ರಷ್ಯಾದಿಂದ ಸರ್ಮತ್ ಖಂಡಾಂತರ ಕ್ಷಿಪಣಿ ಯಶಸ್ವಿ ಪರೀಕ್ಷೆ; ವಿರೋಧಿಗಳಿಗೆ ಪುಟಿನ್ ಎಚ್ಚರಿಕೆ
ಮಾಸ್ಕೋ, ಏಪ್ರಿಲ್ 20: ರಷ್ಯಾ ಮತ್ತು ಉಕ್ರೇನ್ ನಡುವಿನ ಸಮರ ಮುಂದುವರಿದಿದೆ. ಇದರ ಮಧ್ಯೆ ಬುಧವಾರ ಸರ್ಮತ್ ಖಂಡಾಂತರ ಕ್ಷಿಪಣಿಯನ್ನು ರಷ್ಯಾ ಯಶಸ್ವಿಯಾಗಿ ಪರೀಕ್ಷಿಸಿದೆ ಎಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ. ಪರಮಾಣು ಅಸ್ತ್ರವನ್ನು ಹೊತ್ತೊಯ್ಯುವ ಸಾಮರ್ಥ್ಯವಿರುವ ಶಸ್ತ್ರಾಸ್ತ್ರವು ಕ್ರೆಮ್ಲಿನ್ನ ಶತ್ರುಗಳನ್ನು "ಎರಡೆರೆಡು ಬಾರಿ ಯೋಚಿಸುವಂತೆ ಮಾಡುತ್ತದೆ" ಎಂದು ಅವರು ಹೇಳಿದ್ದಾರೆ.
ಪಾಶ್ಚಿಮಾತ್ಯ ವಿಶ್ಲೇಷಕರಿಂದ ಸೈತಾನ್ 2 ಎಂದು ಕರೆಯಲ್ಪಡುವ ಸರ್ಮತ್ ರಷ್ಯಾದ ಮುಂದಿನ ಪೀಳಿಗೆಯ ಕ್ಷಿಪಣಿಗಳಲ್ಲಿ ಒಂದಾಗಿದೆ. ಇದನ್ನು ಪುಟಿನ್ ಅವರು "ಅಜೇಯ" ಎಂದು ಕರೆದಿದ್ದಾರೆ. ಇದು ಕಿನ್ಜಾಲ್ ಮತ್ತು ಅವಂಗಾರ್ಡ್ ಹೈಪರ್ಸಾನಿಕ್ ಕ್ಷಿಪಣಿಗಳನ್ನು ಸಹ ಒಳಗೊಂಡಿದೆ.
ಉಕ್ರೇನ್ನಲ್ಲಿ ಫೆಬ್ರವರಿ 24 ರಿಂದ ರಷ್ಯಾದ ಪಡೆಗಳು ವಿಶೇಷ ಮಿಲಿಟರಿ ಕಾರ್ಯಾಚರಣೆ ನಡೆಸುತ್ತಿವೆ. ಈ ಯುದ್ಧದಲ್ಲಿ ಮೊದಲ ಬಾರಿಗೆ ಕಿಂಜಾಲ್ ಅನ್ನು ಬಳಸಿಕೊಂಡಿರುವುದಾಗಿ ರಷ್ಯಾ ಕಳೆದ ತಿಂಗಳಿನಲ್ಲೇ ಹೇಳಿದೆ. "ಸರ್ಮತ್ ಖಂಡಾಂತರ ಕ್ಷಿಪಣಿಯ ಯಶಸ್ವಿ ಉಡಾವಣೆಗಾಗಿ ನಾನು ನಿಮ್ಮನ್ನು ಅಭಿನಂದಿಸುತ್ತೇನೆ" ಎಂದು ಪುಟಿನ್ ತಿಳಿಸಿದ್ದಾರೆ.
"ಈ ಅನನ್ಯ ಆಯುಧವು ನಮ್ಮ ಸಶಸ್ತ್ರ ಪಡೆಗಳ ಯುದ್ಧ ಸಾಮರ್ಥ್ಯವನ್ನು ಬಲಪಡಿಸುತ್ತದೆ. ಬಾಹ್ಯ ಬೆದರಿಕೆಗಳಿಂದ ರಷ್ಯಾದ ಭದ್ರತೆಯನ್ನು ವಿಶ್ವಾಸಾರ್ಹವಾಗಿ ಖಚಿತಪಡಿಸುತ್ತದೆ. ಇದರ ಜೊತೆಗೆ ಆಕ್ರಮಣಕಾರಿ ವಾಕ್ಚಾತುರ್ಯದ ಬಿಸಿಯಲ್ಲಿ, ನಮ್ಮ ದೇಶಕ್ಕೆ ಬೆದರಿಕೆ ಹಾಕಲು ಪ್ರಯತ್ನಿಸುವವರನ್ನು ಎರಡು ಬಾರಿ ಯೋಚಿಸುವಂತೆ ಮಾಡುತ್ತದೆ" ಎಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.

ಉತ್ತರ ರಷ್ಯಾದ ಪ್ಲೆಸೆಟ್ಸ್ಕ್ ಕಾಸ್ಮೋಡ್ರೋಮ್ನಲ್ಲಿ ಪರೀಕ್ಷೆಯು "ಯಶಸ್ವಿಯಾಗಿ" ನಡೆದಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ರಷ್ಯಾ ಸಚಿವಾಲಯದ ಪ್ರಕಾರ, ಕ್ಷಿಪಣಿಯು ರಷ್ಯಾದ ದೂರದ ಪೂರ್ವದಲ್ಲಿರುವ ಕಂಚಟ್ಕಾ ಪರ್ಯಾಯ ದ್ವೀಪದ ಕುರಾ ಪರೀಕ್ಷಾ ಶ್ಪೇಣಿಯ ತರಬೇತಿ ಸಿಡಿತಲೆಗಳನ್ನು ತಲುಪಿದೆ.
"ವಿಶ್ವದ ಗುರಿಗಳ ವಿನಾಶದ ದೀರ್ಘ ವ್ಯಾಪ್ತಿಯೊಂದಿಗೆ ಸರ್ಮತ್ ಅತ್ಯಂತ ಶಕ್ತಿಶಾಲಿ ಕ್ಷಿಪಣಿಯಾಗಿದ್ದು, ಇದು ನಮ್ಮ ದೇಶದ ಕಾರ್ಯತಂತ್ರದ ಪರಮಾಣು ಪಡೆಗಳ ಯುದ್ಧ ಶಕ್ತಿಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ," ಎಂದು ಸಚಿವಾಲಯ ಹೇಳಿದೆ.

ಸರ್ಮತ್ ಸೂಪರ್ಹೆವಿ ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಸಣ್ಣ ಆರಂಭಿಕ ಬೂಸ್ಟ್ ಹಂತದೊಂದಿಗೆ ಕ್ಷಿಪಣಿ-ವಿರೋಧಿ ರಕ್ಷಣಾ ವ್ಯವಸ್ಥೆಗಳಿಂದ ತಪ್ಪಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ಶತ್ರುಗಳ ಕಣ್ಗಾವಲು ವ್ಯವಸ್ಥೆಗಳನ್ನು ಪತ್ತೆ ಮಾಡುವುದಕ್ಕಾಗಿ ಒಂದು ಸಣ್ಣ ವಿಂಡೋವನ್ನು ನೀಡಲಾಗಿದೆ. 200 ಟನ್ಗಳಿಗಿಂತ ಹೆಚ್ಚು ತೂಕ ಮತ್ತು ಬಹು ಸಿಡಿತಲೆಗಳನ್ನು ಸಾಗಿಸಲು ಸರ್ಮತ್ ಕ್ಷಿಪಣಿಯು ಸಮರ್ಥವಾಗಿದೆ. ಈ ಕ್ಷಿಪಣಿಯು ಭೂಮಿಯ ಮೇಲಿನ ಯಾವುದೇ ಗುರಿಯನ್ನು ಹೊಡೆಯಬಹುದು ಎಂದು ಪುಟಿನ್ ಹೇಳಿದ್ದಾರೆ.
-
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ












Click it and Unblock the Notifications