ಉಕ್ರೇನ್ಗೆ ಪರಿಹಾರ ನೀಡುವ ನಿರ್ಣಯದ ಪರ ಯುಎನ್ಜಿಎ ಮತ
ನವದೆಹಲಿ, ನವೆಂಬರ್ 15: ವಿಶ್ವಸಂಸ್ಥೆ ಸಾಮಾನ್ಯ ಸಭೆ (ಯುಎನ್ಜಿಎ) ಉಕ್ರೇನ್ನ ರಷ್ಯಾದ ಆಕ್ರಮಣದಿಂದ ಉಂಟಾದ ಹಾನಿಗಳು ಪರಿಹಾರ ಹಾಗೂ ವಶಪಡಿಸಿಕೊಂಡ ಪ್ರದೇಶದ ವಾಪಸಾತಿ ಕಾರ್ಯವಿಧಾನವನ್ನು ರಚಿಸುವ ನಿರ್ಣಯದ ಪರವಾಗಿ ಮತ ಚಲಾಯಿಸಿತು.
ಒಟ್ಟು 94 ದೇಶಗಳು ಯುಎನ್ಜಿಎ ನಿರ್ಣಯದ ಪರವಾಗಿ ಮತ ಚಲಾಯಿಸಿದರೆ 14 ದೇಶಗಳು ವಿರುದ್ಧವಾಗಿ ಮತ ಚಲಾಯಿಸಿದವು. ಆದರೆ ಭಾರತ ಸೇರಿದಂತೆ 73 ರಾಷ್ಟ್ರಗಳು ಮತದಾನದಿಂದ ದೂರ ಉಳಿದವು. ವಿಶ್ವಸಂಸ್ಥೆ ವಿಶ್ವಸಂಸ್ಥೆ ಸಾಮಾನ್ಯ ಸಭೆ ಉಕ್ರೇನ್ ವಿರುದ್ಧ ರಷ್ಯಾದ ಆಕ್ರಮಣಕ್ಕೆ ಜವಾಬ್ದಾರಿಯಾಗಿರಬೇಕು ಎಂದು ತಿಳಿಸಿದೆ. 94 ದೇಶಗಳು ಉಕ್ರೇನ್ಗೆ ನೆರವಾಗಬೇಕು ಎಂದು ತಿಳಿಸಿವೆ. ಅಲ್ಲದೆ ಆಗಿರುವ ಹಾನಿಗಳನ್ನು ದೃಢೀಕರಿಸಲು ನೋಂದಾಯಿಸಿಕೊಳ್ಳಬೇಕು ಉಂಟಾದ ಹಾನಿಯಿಂದ ಹೊರಬರಲು ಪರಿಹಾರವನ್ನು ಅಗತ್ಯವನ್ನು ಸೂಚಿಸಬೇಕು ಎಂದು ಹೇಳಿದೆ.
ಪಾಶ್ಚಿಮಾತ್ಯ ದೇಶಗಳು ಸಲ್ಲಿಸಿದ ಎರಡು ನಿರ್ಣಯವು ಉಕ್ರೇನ್ ವಿರುದ್ಧ ರಷ್ಯಾ ಆಕ್ರಮಣವನ್ನು ಖಂಡಿಸಿದೆ. ನಿರ್ಣಯದ ಪರ ಮತ ಹಾಕಿದ ಜೆಕ್ ಗಣರಾಜ್ಯವು ಉಕ್ರೇನ್ನಲ್ಲಿ ರಷ್ಯಾದಿಂದ ಉಂಟಾದ ಹಾನಿಗೆ ಆ ದೇಶವನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ತಿಳಿಸಿದೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ರಷ್ಯಾ ಉಕ್ರೇನ್ನಲ್ಲಿನ ತನ್ನ ಯುದ್ಧದಿಂದ ಉಂಟಾದ ಹಾನಿಗಳಿಗೆ ಜವಾಬ್ದಾರರು ಎಂದು ಹೇಳಿ ಮತ ಹಾಕಿದೆ. ಝೆಕಿಯಾ ದೇಶವು ವಿಶ್ವಸಂಸ್ಥೆ ಸಾಮಾನ್ಯ ಸಭೆಯ ನಿರ್ಣಯವನ್ನು ಬೆಂಬಲಿಸಿದ್ದು ಹಾನಿಯಿಂದಾದ ಪರಿಹಾರಗಳಿಗೆ ಕಾರ್ಯವಿಧಾನವನ್ನು ಆರಂಭಿಸಲು ಶಿಫಾರಸು ಮಾಡಿದೆ ಎಂದು ಜೆಕ್ ಗಣರಾಜ್ಯ ಯುಎನ್ ಮಿಷನ್ನಲ್ಲಿ ಟ್ವೀಟ್ ಮಾಡಿದೆ.
ಫೆಬ್ರವರಿ ಕೊನೆಯ ವಾರದಲ್ಲಿ ಪ್ರಾರಂಭವಾದ ರಷ್ಯಾದ ಮಿಲಿಟರಿ ಕಾರ್ಯಾಚರಣೆಯಿಂದ ಇಲ್ಲಿಯವರೆಗೆ ಎರಡೂ ದೇಶಗಳ ಸಾವಿರಾರು ಮಿಲಿಟರಿ ಯೋಧರ ಸಾವಿಗೆ ಕಾರಣವಾಗಿದೆ. ಉಕ್ರೇನ್ ಮೇಲೆ ರಷ್ಯಾ ಯುದ್ಧದಿಂದ ಜಾಗತಿಕ ಆಹಾರ ಭದ್ರತೆಯ ಮೇಲೆ ಭಾರೀ ಹೊಡೆತ ಬಿದ್ದಿದೆ. ವ್ಯಾಪಾರ ವಸ್ತುಗಳ ಬೆಲೆಗಳ ತೀವ್ರ ಹೆಚ್ಚಳಕ್ಕೂ ಕಾರಣವಾಗಿದೆ.
ರಷ್ಯಾದೊಂದಿಗೆ ಉಕ್ರೇನ್ ಯುದ್ಧ ಆರಂಭವಾದಗಿನಿಂದಲೂ ಭಾರತದ ದ್ವಿಪಕ್ಷೀಯ ಸಂಬಂಧಗಳ ಮೇಲೆ ಪರಿಣಾಮ ಬೀರಿದ್ದು ರಷ್ಯಾದಿಂದ ಆಮದು ಮಾಡಿಕೊಳ್ಳುವ ತೈಲ ರಫ್ತು, ಬೆಲೆಯಲ್ಲೂ ಹೊಡೆತ ನೀಡಿದೆ. ಭಾರತವು ರಷ್ಯಾವನ್ನು ಖಂಡಿಸಿಲ್ಲ. ಬದಲಾಗಿ ಅಲಿಪ್ತ ನೀತಿಯನ್ನು ಕಾಯ್ದುಕೊಂಡಿದ್ದು, ಸ್ವತಂತ್ರವಾಗಿದೆ. ವಿಶ್ವಸಂಸ್ಥೆಯ ವೇದಿಕೆಗಳಲ್ಲಿ ಹಿಂಸಾಚಾರ, ಶಾಂತಿ ಮತ್ತು ರಾಜತಾಂತ್ರಿಕತೆಯ ನಿಲುವಿಗೆ ಬದ್ಧತೆ ಕಾಯ್ದುಕೊಳ್ಳಲು ಆಗ್ರಹಿಸುತ್ತಿದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ












Click it and Unblock the Notifications