ಸಿಯೋಲ್ ಶಾಂತಿ ಪ್ರಶಸ್ತಿ ಸ್ವೀಕರಿಸಿದ ಮೋದಿ, ನಮಾಮಿ ಗಂಗೆಗೆ ಅರ್ಪಣೆ
ಸಿಯೋಲ್, ಫೆಬ್ರವರಿ 22: "ದ್ವೇಷದ ಜಾಗದಲ್ಲಿ ಸೌಹಾರ್ದತೆಯನ್ನು ನೆಲೆಗೊಳಿಸುವ ಕೆಲಸವಾಗಬೇಕಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ದಕ್ಷಿಣ ಕೊರಿಯಾ ಪ್ರವಾಸದಲ್ಲಿರುವ ಅವರು ಪ್ರತಿಷ್ಠಿತ ಸಿಯೋಲ್ ಶಾಂತಿ ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತಿದ್ದರು. 'ಮಹಾತ್ಮಾ ಗಾಂಧೀಜಿ ಅವರ 150 ನೇ ಜನ್ಮ ವರ್ಷಾಚರಣೆಯ ಸಮಯದಲ್ಲಿ ಈ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವುದು ಹೆಮ್ಮೆ ತಂದಿದೆ' ಎಂದ ಅವರು, ಸಿಯೋಲ್ ಶಾಂತಿ ಪ್ರಶಸ್ತಿಯೊಂದಿಗೆ ಬಂದ ನಗದು ಹಣವನ್ನು ಗಂಗಾ ಶುದ್ಧೀಕರಣದ 'ನಮಾಮಿ ಗಂಗೆ' ಯೋಜನೆಗೆ ಅರ್ಪಿಸಿದರು.
ಸಮಯ ಬಂದಿದೆ, ಭಯೋತ್ಪಾದನೆ ಹತ್ತಿಕ್ಕಲು ವಿಶ್ವ ಒಂದಾಗಲಿ: ಮೋದಿ ಘರ್ಜನೆ
ಅಂತಾರಾಷ್ಟ್ರೀಯ ಸಹಕಾರ, ಜಾಗತಿಕ ಪ್ರಗತಿ, ಮಾನವಿಕ ಅಭಿವೃದ್ಧಿ ಕ್ಷೇತ್ರಗಳಲ್ಲಿ ನರೇಂದ್ರ ಮೋದಿ ಅವರ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
ದಕ್ಷಿಣ ಕೊರಿಯಾದಲ್ಲಿ ಶಾಂತಿ ಪ್ರಶಸ್ತಿ ಸ್ವೀಕರಿಸಲಿರುವ ಪ್ರಧಾನಿ ಮೋದಿ
ಈ ಸಂದರ್ಭದಲ್ಲಿ ಭಯೋತ್ಪಾದನೆಯ ವಿರುದ್ಧವೂ ಮಾತನಾಡಿದ ಅವರು, ಮಾನವೀಯತೆಯ ಮೇಲೆ ನಂಬಿಕೆ ಇರುವವರು ಭಯೋತ್ಪಾದನೆಯ ನಿಗ್ರಹಕ್ಕೆ ಕೈಜೋಡಿಸಬೇಕಿದೆ ಎಂದರು.
ದ್ವೇಷದ ಜಾಗದಲ್ಲಿ ಸೌಹಾರ್ದತೆ ನೆಲೆಸಲಿ
"ಭಯೋತ್ಪಾದನೆಯನ್ನು ಹತ್ತಿಕ್ಕಲು ಸಮಯ ಬಂದಿದೆ, ಇಡೀ ಜಗತ್ತೂ ಒಟ್ಟಾಗಿ ಉಗ್ರವಾದದ ನಿಗ್ರಹಕ್ಕೆ ಕೈಜೋಡಿಸಬೇಕು. ಮಾನವೀಯತೆ ಇರುವ ಪ್ರತಿಯೊಬ್ಬರೂ ಈ ಹಿಂಸೆಯ ವಿರುದ್ಧ ಹೋರಾಡಬೇಕು. ಉಗ್ರರ ಜಾಲಗಳು ಎಲ್ಲೆಲ್ಲಿವೆಯೋ ಆ ಮೂಲದಿಂದಲೇ ನಿರ್ಮೂಲನೆಯಾಗಬೇಕು. ಇದರಿಂದ ಮಾತ್ರವೇ ನಾವು ದ್ವೇಷದ ಜಾಗದಲ್ಲಿ ಸೌಹಾರ್ದತೆ ನೆಲೆಸುವಂತೆ ಮಾಡಲು ಸಾಧ್ಯ"- ನರೇಂದ್ರ ಮೋದಿ
ಈ ಪ್ರಶಸ್ತಿ ಪ್ರತಿ ಭಾರತೀಯನದ್ದು
"ಈ ಪ್ರಶಸ್ತಿ ಕೇವಲ ನನಗೆ ಮಾತ್ರ ಸಂದಿದ್ದಲ್ಲ. ಇಡೀ ಭಾರತೀಯರಿಗೂ ಸಲ್ಲಬೇಕಾದ್ದು. ಭಾರತ ಕಳೆದ ಐದು ವರ್ಷಗಳಿಂದ ಗಳಿಸಿದ ಅಭೂತಪೂರ್ವ ಯಶಸ್ಸಿನ ಹಿಂದೆ ಈ ದೇಶದ ಜನರ ಪ್ರಯತ್ನ, ಸ್ಫೂರ್ತಿ ಮತ್ತು ದೂರದೃಷ್ಟಿ ಇದೆ. ಆವರೆಲ್ಲರ ಪರವಾಗಿ ನಾನು ಈ ಪ್ರಶಸ್ತಿಯನ್ನು ಸ್ವೀಕರಿಸುತ್ತೇನೆ. ನಿಮಗೆ ಕೃತಜ್ಞತೆ ಅರ್ಪಿಸುತ್ತೇನೆ"- ನರೇಂದ್ರ ಮೋದಿ
ನಗದು ಹಣ ನಮಾಮಿ ಗಂಗೆಗೆ
"ಸಿಯೋಲ್ ಶಾಂತಿ ಪ್ರಶಸ್ತಿ ಪಾರಿತೋಷಕದೊಂದಿಗೆ ಕೊಡಮಾಡಿದ 2000(1,44,000 ರೂ.) ಡಾಲರ್ ನಗದು ಹಣವನ್ನು ನಾನು ನಮಾಮಿ ಗಂಗೆ ಯೋಜನೆಗೆ ನೀಡುತ್ತೇನೆ"-ನರೇಂದ್ರ ಮೋದಿ
ಗಾಂಧೀಜಿ ನೆನೆದ ಮೋದಿ
"ಮಹಾತ್ಮಾ ಗಾಂಧೀಜಿಯವರ 150 ನೇ ವರ್ಷಾಚರಣೆಯ ಹೊತ್ತಲ್ಲಿ ಶಾಂತಿ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವುದು ನನಗೆ ಅತೀವ ಸಂತಸ ತಂದಿದೆ."- ನರೇಂದ್ರ ಮೋದಿ