ಮಂಗಳ ಗ್ರಹ ಮಾದರಿ ರಾಕೆಟ್ ಭೂಸ್ಪರ್ಶದ ವೇಳೆ ಸ್ಫೋಟ
ಟೆಕ್ಸಾಸ್, ಫೆಬ್ರವರಿ 3: ಮಂಗಳ ಗ್ರಹದ ಸಂಚಾರಕ್ಕಾಗಿ ವಿನ್ಯಾಸಗೊಳಿಸಲಾಗಿದ್ದ ಅಮೆರಿಕದ ಸ್ಪೇಸ್ಎಕ್ಸ್ನ ಮಾದರಿ ರಾಕೆಟ್ ಪರೀಕ್ಷಾರ್ಥ ಪ್ರಯೋಗದ ವೇಳೆ ಭೂಸ್ಪರ್ಶವಾಗುವಾಗ ಸ್ಫೋಟಗೊಂಡಿದೆ. ಭೂಮಿಯ ಕಕ್ಷೆ, ಚಂದ್ರ, ಮಂಗಳ ಗ್ರಹ ಹಾಗೂ ಅದರಾಚೆಗೆ ಸಿಬ್ಬಂದಿ ಮತ್ತು ಸರಕು ಎರಡನ್ನೂ ಸಾಗಿಸಲು ಅನುಕೂಲಕರವಾಗುವಂತೆ ವಿನ್ಯಾಸಗೊಳಿಸಲಾಗಿದ್ದ ಸಂಪೂರ್ಣ ಮರುಬಳಕೆಯ ಸಾರಿಗೆ ವ್ಯವಸ್ಥೆ ಇದಾಗಿತ್ತು ಸ್ಪೇಸ್ ಎಕ್ಸ್ ತಿಳಿಸಿದೆ.
ಸ್ಟಾರ್ಶಿಪ್ ನೌಕೆಯ ಮಾದರಿ ಇದ್ದಾಗಿದ್ದು ಮಂಗಳ ಗ್ರಹಕ್ಕೆ ಪರೀಕ್ಷಾರ್ಥ ಪ್ರಯೋಗವಾಗಿ ಉಡಾವಣೆ ಮಾಡಲಾಗಿತ್ತು. ಅದತೆ ಅದು ನೆಲಕ್ಕೆ ಸ್ಪರ್ಶಿಸುವ ಸಂದರ್ಭದಲ್ಲಿ ಸ್ಫೋಟಗೊಂಡಿದೆ. ಕಳೆದ ಡಿಸೆಂಬರ್ನಲ್ಲಿ ನಡೆದ ಪರೀಕ್ಷಾರ್ಥ ಹಾರಾಟವೂ ಇದೇ ರೀತಿ ಸ್ಫೋಟದ ಅಂತ್ಯ ಕಂಡಿತ್ತು.
ರಾಕೆಟ್ ಇಳಿಯುವ ಸಂದರ್ಭದಲ್ಲಿ ಅದರ ಮೂರು ಎಂಜಿನ್ಗಳು ಹೊತ್ತಿಕೊಳ್ಳುವ, ಆರುವ ಮತ್ತು ಪುನಃ ಚಾಲೂ ಆಗುವಂತೆ ಯೋಜಿಸಲಾಗಿತ್ತು. ಆದರೆ ಅದು ಉಡಾವಣಾ ಕೇಂದ್ರಕ್ಕೆ ಮರಳಿ ತಲುಪುವಾಗ ಬೆಂಕಿಯ ಉಂಡೆಗಳಾಗಿ ಸ್ಫೋಟಗೊಂಡಿದೆ. ನೇರ ಪ್ರಸಾರದಲ್ಲಿ ಈ ಘಟನೆ ದಾಖಲಾಗಿದೆ. ಮುಂದೆ ಓದಿ.

ಸುರಕ್ಷತಾ ನಿಯಮ ಅಡ್ಡಿ
160 ಅಡಿ ಉದ್ದದ ರಾಕೆಟ್ ಮಾದರಿಯು ಕೆಲವು ವಾರಗಳ ಹಿಂದೆಯೇ ಪರೀಕ್ಷಾರ್ಥ ಹಾರಾಟ ನಡೆಸಬೇಕಿತ್ತು. ಆದರೆ ಈ ಪರೀಕ್ಷೆಯು ಸಾರ್ವಜನಿಕ ಸುರಕ್ಷತೆಗೆ ಹಾನಿಯುಂಟುಮಾಡಬಹುದು ಎಂಬ ಕಾರಣಕ್ಕೆ ದಕ್ಷಿಣ ಟೆಕ್ಸಾಸ್ನಲ್ಲಿನ ಪರೀಕ್ಷಾ ಕೇಂದ್ರದಲ್ಲಿನ ಕಾರ್ಯಾಚರಣೆಗೆ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್ಎಎ) ಅನುಮತಿ ನೀಡಿರಲಿಲ್ಲ.
|
10 ಕಿಮೀ ಹಾರಿದ್ದ ರಾಕೆಟ್
ಸಾರ್ವಜನಿಕ ಸುರಕ್ಷತಾ ನಿಯಮಗಳನ್ನು ಪಾಲಿಸುವ ಸೂಕ್ತ ಕ್ರಮಗಳನ್ನು ತೆಗೆದುಕೊಂಡ ಬಳಿಕ ಪರೀಕ್ಷೆಗೆ ಅನುಮತಿ ನೀಡಲಾಗಿತ್ತು. ಸುಮಾರು 10 ಕಿಮೀ ಎತ್ತರ ಸಾಗಿದ್ದ ರಾಕೆಟ್ ಅಲ್ಲಿಂದ ತಿರುಗಿ ಭೂಮಿಯತ್ತ ಮರಳುವಾಗ ಸುರಕ್ಷಿತವಾಗಿ ಭೂಸ್ಪರ್ಶ ಮಾಡುವಲ್ಲಿ ವಿಫಲವಾಗಿದೆ.

143 ಉಪಗ್ರಹಗಳ ಉಡಾವಣೆ
ಖ್ಯಾತ ಉದ್ಯಮಿ ಎಲೋನ್ ಮಸ್ಕ್ ಅವರ ಮಾಲೀಕತ್ವದ ಖಾಸಗಿ ಬಾಹ್ಯಾಕಾಶ ಸಂಸ್ಥೆ ಸ್ಪೇಸ್ ಎಕ್ಸ್, ಕಳೆದ ಭಾನುವಾರ ಏಕಕಾಲಕ್ಕೆ 143 ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ಭಾರತದ ಇಸ್ರೋ ನಿರ್ಮಿಸಿದ್ದ ವಿಶ್ವದಾಖಲೆಯನ್ನು ಮುರಿದಿತ್ತು. ಭಾರತದ ಇಸ್ರೋ 104 ಉಪಗ್ರಹಗಳನ್ನು ಉಡಾವಣೆ ಮಾಡಿತ್ತು.

ಜಾಗತಿಕ ಬ್ರಾಡ್ಬ್ಯಾಂಡ್
143 ಉಪಗ್ರಹಗಳು ವಾಣಿಜ್ಯ ಹಾಗೂ ಸರ್ಕಾರದ ಕ್ಯೂಬ್ಸ್ಯಾಟ್ಗಳು, ಮೈಕ್ರೋಸ್ಯಾಟಲೈಟ್ಗಳು, ಕಕ್ಷಾ ವರ್ಗಾವಣೆ ವಾಹನಗಳು ಮತ್ತು 10 ಸ್ಟಾರ್ಲಿಂಕ್ ಉಪಗ್ರಹಗಳನ್ನು ಒಳಗೊಂಡಿದ್ದವು. ಈ ಉಪಗ್ರಹಗಳ ಮೂಲಕ 2021ರ ಅಂತ್ಯದೊಳಗೆ ಜಾಗತಿಕ ಬ್ರಾಡ್ಬ್ಯಾಂಡ್ ಅಂತರ್ಜಾಲ ಸಂಪರ್ಕ ಒದಗಿಸುವ ಗುರಿಯನ್ನು ಸ್ಪೇಸ್ಎಕ್ಸ್ ಹೊಂದಿದೆ.
-
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್












Click it and Unblock the Notifications