ಗ್ರೇಟ್ ಎಸ್ಕೇಪ್ : ಡ್ರಗ್ ಸ್ಮಗ್ಲರ್ ಗುಜ್ಮನ್ ಪರಾರಿ
ಮೆಕ್ಸಿಕೋ, ಜುಲೈ 14: ಜೈಲಿನಿಂದ ಎಸ್ಕೇಪ್ ಆಗುವುದು ಹೇಗೆ ಎಂಬುದರ ಬಗ್ಗೆ ಭಾರತೀಯ ಸಿನಿಮಾಗಳು ಸೇರಿದಂತೆ ಇಂಗ್ಲೀಷ್ ನಲ್ಲಿ ಸರಣಿ ಎಪಿಸೋಡುಗಳೇ ಬಂದಿವೆ. ಎಸ್ಕೇಪ್ ಸ್ಟೋರಿ ಇಷ್ಟಪಡುವವರಿಗೆ ಇಲ್ಲೊಂದು ರೋಚಕ ಕಥೆ ಇದೆ. ಕುಖ್ಯಾತ ಡ್ರಗ್ ಸ್ಮಗ್ಲರ್ 'ಎಲ್ ಚಾಪೋ' ಅಲಿಯಾಸ್ ಜಾವೋಕ್ವಿ ಗುಜ್ಮನ್ ಜೈಲಿನಿಂದ ಪರಾರಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಈ ಮುಂಚೆ ಕೂಡಾ 'ಪ್ಯಾಪಿಲಾನ್' ಮಾದರಿ ಜೈಲಿನಿಂದ ಎಸ್ಕೇಪ್ ಆಗಿದ್ದ ಗುಜ್ಮನ್ ಈಗಲೂ ಕೂಡಾ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗುಜ್ಮನ್ ತೊಡಿದ್ದ ಸುರಂಗದ ಜಾಡು ಹಿಡಿದು ಹೊರಟ ಪೊಲೀಸರು ನಿರ್ಜನ ಪ್ರದೇಶವೊಂದರ ಪಾಳು ಬಿದ್ದ ನಿವೇಶನದ ತನಕ ಬಂದು ನಿಂತಿದ್ದಾರೆ. ಸುಮಾರು 1.5 ಕಿ.ಮೀ ಉದ್ದದ ಸುರಂಗ ಕಂಡು ದಂಗಾಗಿದ್ದಾರೆ.
ಸುರಂಗದಲ್ಲಿ ಎಸಿ: ಗುಜ್ಮನ್ ಪರಾರಿಯಾಗಲು ಆತನಿಗೆ ಇತರೆ ಕೈದಿಗಳು ನೆರವಾಗಿದ್ದಾರೆ. ನೆಲದಿಂದ 10 ಮೀಟರ್ ಆಳಕ್ಕೆ ಸುಮಾರು 1.5 ಕಿ.ಮೀ ದೂರಕ್ಕೆ ಸುರಂಗ ಕೊರೆದಿದ್ದಾರೆ. ಸುರಂಗದಲ್ಲಿ ವಿದ್ಯುತ್ ಹಾಗೂ ಏರ್ಕಂಡೀಶನಿಂಗ್ ಕೂಡಾ ಒದಗಿಸಲಾಗಿದೆ. ಜೈಲಿನ ಬಾತ್ರೂಮಿನಿಂದ ಹೊರಟ ಸುರಂಗ ಆತನ ಮನೆಯೊಳಗೆ ದಾರಿ ತೋರಿಸುತ್ತದೆ.
ಕಳೆದ ಶನಿವಾರ 8.52ಕ್ಕೆ ಸ್ನಾನಕ್ಕೆ ಹೋದ ಗುಜ್ಮನ್ ಕಾವಲು ಕಾಯಲು ಭದ್ರತಾ ಪಡೆ ನೇಮಿಸಲಾಗಿತ್ತು. ಅಲ್ಟಿಪ್ಲಾನೊ ಜೈಲಿನಲ್ಲಿ 24 ತಾಸು ಸಿಸಿಟಿವಿ ನಿಗಾ ವಹಿಸಲಾಗಿತ್ತು. ಆದರೆ, ಎಲ್ಲಾ ಕಣ್ಣಿಗೆ ಮಣ್ಣೆರೆಚಿ ಪರಾರಿಯಾಗಿದ್ದಾನೆ.

ಈ ಹಿಂದೆ ಕೂಡ ಎಸ್ಕೇಪ್ ಆಗಿದ್ದ
ಈ ಹಿಂದೆ 1993ರಲ್ಲಿ ಗ್ವಾಟೆಮಾಲಾದಲ್ಲಿ ಬಂಧಿಯಾಗಿದ್ದ ಗುಜ್ಮನ್ 2001ರಲ್ಲೂ ಇದೇ ರೀತಿ ಎಸ್ಕೇಪ್ ಆಗಿದ್ದ, ಆಗ ಜೈಲಿನ ಸಿಬ್ಬಂದಿಗೆ ಲಂಚ ನೀಡಿದ್ದ. ಬಟ್ಟೆ ಸಾಗಿಸುವ ಲಾಂಡ್ರಿ ವಾಹನದಲ್ಲಿ ತೂರಿಕೊಂಡು ಪರಾರಿಯಾಗಿದ್ದ. ಸಿನೊಲಾ ಕಾರ್ಟೆಲ್ ಎಂಬ ಡ್ರಗ್ ದಂಧೆ ಮಾಫಿಯಾದ ಕಿಂಗ್ ಆಗಿರುವ ಗುಜ್ಮನ್ ಸುಮಾರು 100 ಕೋಟಿ ಡಾಲರ್ ಗೂ ಅಧಿಕ ಆಸ್ತಿ ಹೊಂದಿದ್ದಾನೆ.
ಡ್ರಗ್ ದಂಧೆ ಮಾಫಿಯಾದ ಮುಖ್ಯಸ್ಥ
ಸಿನೊಲಾ ಕಾರ್ಟೆಲ್ ಎಂಬ ಡ್ರಗ್ ದಂಧೆ ಮಾಫಿಯಾದ ಮುಖ್ಯಸ್ಥನಾಗಿರುವ ಗುಜ್ಮನ್ ಕೊಕೈನ್, ಮೆಥಾಂಫೆಟಮೈನ್ಸ್, ಮಾರಿಜುವಾ ಮಾರಿ ಸುಮಾರು 100 ಕೋಟಿ ಡಾಲರ್ನಷ್ಟು ಆಸ್ತಿ ಹೊಂದಿದ್ದಾನೆ.

ಅಧ್ಯಕ್ಷ ಎರಿಕ್ ಪೇನಾ ನೇಟೊಗೆ ಅವರಿಗೆ ಮುಖಭಂಗ
ಗುಜ್ಮನ್ ಪರಾರಿಗೆ ಜೈಲಿನ ಅಧಿಕಾರಿಗಳೂ ನೆರವು ನೀಡಿರುವ ಸಾಧ್ಯತೆಯಿದೆ. ತೀವ್ರ ವಿಚಾರಣೆ ಮುಂದುವರೆದಿದೆ ಎಂದು ಪೊಲೀಸ್ ಆಯುಕ್ತ ಮಾಂಟೆ ಅಲೆಕ್ಸಾಂಡೋ ರುಬಿಡೋ ಹೇಳಿದ್ದಾರೆ. ಗುಜ್ಮನ್ ಪರಾರಿ ಪ್ರಕರಣದಿಂದ ಅಧ್ಯಕ್ಷ ಎರಿಕ್ ಪೇನಾ ನೇಟೊಗೆ ಅವರಿಗೆ ಮುಖಭಂಗವಾಗಿದೆ.
ಸುರಂಗದಲ್ಲಿ ವಿದ್ಯುತ್ ಹಾಗೂ ಏರ್ಕಂಡೀಷನಿಂಗ್
ಸುರಂಗದಲ್ಲಿ ವಿದ್ಯುತ್ ಹಾಗೂ ಏರ್ಕಂಡೀಷನಿಂಗ್ ಕೂಡಾ ಒದಗಿಸಲಾಗಿದೆ. ಜೈಲಿನ ಬಾತ್ರೂಮಿನಿಂದ ಹೊರಟ ಸುರಂಗ ಆತನ ಮನೆಯೊಳಗೆ ದಾರಿ ತೋರಿಸುತ್ತದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications