ಸಿಂಗಪುರದ ಜೂಜುಕೋರ ವೆಬ್ 'ಅಡ್ಡಾ' ಬಂದ್
ಸಿಂಗಪುರ, ಫೆ.3: ಜೂಜುಕೋರರ ಸ್ವರ್ಗ ಎನಿಸಿಕೊಂಡಿದ್ದ ಸಿಂಗಪುರದಲ್ಲಿ ಈಗ ಸ್ವಚ್ಛತಾ ಅಭಿಯಾನ ನಡೆಯುತ್ತಿದೆ. ಇಲ್ಲಿನ ವಿದೇಶಾಂಗ ಸಚಿವಾಲಯ ಲೈಸನ್ ರಹಿತ ಜೂಜುಕೋರರ 'ವೆಬ್' ಅಡ್ಡಾಗಳನ್ನು ಬಂದ್ ಮಾಡುತ್ತಿದ್ದಾರೆ.
ಸುಮಾರು ನೂರಕ್ಕೂ ಅಧಿಕ ಗ್ಯಾಂಬ್ಲಿಂಗ್ ವೆಬ್ ಸೈಟ್ ಗಳನ್ನು ವಿದೇಶಾಂಗ ಸಚಿವಾಲಯ ಬಂದ್ ಮಾಡಿದೆ. ಇನ್ನಷ್ಟು ವೆಬ್ ಸೈಟ್ ಗಳು ಬಂದ್ ಆಗುವ ಭೀತಿ ಎದುರಿಸುತ್ತಿದೆ. ಬೆಟ್ಟಿಂಗ್ ದಂಧೆ ಹತ್ತಿಕ್ಕಲು ರೂಪಿಸಲಾಗಿರುವ ಹೊಸ ಕಾನೂನು ವೆಬ್ ತಾಣಗಳಿಗೆ ಮಾರಕವಾಗಿದೆ.
ಬೆಟ್ 365, Ladbrokes, 888.ಕಾಂ ವೆಬ್ ತಾಣಗಳು ಬಂದ್ ಆಗಿವೆ. ಎಲ್ಲೋ ಕುಳಿತು ಯಾರೋ ಜೂಜುಕೋರರನ್ನು ನಿಯಂತ್ರಿಸುವುದನ್ನು ತಡೆಗಟ್ಟಲು ಈ ರೀತಿ ಕ್ರಮ ಅಗತ್ಯವಾಗಿತ್ತು. ಸರ್ಕಾರದ ಬೊಕ್ಕಸಕ್ಕೆ ಭಾರಿ ನಷ್ಟ ಉಂಟಾಗುವುದನ್ನು ತಪ್ಪಿಸಲು ಹೊಸ ಕಾನೂನು ರೂಪಿಸಬೇಕಾಯಿತು ಎಂದು ಸಚಿವಾಲಯ ಹೇಳಿದೆ. [ಅಶ್ಲೀಲ ವೆಬ್ ತಾಣಗಳ ಕ್ಲೀನ್ ಮಾಡಿದ ಚೀನಾ]

ಹೀಗಾಗಿ ಈ ಬೆಟ್ಟಿಂಗ್ ದಂಧೆ ನಡೆಸುವ ವೆಬ್ ತಾಣಗಳಿಗೆ ಹಣ ನೀಡಿದವರು ಈಗ ತಲೆ ಮೇಲೆ ಕೈಹೊತ್ತಿಕೊಂಡು ಕುಳಿತುಕೊಳ್ಳುವಂತಾಗಿದೆ. ರಿಮೋಟ್ ಗ್ಯಾಂಬ್ಲಿಂಗ್ ಕಾಯ್ದೆ ಜಾರಿಗೆ ತರಲಾಗಿದ್ದು, ಅಗತ್ಯ ಬಿದ್ದರೆ ಫ್ರಾನ್ಸ್ ನೆರವು ಪಡೆದುಕೊಂಡು ಕಾನೂನು ಇನ್ನಷ್ಟು ಬಲಗೊಳಿಸಲು ಚಿಂತಿಸಲಾಗಿದೆ.
ಫೋನ್, ಆನ್ ಲೈನ್ ಜುಗಾರಿ ಅಡ್ಡಾಗಳು ಈಗ ಕೋಟಿಗಟ್ಟಲೆ ನಷ್ಟ ಅನುಭವಿಸಬೇಕಾಗಿದೆ. ಲೈಸನ್ ರಹಿತ ಜೂಜುಕೋರರು ಸಿಕ್ಕಿಬಿದ್ದರೆ 6 ತಿಂಗಳು ಜೈಲು ಅಥವಾ 5,000 ಸಿಂಗಪುರ ಡಾಲರ್ ದಂಡ ತೆರಬೇಕಾಗುತ್ತದೆ.
ಅದರೆ, ಏನೇ ಕಠಿಣ ಕಾನೂನು ರೂಪಿಸಿದರೂ ಮೊಬೈಲ್ ಗಳಲ್ಲಿ ಈ ಜುಗಾರಿ ವೆಬ್ ತಾಣಗಳು ಇನ್ನೂ ಓಪನ್ ಆಗುತ್ತಿದ್ದು, ಫೋನ್, ಟ್ಯಾಬ್ಲೆಟ್ ಗಳಲ್ಲಿ ಜೂಜಾಟ ಮುಂದುವರೆದಿರುವ ಸುದ್ದಿ ಬಂದಿದೆ.
ಈ ಹಿಂದೆ ಚೀನಾದಲ್ಲಿ ಆನ್'ಲೈನ್ ಸ್ವಚ್ಛತಾ ಆಂದೋಲನ ನಡೆಸಿ ಅಂತರ್ಜಾಲದಲ್ಲಿ ಕಂಡು ಬರುವ ನಿಯಮಬಾಹಿರ ಅಶ್ಲೀಲ ವೆಬ್ ತಾಣಗಳನ್ನು ಒಂದೊಂದಾಗಿ ಮುಚ್ಚಲಾಗಿತ್ತು. ಸರಿ ಸುಮಾರು 422ಕ್ಕೂ ಅಧಿಕ ವೆಬ್ ಸೈಟ್ ಗಳನ್ನು ಬಂದ್ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.(ಪಿಟಿಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications