ಕಳಚಿತು ಪಾಕ್ ಮುಖವಾಡ, ಉಗ್ರರ ಬಗ್ಗೆ ಮಾಜಿ ಸಚಿವ ಬಾಯ್ಬಿಟ್ಟ ಸತ್ಯ
ಇಸ್ಲಾಮಾಬಾದ್ (ಪಾಕಿಸ್ತಾನ), ಮಾರ್ಚ್ 1: ಪಾಕಿಸ್ತಾನದ ಪ್ರಧಾನಿ ತಮ್ಮ 'ನಯಾ ಪಾಕಿಸ್ತಾನ್' ಆಲೋಚನೆ ಬಗ್ಗೆ ಹೇಳುತ್ತಲೇ ಇದ್ದಾರೆ. ಆದರೆ ಪಾಕಿಸ್ತಾನ ಅಂದರೆ ಅದರ ನೀತಿಯಲ್ಲೇ ಭಯೋತ್ಪಾದನೆ ಎಂಬುದು ಸೇರಿಹೋಗಿದೆ ಎಂಬ ಸಂಗತಿ ಮತ್ತೊಮ್ಮೆ ಬಯಲಾಗಿದೆ.
ಪಾಕಿಸ್ತಾನದ ಮಾಜಿ ವಿದೇಶಾಂಗ ಖಾತೆ ಸಚಿವ ಖ್ವಾಜಾ ಅಸೀಫ್ ಸಂಸತ್ ನಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಪುಲ್ವಾಮಾದಲ್ಲಿ ನಡೆದ ದಾಳಿ ಹಾಗೂ ಅದರಲ್ಲಿ ಸಿಆರ್ ಪಿಎಫ್ ನ ನಲವತ್ತು ಸಿಬ್ಬಂದಿ ಹುತಾತ್ಮರಾಗಿದ್ದು ಸೇರಿದಂತೆ ಇತರ ಭಯೋತ್ಪಾದನಾ ಕೃತ್ಯಗಳನ್ನು ಸಹ ಸಮರ್ಥಿಸಿಕೊಂಡಿದ್ದಾರೆ.
ಖ್ವಾಜಾ ಅಸೀಫ್ ಮಾತನಾಡಿ, ಜೈಶ್-ಇ-ಮೊಹ್ಮದ್ ನಿಂದ ಆಗಿರುವುದು ದ್ವೇಷ ತೀರಿಸಿಕೊಳ್ಳುವ ಕೃತ್ಯ. ಇದು ಅವರ ಕಾನೂನುಬದ್ಧ ಹಕ್ಕು ಹಾಗೂ ಜನ್ಮಸಿದ್ಧ ಹಕ್ಕು. ನಾವು ಅವರನ್ನು ಬೆಂಬಲಿಸುತ್ತೇವೆ ಹಾಗೂ ಪರವಾಗಿ ನಿಲ್ಲುತ್ತೇವೆ ಎಂದು ಆತ ಹೇಳಿದ್ದಾರೆ.

ಖ್ವಾಜಾ ಅಸೀಫ್ ಮಾಜಿ ಸಚಿವ. ಸದ್ಯಕ್ಕೆ ವಿದೇಶಾಂಗ ಸಚಿವ ಆಗಿರುವ ಮಹ್ಮದ್ ಖುರೇಷಿ ಮಾತನಾಡಿ, ಜೈಶ್-ಇ-ಮೊಹ್ಮದ್ ನ ಮುಖ್ಯಸ್ಥ ಮಸೂದ್ ಅಜರ್ ಪಾಕಿಸ್ತಾನದಲ್ಲೇ ಇದ್ದಾನೆ. ಅನಾರೋಗ್ಯದಿಂದ ಬಳಲುತ್ತಿರುವ ಆತನಿಗೆ ಮನೆಯಿಂದ ಆಚೆ ಬರಲು ಸಹ ಆಗುತ್ತಿಲ್ಲ ಎಂದು ಕೂಡ ಹೇಳಿದ್ದಾರೆ.












Click it and Unblock the Notifications