ಆ.10: ದೇಶ, ವಿದೇಶಗಳ ಹೆಡ್ ಲೈನ್ ನ್ಯೂಸ್
ಬೆಂಗಳೂರು, ಆ.10: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
9.50 : ಭಾರತದಂಥ ಪ್ರಜಾಪ್ರಭುತ್ವ ದೇಶಗಳಲ್ಲಿ ಮಾತ್ರ ಚಹಾವಾಲನ ಪುತ್ರನೊಬ್ಬ ಪ್ರಧಾನಿಯಾಗಬಲ್ಲ, ಕೀನ್ಯಾದ ಮಗುವೊಂದು ಪ್ರಭಾವಿ ಅಧ್ಯಕ್ಷನಾಗಬಲ್ಲ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಚಕ್ ಹಗೆಲ್ ಹೇಳಿದ್ದಾರೆ.
9.45 : ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಿದ್ದು, ಕೀನ್ಯಾ ಮೂಲದ ತಂದೆ, ಅಮೆರಿಕನ್ ತಾಯಿಯ ಪುತ್ರ ಬರಾಕ್ ಒಬಾಮಾ ಅಧ್ಯಕ್ಷರಾಗಿರುವುದನ್ನು ಹಗೆಲ್ ಸ್ಮರಿಸಿಕೊಂಡರು.

9.30: ಮಾರಕ ವೈರಾಣು ಭಾರತವನ್ನು ಪ್ರವೇಶಿಸಿದ್ದು, ಅಫ್ರಿಕಾದಿಂದ ದೆಹಲಿಗೆ ಬಂದ ಇಬ್ಬರಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ.
9.25: ದೇಶದ ಐವರು ಗಣ್ಯರಿಗೆ ಭಾರತ ರತ್ನ ಪ್ರಶಸ್ತಿ ನೀಡಲು ನರೇಂದ್ರ ಮೋದಿ ಸರ್ಕಾರ ನಿರ್ಧರಿಸಿದ್ದಾರೆ.
9.15 : ಟಿಬೇಟ್ ನಲ್ಲಿ ಸಂಭವಿಸಿದ ಬಸ್ ಆಪಘಾತದಲ್ಲಿ 44 ಜನ ಮೃತಪಟ್ಟಿದ್ದಾರೆ.
9.10 : ಮಾಜಿ ಕೇಂದ್ರ ಜಸ್ವಂತ್ ಸಿಂಗ್ ಅವರ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡು ಬಂದಿಲ್ಲ, ಐಸಿಯುನಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ.
9.00: ಉತ್ತರಪ್ರದೇಶದಲ್ಲಿ ಇತ್ತೀಚಿಗೆ ಸಂಭವಿಸಿದ ಕೋಮುಗಲಭೆಗಳೆಲ್ಲವೂ ಉದ್ದೇಶಪೂರ್ವಕ ಪೂರ್ವನಿಯೋಜಿತ ಕೃತಕ ಸೃಷ್ಟಿ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.












Click it and Unblock the Notifications