ಕನ್ನಡಕ ಧರಿಸುವುದರಿಂದ ಕೊವಿಡ್-19 ರೋಗದಿಂದ ದೂರವಿರಬಹುದೇ?
ನವದೆಹಲಿ, ಸೆಪ್ಟೆಂಬರ್ 17: ಕೊರೊನಾ ಸೋಂಕು ದೇಶ, ವಿದೇಶಗಳಿಗೆ ಹರಡಿದೆ. ಭಾರತ ಇತ್ತೀಚೆಗಷ್ಟೇ ಕೊರೊನಾ ಸೋಂಕು ಹೆಚ್ಚಿರುವ ರಾಷ್ಟ್ರಗಳ ಪೈಕಿ ಎರಡನೇ ಸ್ಥಾನದಲ್ಲಿತ್ತು. ಅಮೆರಿಕ ಮೊದಲನೇ ಸ್ಥಾನದಲ್ಲಿದೆ.
ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದರಿಂದ ಕೊರೊನಾ ಸೋಂಕಿನಿಂದ ದೂರವಿರಬಹುದು ಎಂದು ಎಲ್ಲಾ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಚೀನಾದ ಅಧ್ಯಯನವೊಂದು ಕನ್ನಡಕ ಧರಿಸುವುದರಿಂದ ಕೂಡ ಸೋಂಕಿನಿಂದ ದೂರವಿರಬಹುದು ಎಂದು ಹೇಳಿದೆ.
ಜಾಮಾ ಆಪ್ತಲ್ಮಾಲಜಿ ನಡೆಸಿರುವ ಅಧ್ಯಯನದಲ್ಲಿ ಯಾರ್ಯಾರು ಕನ್ನಡಕ ಧರಿಸುತ್ತಾರೋ ಅವರಿಗೆ ಕೊರೊನಾ ಸೋಂಕಿನಿಂದ ಕಡಿಮೆ ತೊಂದರೆಯಾಗಿರುವುದು ಪತ್ತೆಯಾಗಿದೆ.

ಹಾಗೆಯೇ ನಿತ್ಯ ಅವರು ಎಷ್ಟು ಗಂಟೆಗಳ ಕಾಲ ಕನ್ನಡಕ ಧರಿಸುತ್ತಾರೆ ಎನ್ನುವುದು ಕೂಡ ಮುಖ್ಯವಾಗಿರುತ್ತದೆ.ಅಧ್ಯಯನವು 276 ಜನರ ಮೇಲೆ ನಡೆದಿದೆ. ಜನವರಿ 27 ರಿಂದ ಮಾರ್ಚ್ 13ರವರೆಗೆ ಅಧ್ಯಯನ ನಡೆಸಲಾಗಿದೆ.
ಶೇ.5.8 ರಷ್ಟು ಮಂದಿ ದಿನಕ್ಕೆ 8 ಗಂಟೆಗಳ ಕಾಲ ಕನ್ನಡಕ ಧರಿಸುತ್ತಾರೆ. 276 ಮಂದಿಯಲ್ಲಿ 30 ಮಂದಿ ಅಂದರೆ ಶೇ.11ರಷ್ಟು ಮಂದಿ ಕನ್ನಡಕ ಧರಿಸುತ್ತಾರೆ.
1985ರಲ್ಲಿ ಮಾಡಿದ್ದ ಅಧ್ಯಯನದ ಪ್ರಕಾರ ಚೀನಾದ 1/3ರಷ್ಟು ಮಂದಿ ಮಯೋಫಿಯಾ ಹೊಂದಿದ್ದಾರೆ.ಕನ್ನಡಕ ಧರಿಸುವುದರಿಂದ ಕೊರೊನಾ ಸೋಂಕು ತಗುಲುವ ಸಾಧ್ಯತೆ ಕಡಿಮೆ ಇರುತ್ತದೆ. ಕನ್ನಡಕ ಧರಿಸುವ ಕೆಲವೇ ಕೆಲವು ಮಂದಿ ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದರು.
ಕೇವಲ ಒಂದು ಆಸ್ಪತ್ರೆ ಮಾತ್ರ ಈ ಕುರಿತು ಅಧ್ಯಯನ ನಡೆಸಿದ್ದು, ನಿಜವಾಗಿಯೂ ಕನ್ನಡ ಹಾಕುವುದಕ್ಕೂ ಕೊವಿಡ್ 19 ರೋಗಕ್ಕೂ ಏನು ಸಂಬಂಧ ಎಂಬುದನ್ನು ಸಾಬೀತುಪಡಿಸಿಲ್ಲ.
ಕನ್ನಡಕ ಧರಿಸುವುದರಿಂದ ಕೊರೊನಾ ಸೋಂಕಿನಿಂದ ದೂರವಿರಬಹುದು ಎಂದು ಹೇಳಲಾಗಿದೆ. ಆದರೆ ಇಷ್ಟು ಬೇಗ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ.
ಹೆಚ್ಚೆಚ್ಚು ಸಂಶೋಧನೆ, ಅಧ್ಯಯನಗಳು ಬೇಕಿವೆ. ಕನ್ನಡಕ ಧರಿಸುವುದರಿಂದ ಕಣ್ಣನ್ನು ಮುಟ್ಟಿಕೊಳ್ಳುವುದು ಕಡಿಮೆಯಾಗುತ್ತದೆ. ಇದರಿಂದ ಬೇರೊಬ್ಬರಿಗೆ ಅಥವಾ ನಿಮ್ಮ ಕಣ್ಣಿಗೆ ಸೋಂಕು ತಗುಲುವುದಿಲ್ಲ.
Recommended Video
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications