Breaking: ಅಫ್ಘಾನ್ ಶಾಲೆಯಲ್ಲಿ ಆತ್ಮಹತ್ಯಾ ಬಾಂಬ್ ದಾಳಿ: 19 ಬಲಿ
ಕಾಬೂಲ್, ಸೆ. 30: ಅಫ್ಘಾನಿಸ್ತಾನ ರಾಜಧಾನಿ ನಗರಿಯಲ್ಲಿ ಶುಕ್ರವಾರ ಆತ್ಮಹತ್ಯಾ ಬಾಂಬ್ ದಾಳಿ ಘಟನೆ ಸಂಭವಿಸಿದ್ದು, ಈ ದುರಂತದಲ್ಲಿ 19 ಮಂದಿ ಬಲಿಯಾಗಿದ್ದಾರೆ ಎಂದು ಕಾಬೂಲ್ ನಗರದ ಪೊಲೀಸ್ ಇಲಾಖೆಯ ವಕ್ತಾರರೊಬ್ಬರು ಮಾಹಿತಿ ನೀಡಿದ್ಧಾರೆ.
ಕಾಬೂಲ್ನ ಶಿಯಾ ಸಮುದಾಯದವರು ಹೆಚ್ಚು ಇರುವ ದಶ್ತಿ ಬಾರ್ಚಿ ಎಂಬ ಸ್ಥಳದ ಶಾಲೆಯೊಂದರ ಬಳಿ ಶುಕ್ರವಾರ ಬೆಳಗ್ಗೆ ಪ್ರಬಲ ಬಾಂಬ್ ಸ್ಫೋಟ ಸಂಭವಿಸಿದೆ ಎಂದು ತಾಲಿಬಾನ್ ಪೊಲೀಸ್ ವಕ್ತಾರ ಖಾಲಿದ್ ಜದ್ರಾನ್ ಹೇಳಿದ್ದಾರೆ.
ಈ ದಾಳಿ ಘಟನೆಗೆ ಯಾರು ಕಾರಣ ಎಂಬುದು ಗೊತ್ತಾಗಿಲ್ಲ. ಯಾವ ಸಂಘಟನೆಯೂ ದಾಳಿಯ ಹೊಣೆ ಹೊತ್ತಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಘಟನೆಯಲ್ಲಿ 27 ಮಂದಿ ಕೂಡ ಗಾಯಗೊಂಡಿದ್ದಾರೆ. ಸತ್ತವರಲ್ಲಿ ಬಹುತೇಕರು ವಿದ್ಯಾರ್ಥಿಗಳೇ ಆಗಿದ್ದಾರೆ.

ದಶ್ತಿ ಬಾರ್ಚಿಯಲ್ಲಿ ಈ ಹಿಂದೆಯೂ ಇಂಥ ಬಾಂಬ್ ದಾಳಿ ಘಟನೆಗಳಾಗಿದ್ದವು. ತಾಲಿಬಾನ್ ಆಡಳಿತಕ್ಕೆ ಬಂದ ಬಳಿಕ ಆಫ್ಘಾನಿಸ್ತಾನದ ವಿವಿಧೆಡೆ ಆಗಾಗ್ಗೆ ದಾಳಿಗಳಾಗುತ್ತಿವೆ. ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯವರು ಹೆಚ್ಚಿನ ದಾಳಿ ಮಾಡಿದ್ದಾರೆ.
ದಶ್ತಿ ಬಾರ್ಚಿಯಲ್ಲಿ ಶಿಯಾ ಮುಸ್ಲಿಂ ಪಂಥಕ್ಕೆ ಸೇರಿದ ಹಜಾರ ಸಮುದಾಯದವರು ಹೆಚ್ಚಿದ್ದಾರೆ. ಇದೇ ಸಮುದಾಯವನ್ನು ಗುರಿಯಾಗಿಸಿ ಐಸಿಸ್ ಹಿಂದೆ ಕೆಲ ಬಾಂಬ್ ದಾಳಿಗಳನ್ನು ಮಾಡಿದ್ದುಂಟು.
ಅಫ್ಘಾನಿಸ್ತಾನದಲ್ಲಿ ಹಜಾರ ಸಮುದಾಯದ ಮೇಲೆ ಐಸಿಸ್ ಮಾತ್ರವಲ್ಲ, ತಾಲಿಬಾನ್ ಸಂಘಟನೆ ಕೂಡ ಗುರಿಯಾಗಿಸಿ ದಾಳಿ ಮಾಡಿದ್ದಿದೆ. ಅದರಲ್ಲೂ ದಶ್ತ್-ಎ-ಬಾರ್ಚಿ ಪ್ರದೇಶದಲ್ಲಂತೂ ಇತ್ತೀಚಿನ ವರ್ಷಗಳಲ್ಲಿ ಬಹಳ ಭೀಕರ ರಕ್ತಪಾತಗಳಾಗಿವೆ.

ತಾಲಿಬಾನ್ ಆಡಳಿತಕ್ಕೆ ಬರುವ ಮುನ್ನ ಇದೇ ದಶ್ತ್ ಎ ಬಾರ್ಚಿಯಲ್ಲಿನ ಇನ್ನೊಂದು ಶಾಲೆಯ ಮೇಲೆ ಉಗ್ರರು ದಾಳಿ ಮಾಡಿದ್ದರು. ಆ ಘಟನೆಯಲ್ಲಿ ೮೫ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದ್ದರು. ಅವರಲ್ಲಿ ಹೆಚ್ಚಿನವರು ವಿದ್ಯಾರ್ಥಿನಿಯರೇ ಆಗಿದ್ದರು. ಮೂರು ಬಾಂಬ್ಗಳು ಸ್ಫೋಟಗೊಂಡು ಸಂಭವಿಸಿದ ಆ ದುರಂತದಲ್ಲಿ 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
2020ರಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯು ಇದೇ ಪ್ರದೇಶದ ಬೇರೊಂದು ಶಾಲೆ ಮೇಲೆ ದಾಳಿ ಮಾಡಿ 24 ಮಕ್ಕಳನ್ನು ಕೊಂದು ಹಾಕಿತ್ತು. ಕಳೆದ ಮೂರ್ನಾಲ್ಕು ವರ್ಷದಲ್ಲಿ ದಶ್ತ್-ಎ-ಬಾರ್ಚಿಯಲ್ಲಿ ಶಾಲೆಗಳನ್ನು ಗುರಿಯಾಗಿಸಿ ಏಳೆಂಟು ಬಾರಿ ಬಾಂಬ್ ದಾಳಿಗಳಾಗಿರುವುದು ತಿಳಿದುಬಂದಿದೆ.
ಶಾಲೆಗಳೇ ಯಾಕೆ ಟಾರ್ಗೆಟ್?
ಹಿಂದೆ ಪಾಕಿಸ್ತಾನದ ಪೇಶಾವರದ ಮಿಲಿಟರಿ ಶಾಲೆಯೊಂದರಲ್ಲಿ ತಾಲಿಬಾನ್ ಉಗ್ರ ಸಂಘಟನೆಯವರು ದಾಳಿ ಮಾಡಿ ನೂರಾರು ಮಕ್ಕಳನ್ನು ಕೊಂದು ಹಾಕಿದ್ದರು. ಹೆಣ್ಮಕ್ಕಳು ಶಾಲೆಗೆ ಹೋಗಿ ಕಲಿಯುವುದನ್ನು ತಾಲಿಬಾನ್ ಹಾಗೂ ಇತರ ಉಗ್ರ ಸಂಘಟನೆಗಳು ವಿರೋಧಿಸುತ್ತವೆ. ಅಫ್ಘಾನಿಸ್ತಾನದಲ್ಲಿ ಹೆಣ್ಮಕ್ಕಳ ವಿದ್ಯಾಭ್ಯಾಸಕ್ಕೆ ಅಡಚಣೆ ಇದೆ. ಆದರೆ ಹಜಾರ ಸಮುದಾಯದವರಿರುವ ಪ್ರದೇಶಗಳಲ್ಲಿನ ಶಾಲೆಗಳಲ್ಲಿ ಹೆಣ್ಮಕ್ಕಳ ಶಿಕ್ಷಣಕ್ಕೆ ಅವಕಾಶ ಇದೆ. ಹೀಗಾಗಿ, ಅಲ್ಲಿನ ಶಾಲೆಗಳ ಮೇಲೆ ಉಗ್ರರು ಪದೇ ಪದೇ ದಾಳಿ ನಡೆಸುತ್ತಿದ್ದಾರೆ. ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಡಳಿತಾರೂಢ ತಾಲಿಬಾನ್ ಸಂಘಟನೆಯೇ ಹಜಾರಾ ಸಮುದಾಯವನ್ನು ಗುರಿಯಾಗಿಸಿ ದಾಳಿಗಳಿಗೆ ನೆರವು ಮಾಡುತ್ತಿದೆ ಎಂಬ ಆರೋಪಗಳಿವೆ.
(ಒನ್ಇಂಡಿಯಾ ಸುದ್ದಿ)
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications