ಚಿತ್ರಗಳಲ್ಲಿ: ಲಿಬಿಯಾ ಪ್ರಧಾನಿ ಅಪಹರಣ, ಇತ್ಯಾದಿ
ಬೆಂಗಳೂರು, ಅ.10: ಹೊಡೆದರೆ ಆನೆಯನ್ನೇ ಹೊಡೆಯ ಬೇಕು ಎನ್ನುವ ಗಾದೆ ಮಾತಿನಂತೆ ಶಸ್ತ್ರಸಜ್ಜಿತ ಅಪಹರಣಕಾರರು ಲಿಬಿಯಾ ದೇಶದ ಪ್ರಧಾನಿಯನ್ನೇ ಅಪಹರಿಸಿದ್ದಾರೆ. ಲಿಬಿಯಾ ದೇಶದಲ್ಲಿನ ಭದ್ರತಾ ವ್ಯವಸ್ಥೆ ಎಷ್ಟು ಕೀಳು ಮಟ್ಟದಲ್ಲಿದೆ ಅಂದರೆ ಅಪಹರಣಕಾರರು ಪ್ರಧಾನಿಯನ್ನು ಎಲ್ಲಿ ಒತ್ತೆ ಇಟ್ಟಿದ್ದಾರೆಂದು ಇದುವರೆಗೂ ತಿಳಿದು ಬಂದಿಲ್ಲ ಎಂಬ ವರದಿಗಳನ್ನು ಸರ್ಕಾರ ತಳ್ಳಿ ಹಾಕಿದೆ. ಅಸಲಿಗೆ ಅಪಹರಣ ನಡೆದಿಲ್ಲ. ಪ್ರಧಾನಿಯನ್ನು ಬಂಧಿಸಲಾಗಿದೆ ಎಂದು ಸರ್ಕಾರಿ ಮೂಲಗಳು ಹೇಳಿವೆ
ಕೊರಿಂಥಿಯನ್ ಹೋಟೆಲ್ ನಿಂದ ಸಿನಿಮಿಯ ರೀತಿಯಲ್ಲಿ ಲಿಬಿಯಾ ಪ್ರಧಾನಿ ಅಲಿ ಜೈದಾನ್ ಅವರನ್ನು ಗುರುವಾರ ದುಷ್ಕರ್ಮಿಗಳು ಅಪಹರಿಸಿದ್ದಾರೆ ಎಂದು ಸರ್ಕಾರಿ ಮೂಲಗಳು ಹೇಳಿವೆ.
ಪ್ರಧಾನಿ ಅಪಹರಣದ ಪ್ರತ್ಯಕ್ಷದರ್ಶಿ, ಹೋಟೆಲ್ ಕ್ಲರ್ಕ್ನ ಹೇಳಿಕೆ ಪ್ರಕಾರ, ಪ್ರಧಾನಿ ಅಲಿ ಜೈದಾನ್ ಅವರು ಹೋಟೆಲ್ನ ಹೊರಗೆ ತಮ್ಮ ಕಾರಿಗಾಗಿ ಕಾಯುತ್ತಿದ್ದ ವೇಳೆ ದೀಢಿರನೆ ದಾಳಿ ಮಾಡಿದ ಬಂದೂಕುಧಾರಿ ಬಂಡುಕೋರರು ಪ್ರಧಾನಿಯನ್ನು ಅಪಹರಿಸಿಕೊಂಡು ಹೋದರು ಎಂದು ತಿಳಿಸಿದ್ದಾನೆ. ಈ ವೇಳೆ ಯಾವುದೇ ಗುಂಡಿನ ಚಕಮಿಕಿ ನಡೆದ ವರದಿಯಾಗಿಲ್ಲ.
ಲಿಬಿಯಾ ಸರ್ವಾಧಿಕಾರಿ ಅಮ್ಮರ್ ಗಡಾಫಿ ಅಂತ್ಯದ ಬಳಿಕವೂ ಲಿಬಿಯಾ ದೇಶದಲ್ಲಿ ಶಾಂತಿ ನೆಲೆಸುವ ಸೂಚನೆಗಳು ಕಾಣುತ್ತಿಲ್ಲ. ಹೊಸ ಸರ್ಕಾರವನ್ನು ಬಂಡುಕೋರರು ಇನ್ನಿಲ್ಲದಂತೆ ಕಾಡುತ್ತಿದ್ದಾರೆ. ಗಡಾಫಿಯನ್ನು ಕಿತ್ತೊಗೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಲಿಬಿಯಾ ಮಿಲಿಟರಿ ಪಡೆ ಅಂದಿನಿಂದಲೂ ಕೇಂದ್ರ ಸರ್ಕಾರಕ್ಕೆ ಹೆಚ್ಚು ಸ್ವಾಯತ್ತತೆ ನೀಡುವಂತೆ ಆಗ್ರಹಿಸಿದ್ದವು. ಸ್ವಾಯತ್ತತೆ ನೀಡಲು ಒಪ್ಪದ ಹಿನ್ನೆಲೆಯಲ್ಲಿ ಈ ಅಪಹರಣ ನಡೆದಿದೆ ಎನ್ನಲಾಗುತ್ತಿದೆ. ಮಿಕ್ಕ ಸುದ್ದಿಗಳು ಚಿತ್ರಗಳಲ್ಲಿ ನೋಡಿ

ಲಿಬಿಯಾ ಪ್ರಧಾನಿ ಅಪಹರಣ
ಲಿಬಿಯಾ ಸರ್ವಾಧಿಕಾರಿ ಅಮ್ಮರ್ ಗಡಾಫಿ ಅಂತ್ಯದ ಬಳಿಕವೂ ಲಿಬಿಯಾ ದೇಶದಲ್ಲಿ ಶಾಂತಿ ನೆಲೆಸುವ ಸೂಚನೆಗಳು ಕಾಣುತ್ತಿಲ್ಲ. ಹೊಸ ಸರ್ಕಾರವನ್ನು ಬಂಡುಕೋರರು ಇನ್ನಿಲ್ಲದಂತೆ ಕಾಡುತ್ತಿದ್ದಾರೆ. ಗಡಾಫಿಯನ್ನು ಕಿತ್ತೊಗೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಲಿಬಿಯಾ ಮಿಲಿಟರಿ ಪಡೆ ಅಂದಿನಿಂದಲೂ ಕೇಂದ್ರ ಸರ್ಕಾರಕ್ಕೆ ಹೆಚ್ಚು ಸ್ವಾಯತ್ತತೆ ನೀಡುವಂತೆ ಆಗ್ರಹಿಸಿದ್ದವು. ಸ್ವಾಯತ್ತತೆ ನೀಡಲು ಒಪ್ಪದ ಹಿನ್ನೆಲೆಯಲ್ಲಿ ಈ ಅಪಹರಣ ನಡೆದಿದೆ ಎನ್ನಲಾಗುತ್ತಿದೆ.

ಶಿವಮೊಗ್ಗದ ಹೊಸ ಅತಿಥಿ
ಶಿವಮೊಗ್ಗದ ತಾವರಕೊಪ್ಪೆ ಸಿಂಹಧಾಮದಲ್ಲಿ ಕೃತಿಕಾ ಎಂಬ ಕರಿಚಿರತೆಗೆ ಇತ್ತೀಚೆಗೆ ಹುಟ್ಟಿದ ಕೂಸಿಗೆ ಮಿಂಚುಳ್ಳಿ ಎಂಬ ಹೆಸರಿಡಲಾಗಿದೆ.

ಹೇಮಾ ಮಾಲಿನಿ ಭಂಗಿ
ಮೈಸೂರು ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನ ನೀಡಿದ ನಟಿ ಹೇಮಮಾಲಿನಿ ಭಂಗಿ

ಬ್ರಾವೋ ಡ್ಯಾನ್ಸ್
ವೆಸ್ಟ್ ಇಂಡೀಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರ ಬ್ರಾವೋ ಅವರು ತಮಿಳಿನ ಚಿತ್ರ 'ಉಲಾ' ದಲ್ಲಿ ನಟಿಸಿದ್ದು ನೃತ್ಯದಲ್ಲಿ ತೊಡಗಿದ್ದಾರೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications