ ಬಡತನ ಹಾಗೂ ಆರೋಗ್ಯ ಸಮಸ್ಯೆ ಅಧಿಕವಾಗಿದ್ದು, ಇದರತ್ತ ಹೆಚ್ಚಿನ ಗಮನ ಹರಿಸಲಾಗುವುದು. ಭಾರತದ ಜೊತೆ ಚರ್ಚಿಸಿ ಕಾಶ್ಮೀರ ಸಮಸ್ಯೆ ಬಗೆಹರಿಸುವತ್ತ ನಮ್ಮ ನಿಲುವು ಇದೆ ಎಂದರು.

ಚೀನಾ ಜತೆಗಿನ ಸಂಬಂಧ ಬಗ್ಗೆ ಪ್ರಸ್ತಾಪಿಸಿದ ಇಮ್ರಾನ್ ಖಾನ್, ಚೀನಾದ ದೇಶದ ಅನೇಕ ನೀತಿಗಳನ್ನು ಅಳವಡಿಸಿಕೊಂಡು, ಭಾರತದೊಡನೆ ಚರ್ಚಿಸಬೇಕಿದೆ ಎಂದು ಹೇಳಿದರು.
ಈ ಕ್ಷಣದ ಫಲಿತಾಂಶದಂತೆ ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಅವರ ಪಿಟಿಐ (64), ಪಿಎಂಎಲ್ -ಎನ್ (27), ಪಿಪಿಪಿ (13), ಇತರೆ (13) ರಷ್ಟಿದೆ. ಸರಳ ಬಹುಮತಕ್ಕೆ 137 ಸ್ಥಾನಗಳು ಬೇಕಿದೆ.
ಇಮ್ರಾನ್ ಖಾನ್ ಸುದ್ದಿಗೋಷ್ಠಿ ಮುಖ್ಯಾಂಶಗಳು:
* ನಾನು ಅಲ್ಲಾಹ್ ನಿಗೆ ಮೊದಲಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. 22 ವರ್ಷಗಳ ಕಾಲ ಹೋರಾಟಕ್ಕೆ ಈಗ ಪ್ರತಿಫಲ ಸಿಗುತ್ತಿದೆ. ನನ್ನ ಕನಸಿನ ಪಾಕಿಸ್ತಾನ ನಿರ್ಮಿಸುವ ಅವಕಾಶ ಸಿಗುತ್ತಿದೆ.
* ನಾನು ರಾಜಕೀಯ ಪ್ರವೇಶಿಸಬೇಕೆಂಬುದು ಅಲ್ಲಾಹ್ ನ ಆದೇಶವಾಗಿತ್ತು. ನನಗೆ ಎಲ್ಲವನ್ನು ಆತ ನೀಡಿದ್ದಾನೆ. ರಾಜಕೀಯ ಪ್ರವೇಶಿಸುತ್ತಿದ್ದಂತೆ ಮೊಹಮ್ಮದ್ ಅಲಿ ಜಿನ್ನಾ ಅವರ ಕನಸಿನ ಪಾಕಿಸ್ತಾನ ನಿರ್ಮಾಣದ ಗುರಿ ಹೊತ್ತುಕೊಂಡೆ.
* ಚೀನಾದ ಮಾದರಿಯಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಬೇಕಾಗಿದೆ. ಬಡತನದ ರೇಖೆಯಲ್ಲಿದ್ದ 70 ಕೋಟಿ ಮಂದಿಯನ್ನು ಆರ್ಥಿಕ ಸುಸ್ಥಿತಿಗೆ ತಂದ ಚೀನಾ ನಮಗೆ ಮಾದರಿ.
* ಪಾಕಿಸ್ತಾನವನ್ನು ಮದೀನಾ ಮಾದರಿಯಲ್ಲಿ ಅಭಿವೃದ್ಧಿಶೀಲ ಪ್ರದೇಶವನ್ನಾಗಿಸಬೇಕಿದೆ ಪ್ರವಾದಿಗಳ ಕಾಲದ ಆಡಳಿತ ವ್ಯವಸ್ಥೆ ತರಬೇಕಿದೆ.
* ವ್ಯಾಪಾರ, ವಹಿವಾಟಿನ ಆರ್ಥಿಕ ವೆಚ್ಚವನ್ನು ತಗ್ಗಿಸಬೇಕಿದೆ. ಬಂಡವಾಳ ಹೂಡಿಕೆ ಹಿಗ್ಗಿಸಬೇಕಿದೆ.
* ಪ್ರಧಾನ ಮಂತ್ರಿಗಳ ನಿವಾಸದಲ್ಲಿ ನೆಲೆಸಲು ನಾನು ಇಚ್ಛೆ ಪಡುವುದಿಲ್ಲ. ಅದನ್ನು ಶಿಕ್ಷಣ ಸಂಸ್ಥೆಯಾಗಿ ಪರಿವರ್ತಿಸುತ್ತೇನೆ. ನಾನು ಬಾದ್ ಶಹಾ ರೀತಿಯಲ್ಲಿ ಜೀವಿಸಲಾರೆ
* ಭಾರತದ ಮಾಧ್ಯಮಗಳು ನನ್ನನ್ನು ವಿಲನ್ ಎಂಬಂತೆ ಬಿಂಬಿಸಿವೆ. ಸಾಮಾಜಿಕ ನ್ಯಾಯ, ಉತ್ತಮ ಬಾಂಧವ್ಯ,ಶಾಂತಿ ನೆಲೆಸುವುದು ನಮಗೆ ಮುಖ್ಯ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ












Click it and Unblock the Notifications