Get Updates
Get notified of breaking news, exclusive insights, and must-see stories!

ನೂಪುರ್ ಶರ್ಮಾ ಬೆಂಬಲಕ್ಕೆ ನಿಂತ ನೆದರ್‌ಲ್ಯಾಂಡ್‌ ಸಂಸದ

ನವದೆಹಲಿ, ಜೂ. 8: ಪ್ರವಾದಿ ಮೊಹಮ್ಮದ್‌ ಪೈಗಂಬರ್‌ ವಿವಾದದಿಂದ ಅಮಾನತ್ತಾಗಿರುವ ನೂಪುರ್ ಶರ್ಮಾ ಬೆಂಬಲಕ್ಕೆ ನೆದರ್‌ಲ್ಯಾಂಡ್‌ ಸಂಸದರೊಬ್ಬರು ನಿಂತಿದ್ದಾರೆ. ಅಲ್ಲದೆ ನೂಪುರ್ ಶರ್ಮಾರನ್ನು ಬೆಂಬಲಿಸಲು ಭಾರತಕ್ಕೆ ಒತ್ತಾಯಿಸಿದ್ದಾರೆ.

Recommended Video

      Arvind Kejriwal ವಿರುದ್ಧ ಚುನಾವಣೆಗೆ ನಿಂತಿದ್ದು ಇದೆ Nupur sharma | OneIndia Kannada

      ನೆದರ್‌ಲ್ಯಾಂಡ್‌ನ ರಾಜಕಾರಣಿಯಾಗಿರುವ ಗೀರ್ಟ್‌ ವೈಲ್ಡರ್ಸ್‌ ವಿವಾದ ಮಧ್ಯೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದಲ್ಲದೆ ಭಯೋತ್ಪಾದಕ ಸಂಘಟನೆ ಅಲ್‌ಕೈದಾ ವಿರುದ್ಧ ಕಿಡಿಕಾರಿದ್ದು, ಅದರ ಬೆದರಿಕೆಗಳಿಗೆ ಬಗ್ಗಬಾರದು ಎಂದು ಭಾರತಕ್ಕೆ ಕರೆ ನೀಡಿದ್ದಾರೆ.

      ಬಿಜೆಪಿ ರಾಷ್ಟ್ರೀಯ ವಕ್ತಾರೆ ಆಗಿದ್ದ ನೂಪುರ್ ಶರ್ಮಾ ವಿವಾದಕ್ಕೆ ಸಂಬಂಧಿಸಿದಂತೆ ಟ್ವೀಟ್‌ ಮಾಡಿರುವ ಗೀರ್ಟ್‌ ವೈಲ್ಡರ್ಸ್‌, "ನೂಪುರ್ ಶರ್ಮಾ ಅವರು ಸತ್ಯವನ್ನೇ ಮಾತನಾಡಿದ್ದಾರೆ. ಅವರಿಗೆ ಭಯೋತ್ಪಾದಕ ಸಂಘಟನೆ ಅಲ್‌ಖೈದಾದಿಂದ ಬೆದರಿಕೆ ಕರೆಗಳು ಬಂದಿದೆ. ಈ ಅಲ್‌ಖೈದ ಸಂಘಟನೆ ಯಾವಾಗಲೂ ಎಂದಿಗೂ ಭಯೋತ್ಪಾದನೆ, ಅನಾಗರಿಕತೆಯನ್ನು ಹೇಳುತ್ತಾರೆ. ಆದ್ದರಿಂದ ಶರ್ಮಾ ಅವರನ್ನು ಬೆಂಬಲಿಸಿ" ಎಂದು ಅವರು ಹೇಳಿದ್ದಾರೆ.

      The Netherlands MP Geert Wilders supports Nupur Sharma

      ಗೀರ್ಟ್ ವೈಲ್ಡರ್ಸ್ ಅವರು ಟ್ವಿಟ್ಟರ್‌ನಲ್ಲಿ "ಅಲ್ ಖೈದಾದಂತಹ ಇಸ್ಲಾಮಿಕ್ ಭಯೋತ್ಪಾದಕರಿಗೆ ಎಂದಿಗೂ ಶರಣಾಗಬೇಡಿ. ಅವರು ಅನಾಗರಿಕತೆಯನ್ನೇ ಮೆರೆಯುತ್ತಾರೆ. ಇಡೀ ಭಾರತ ದೇಶವು ನೂಪುರ್ ಶರ್ಮಾ ಅವರನ್ನು ಬೆಂಬಲಿಸಬೇಕು. ಅಲ್ ಖೈದಾ ಮತ್ತು ತಾಲಿಬಾನ್ ನನ್ನನ್ನು ವರ್ಷಗಳ ಹಿಂದೆ ತಮ್ಮ ಹಂತಕರ ಪಟ್ಟಿಯಲ್ಲಿ ಸೇರಿಸಿದ್ದರು. ಆದರೆ ನಾನು ಎಂದಿಗೂ ತಲೆಬಾಗಿಲ್ಲ" ಎಂದಿದ್ದಾರೆ.

      ಸತ್ಯವನ್ನು ಮಾತನಾಡಿದ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿದ್ದಕ್ಕಾಗಿ ನನ್ನನ್ನು ಕೊಲ್ಲಲು ಬಯಸುವ ಮುಸ್ಲಿಮರಿಂದ ನನಗೆ ಈಗ ಅನೇಕ ಕೊಲೆ ಬೆದರಿಕೆಗಳು ಬಂದಿವೆ. ಆದರೆ ಶರ್ಮಾ ಅವರು ಮೊಹಮ್ಮದ್‌ ಪೈಗಂಬರ್‌ ಬಗ್ಗೆ ಸತ್ಯವನ್ನೇ ಮಾತನಾಡಿದ್ದಾರೆ ಎಂದು ವೈಲ್ಡರ್ಸ್ ತಿಳಿಸಿದ್ದಾರೆ.

      The Netherlands MP Geert Wilders supports Nupur Sharma

      "ಭಯೋತ್ಪಾದಕರಿಗೆ ನಾನು 'ನೀವು ನರಕಕ್ಕೆ ಹೋಗಿ ನಾನು ಯಾವಾಗಲೂ ಸತ್ಯವನ್ನೇ ಮಾತನಾಡುತ್ತೇನೆ. ನಿಮಗೆ ಯಾವುದೇ ನೈತಿಕತೆ ಇಲ್ಲ. ನಾವು ಸ್ವಾತಂತ್ರಕ್ಕಾಗಿ ನಿಲ್ಲುತ್ತೇವೆ' ಎಂಬ ಸಂದೇಶ ನೀಡುತ್ತೇನೆ" ಎಂದು ಹೇಳಿದ್ದಾರೆ.

      ಕೆಲವು ದಿನಗಳ ಹಿಂದೆ ಭಾರತೀಯ ಜನತಾ ಪಕ್ಷವು (ಬಿಜೆಪಿ) ಪ್ರವಾದಿ ಮುಹಮ್ಮದ್ ಪೈಗಂಬರ್‌ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಪಕ್ಷದ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಅಮಾನತುಗೊಳಿಸಿತ್ತು. ಇದು ಅನೇಕ ಇಸ್ಲಾಮಿಕ್ ಮತ್ತು ಗಲ್ಫ್ ರಾಷ್ಟ್ರಗಳಿಂದ ಟೀಕೆಗೆ ಗುರಿಯಾಗಿತ್ತು.
      ನಂತರ ನುಪೂರ್‌ ಶರ್ಮಾ ಪ್ರವಾದಿ ಬಗ್ಗೆಗಿನ ತಮ್ಮ ಹೇಳಿಕೆಗಳಿಗೆ ಕ್ಷಮೆಯಾಚಿಸಿದ್ದರು. ಬಳಿಕ ನನಗೆ ಹಾಗೂ ಕುಟುಂಬಕ್ಕೆ ಕೊಲೆ ಹಾಗೂ ಅತ್ಯಾಚಾರದ ಬೆದರಿಕೆ ಕರೆಗಳು ಬರುತ್ತಿವೆ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ದೆಹಲಿಯ ಅವರ ನಿವಾಸ ಹಾಗೂ ಅವರ ಕುಟುಂಬಕ್ಕೆ ಪೊಲೀಸರು ಭದ್ರತೆಯನ್ನು ಒದಗಿಸಿದ್ದರು.

      (ಒನ್ಇಂಡಿಯಾ ಸುದ್ದಿ)

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+