ಜೈವಿಕ ಅಸ್ತ್ರ ಬಳಕೆ: ವಿಶ್ವಸಂಸ್ಥೆಯಲ್ಲಿ ಭಾರತ ಕಳವಳ

ನವದೆಹಲಿ, ಮಾರ್ಚ್ 12: ಒಂದೆಡೆ ರಾಸಾಯನಿಕ ಅಸ್ತ್ರ ಬಳಸಿದರೆ ಎಚ್ಚರ ಎಂದು ರಷ್ಯಾಕ್ಕೆ ಅಮೆರಿಕ ಎಚ್ಚರಿಕೆ ನೀಡಿದೆ. ಇದರ ಬೆನ್ನಲ್ಲೇ ಯುಎಸ್ ಬೆಂಬಲದಿಂದ ಉಕ್ರೇನ್ ಜೈವಿಕ ಅಸ್ತ್ರ ಪ್ರಯೋಗ

ರಷ್ಯಾ-ಉಕ್ರೇನ್ ಸಂಘರ್ಷವು ಜೈವಿಕ-ರಾಸಾಯನಿಕ ಯುದ್ಧವಾಗಿ ಬದಲಾಗುವ ಭಯದ ನಡುವೆ ಜೈವಿಕ ಮತ್ತು ವಿಷಕಾರಿ ಶಸ್ತ್ರಾಸ್ತ್ರಗಳ ಸಮಾವೇಶವನ್ನು ಕಾರ್ಯಗತಗೊಳಿಸುವ ಅಗತ್ಯವನ್ನು ಭಾರತ ಎತ್ತಿ ತೋರಿಸಿದೆ.

ಉಕ್ರೇನ್ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಶುಕ್ರವಾರ ಉದ್ದೇಶಿಸಿ ಮಾತನಾಡಿದ ತಿರುಮೂರ್ತಿ, ಜೈವಿಕ ಅಸ್ತ್ರ ಬಳಕೆಗೆ ಸಂಬಂಧಿಸಿದಂತೆ ಸರ್ಕಾರಗಳ ಇತ್ತೀಚಿನ ಹೇಳಿಕೆಗಳು ಮತ್ತು ವ್ಯಾಪಕ ಮಾಹಿತಿಯನ್ನು ಭಾರತವು ಗಮನಿಸುತ್ತಿದೆ. ''ಈ ಸಂದರ್ಭದಲ್ಲಿ, ಸಾಮೂಹಿಕ ವಿನಾಶಕಾರಿ ಶಸ್ತ್ರಾಸ್ತ್ರಗಳ ಸಂಪೂರ್ಣ ವರ್ಗವನ್ನು ನಿಷೇಧಿಸುವ ಪ್ರಮುಖ ಜಾಗತಿಕ ಮತ್ತು ತಾರತಮ್ಯರಹಿತ ನಿಶಸ್ತ್ರೀಕರಣ ಸಮಾವೇಶವಾಗಿ ಜೈವಿಕ ಮತ್ತು ವಿಷಕಾರಿ ಶಸ್ತ್ರಾಸ್ತ್ರಗಳ ಸಮಾವೇಶಕ್ಕೆ (ಬಿ ಟಿ ಡಬ್ಲ್ಯೂಸಿ) ಭಾರತ ನೀಡುವ ಪ್ರಾಮುಖ್ಯತೆಯನ್ನು ನಾವು ಒತ್ತಿಹೇಳಲು ಬಯಸುತ್ತೇವೆ,''ಎಂದು ಹೇಳಿದರು.

Russia-Ukraine Crisis: India calls for ban on weapons for mass destruction at UN


BTWCಯ ಸಂಪೂರ್ಣ ಮತ್ತು ಪರಿಣಾಮಕಾರಿ ಅನುಷ್ಠಾನವನ್ನು ಅಕ್ಷರಶಃ ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ ಎಂದು ತಿರುಮೂರ್ತಿ ಸ್ಪಷ್ಟಪಡಿಸಿದರು. ಸದ್ಯದ ಪರಿಸ್ಥಿತಿ ಗಮನಿಸಿದರೆ ರಷ್ಯಾ ಹಾಗೂ ಉಕ್ರೇನ್ ನಡುವೆ ಸಮಾಲೋಚನೆ ಹಾಗೂ ಚರ್ಚೆ ಮೂಲಕ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕಾಗಿರುವುದು ಅಗತ್ಯ ಹಾಗೂ ಮಾನವೀಯ ಮೌಲ್ಯದ ಬಗ್ಗೆ ತುರ್ತು ಗಮನ ಅಗತ್ಯ' ಎಂದು ಹೇಳಿದರು.

ರಷ್ಯಾದ ಸಶಸ್ತ್ರ ಪಡೆಗಳು ತಮ್ಮ ಆಕ್ರಮಣಕಾರಿ ಕಾರ್ಯಾಚರಣೆಗಳನ್ನು ಮುಂದುವರಿಸಿವೆ ಮತ್ತು ಉಕ್ರೇನಿನ ದಕ್ಷಿಣ, ಪೂರ್ವ ಮತ್ತು ಉತ್ತರದ ಹಲವಾರು ನಗರಗಳಿಗೆ ಮುತ್ತಿಗೆ ಹಾಕುತ್ತಿವೆ ಎಂದು ರಾಜಕೀಯ ಮತ್ತು ಶಾಂತಿ ನಿರ್ಮಾಣ ವ್ಯವಹಾರಗಳ ಅಧೀನ ಮಹಾ ಕಾರ್ಯದರ್ಶಿ ರೋಸ್ಮರಿ ಡಿಕಾರ್ಲೊ ಅವರು ಮಂಡಳಿಗೆ ತಿಳಿಸಿದರು. ಮರಿಯುಪೋಲ್, ಖಾರ್ಕಿವ್, ಸುಮಿ ಮತ್ತು ಚೆರ್ನಿಹಿವ್‌ ಮೊದಲಾದ ನಗರಗಳಲ್ಲಿ ಪರಿಸ್ಥಿತಿ ಆತಂಕಕಾರಿಯಾಗಿದೆ, ಅಲ್ಲಿನ ವಸತಿ ಪ್ರದೇಶಗಳು ಮತ್ತು ನಾಗರಿಕ ಮೂಲಸೌಕರ್ಯಗಳ ಮೇಲೆ ಶೆಲ್ ದಾಳಿ ನಡೆಯುತ್ತಿದೆ, ಅದರ ಪರಿಣಾಮವಾಗಿ ನಾಗರಿಕರು ಸಾಯುತ್ತಿದ್ದಾರೆ ಮತ್ತು ಗಾಯಗೊಳ್ಳುತ್ತಿದ್ದಾರೆ ಎಂದು ರೋಸ್ಮರಿ ಡಿಕಾರ್ಲೊ ಹೇಳಿದರು.

"ಯುಎನ್ ಚಾರ್ಟರ್ ಮತ್ತು ಅಂತರರಾಷ್ಟ್ರೀಯ ಕಾನೂನಿನ ತತ್ವಗಳಿಗೆ ಬದ್ಧವಾಗಿರಲು ಮತ್ತು ರಾಜ್ಯಗಳ ಸಾರ್ವಭೌಮತೆ ಮತ್ತು ಸಮಗ್ರತೆಯನ್ನು ಗೌರವಿಸಲು ನಾವು ಮತ್ತೊಮ್ಮೆ ಸದಸ್ಯ ರಾಷ್ಟ್ರಗಳಿಗೆ ಕರೆ ನೀಡುತ್ತೇವೆ" ಎಂದು ತಿರುಮೂರ್ತಿ ಹೇಳಿದರು.

ಅಮೆರಿಕದ ಬೆಂಬಲದೊಂದಿಗೆ ಉಕ್ರೇನ್ ರಾಸಾಯನಿಕ ಮತ್ತು ಜೈವಿಕ ಪ್ರಯೋಗಾಲಯಗಳನ್ನು ನಡೆಸುತ್ತಿದೆ ಎಂದು ಆರೋಪಿಸಿ ರಷ್ಯಾದ ವಿದೇಶಾಂಗ ಸಚಿವಾಲಯದ ಮಾರಿಯಾ ಜಖರೋವಾ ಅವರ ಹೇಳಿಕೆ ನಂತರ ಭಾರತ ಕಳವಳ ವ್ಯಕ್ತಪಡಿಸಿದೆ.

'ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ನೇರ ಮಾತುಕತೆಗಳು ಯುದ್ಧ ನಿಲ್ಲಿಸಲು ಕಾರಣವಾಗುತ್ತವೆ ಎನ್ನವುದು ಭಾರತದ ಪ್ರಾಮಾಣಿಕ ಆಶಯವಾಗಿದೆ,' ಎಂದು ತಿರುಮೂರ್ತಿ ಹೇಳಿದರು.

'ರಾಜತಾಂತ್ರಿಕ ಮತ್ತು ಮಾತುಕತೆಯ ಮಾರ್ಗವನ್ನು ಹೊರತುಪಡಿಸಿ ಬೇರೆ ಪರ್ಯಾಯವಿಲ್ಲ. ಈಗ ಉಂಟಾಗಿರುವ ಭೀಕರ ಮಾನವೀಯ ಪರಿಸ್ಥಿತಿಗೆ ತಕ್ಷಣದ ಮತ್ತು ತುರ್ತು ಗಮನದ ಅಗತ್ಯವಿದೆ,' ಎಂದು ಅವರು ಹೇಳಿದರು. ಭಾರತ ಮತ್ತೊಮ್ಮೆ ಯುಎನ್ ಚಾರ್ಟರ್ ಮತ್ತು ಅಂತರಾಷ್ಟ್ರೀಯ ಕಾನೂನಿನ ತತ್ವಗಳಿಗೆ ಬದ್ಧವಾಗಿರುವಂತೆ ಮತ್ತು ರಾಷ್ಟ್ರಗಳ ಸಾರ್ವಭೌಮತೆ ಮತ್ತು ಸಮಗ್ರತೆಯನ್ನು ಗೌರವಿಸುವಂತೆ ಸದಸ್ಯ ರಾಷ್ಟ್ರಗಳಿಗೆ ಕರೆ ನೀಡಿತು.

ಆದಾಗ್ಯೂ, ಉಕ್ರೇನ್ ಜೈವಿಕ ಶಸ್ತ್ರಾಸ್ತ್ರ ಕಾರ್ಯಕ್ರಮವನ್ನು ಹೊಂದಿಲ್ಲ ಎಂದು ಯುಎಸ್ ಹೇಳಿದೆ. ಉಕ್ರೇನ್ ಜೈವಿಕ ಶಸ್ತ್ರಾಸ್ತ್ರಗಳ ಕಾರ್ಯಕ್ರಮವನ್ನು ಹೊಂದಿಲ್ಲ. ಯುನೈಟೆಡ್ ಸ್ಟೇಟ್ಸ್ ಬೆಂಬಲಿಸುವ ಯಾವುದೇ ಉಕ್ರೇನಿಯನ್ ಜೈವಿಕ ಶಸ್ತ್ರಾಸ್ತ್ರ ಪ್ರಯೋಗಾಲಯಗಳಿಲ್ಲ, ರಷ್ಯಾದ ಗಡಿಯ ಬಳಿ ಅಥವಾ ಎಲ್ಲಿಯೂ ಇಲ್ಲ ಎಂದು ಭದ್ರತಾ ಮಂಡಳಿಯ ಸಭೆಯಲ್ಲಿ ಯುಎನ್‌ಗೆ ಯುಎಸ್ ಪ್ರತಿನಿಧಿ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+