ಕ್ಯಾಲಿಫೋರ್ನಿಯಾದಲ್ಲಿ ಸಿಖ್ ಯುವಕನ ಬರ್ಬರ ಹತ್ಯೆ
ಈ ವಾರದಲ್ಲಿ ಅಮೆರಿಕದಲ್ಲಿ ನಡೆದಿರುವ ಮೂರ ಹತ್ಯೆ ಇದಾಗಿದೆ. ಶನಿವಾರವಷ್ಟೇ, ಸಾನ್ ಜೋಸ್ ಎಂಬಲ್ಲಿ ಮಂಗಳೂರು ಮೂಲದ ದಂಪತಿಯನ್ನು ದುಷ್ಕರ್ಮಿಯೊಬ್ಬ ಶೂಟೌಟ್ ಮಾಡಿ ಹತ್ಯೆಗೈದಿದ್ದ.
ಕ್ಯಾಲಿಫೋರ್ನಿಯಾ, ಮೇ 8: ಸುಮಾರು 32 ವರ್ಷದ ಜಗಜೀತ್ ಸಿಂಗ್ ಎಂಬ ಸಿಖ್ ಯುವಕನೊಬ್ಬನನ್ನು ಕ್ಯಾಲಿಫೋರ್ನಿಯಾದಲ್ಲಿ ಇರಿದು ಕೊಲ್ಲಲಾಗಿದೆ ಎಂದು ಪಿಟಿಐ ಹೇಳಿದೆ.
ಕ್ಯಾಲಿಫೋರ್ನಿಯಾದ ಮಳಿಗೆಯೊಂದರಲ್ಲಿ ಸಿಗರೇಟು ಖರೀದಿಗೆ ಸಂಬಂಧಿಸಿದಂತೆ ಉಂಟಾದ ಅಲ್ಪ ಗಲಾಟೆಯಿಂದಾಗಿ ಈ ಯುವಕನನ್ನು ಯುವಕನೊಬ್ಬ ಕೊಂದಿದ್ದಾನೆ.[ಅಮೆರಿಕದಲ್ಲಿ ಮಂಗಳೂರು ಮೂಲದ ದಂಪತಿ ಹತ್ಯೆ]

ಈ ವಾರದಲ್ಲಿ ಅಮೆರಿಕದಲ್ಲಿ ನಡೆದಿರುವ ಮೂರ ಹತ್ಯೆ ಇದಾಗಿದೆ. ಶನಿವಾರವಷ್ಟೇ, ಸಾನ್ ಜೋಸ್ ಎಂಬಲ್ಲಿ ಮಂಗಳೂರು ಮೂಲದ ದಂಪತಿಯನ್ನು ದುಷ್ಕರ್ಮಿಯೊಬ್ಬ ಶೂಟೌಟ್ ಮಾಡಿ ಹತ್ಯೆಗೈದಿದ್ದ.
ಪಂಜಾಬ್ ನ ಕಪುರ್ತಲಾ ನಗರ ಮೂಲದ ಜಗಜೀತ್ ಸಿಂಗ್, ಕೆಲ ವರ್ಷಗಳ ಹಿಂದೆ ಅಮೆರಿಕಕ್ಕೆ ಹೋಗಿದ್ದರು. ಕ್ಯಾಲಿಫೋರ್ನಿಯಾದ ದಿನಸಿ ಮಳಿಗೆಯೊಂದರಲ್ಲಿ ಅವರು ಕೆಲಸ ಮಾಡುತ್ತಿದ್ದರು.[ಅಮೆರಿಕಾದಲ್ಲಿ ಭಾರತೀಯ ಮೂಲದ ವೈದ್ಯ ಅನುಮಾನಾಸ್ಪದ ಸಾವು]
ಸೋಮವಾರ, ಯುವಕನೊಬ್ಬ ಅಂಗಡಿಗೆ ಬಂದು ನಿರ್ದಿಷ್ಟ ಬ್ರಾಂಡ್ ನ ಸಿಗರೇಟು ಕೇಳಿದ. ಹಾಗಾಗಿ, ನಿಯಮಗಳ ಪ್ರಕಾರ, ಜಗಜೀತ್ ಸಿಂಗ್ ಯುವಕನ ಐಡಿ ಕಾರ್ಡ್ ನೀಡುವಂತೆ ಕೇಳಿದ್ದಾರೆ. ಆತ ಐಡಿ ಕಾರ್ಡ್ ತೋರಿಸದಿದ್ದ ಹಿನ್ನೆಲೆಯಲ್ಲಿ ಆತನಿಗೆ ಸಿಗರೇಟ್ ಕೊಡಲು ಜಗಜೀತ್ ನಿರಾಕರಿಸಿದ್ದಾರೆ.
ಇದರಿಂದ ಕುಪಿತಗೊಂಡ ಆತ ಬಾಯಿಬಂದಂತೆ ಬಯ್ದಾಡುತ್ತಾ, ಜಗಜೀತ್ ಅವರನ್ನು ಜನಾಂಗೀಯ ನಿಂದನೆಗೆ ಗುರಿಪಡಿಸಿ ಬುಸುಗುಡುತ್ತಾ 'ಇದರ ಘೋರ ಪರಿಣಾಮ ಅನುಭವಿಸಬೇಕಾಗುತ್ತದೆ' ಎಂದು ಎಚ್ಚರಿಕೆ ನೀಡಿ ಹೋಗಿದ್ದಾನೆ.
ಹಾಗೆ, ಅಂಗಡಿಯಿಂದ ಹೊರಹೋಗದ ಅರ್ಧಗಂಟೆ ನಂತರ ಪುನಃ ಅಂಗಡಿಯೊಳಕ್ಕೆ ನುಗಿದ್ದ ಆ ಯುವಕ ಕ್ಯಾಶ್ ಕೌಂಟರ್ ನಲ್ಲಿದ್ದ ಜಗ್ ಜೀತ್ ಸಿಂಗ್ ಅವರನ್ನು ತನ್ನೊಂದಿಗೆ ತಂದಿದ್ದ ಚೂರಿಯಿಂದ ನೋಡನೋಡುತ್ತಲೇ ಇರಿದು ಹತ್ಯೆಗೈದ ಎಂದು ಅದೇ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಮತ್ತೊಬ್ಬ ಭಾರತೀಯ ಸುಖ್ವಿಂದರ್ ಸಿಂಗ್ ತಿಳಿಸಿದ್ದಾರೆ.
ಸಮಗ್ರ ಘಟನೆಯು ಅಂಗಡಿಯಲ್ಲಿನ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಇದರ ಆಧಾರದ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications