ಭಾರತದ ಶತ್ರು ವಿಲವಿಲ, ಇನ್ನೂ ಬದಲಾಗಿಲ್ಲ ಪಾಕಿಸ್ತಾನದ ಪರಿಸ್ಥಿತಿ!
ಭಾರತ ಒಂದು ಕಡೆ ಭದ್ರ ಬುನಾದಿ ಹಾಕಿಕೊಂಡು, ಅಭಿವೃದ್ಧಿ ಹೊಂದುತ್ತಿದೆ. ಆದ್ರೆ ಈ ಸಮಯದಲ್ಲೇ ಭಾರತದ ಪಕ್ಕದಲ್ಲೇ ಇರುವ ದೇಶ ಪಾಕಿಸ್ತಾನ ಪರದಾಡುತ್ತಿದೆ. ಅಲ್ಲಿ ಜನ ಒಂದು ಹೊತ್ತು ಸರಿಯಾಗಿ ಊಟ ಮಾಡುವುದಕ್ಕೂ ಪರದಾಡುವ ಪರಿಸ್ಥಿತಿ ಇದೆ. ಅದ್ರಲ್ಲೂ ಕಳೆದ ಶುಕ್ರವಾರ ನಡೆದಿದ್ದ ಪಾಕಿಸ್ತಾನ ಲೋಕಸಭಾ ಚುನಾವಣೆ ಈಗ ದೊಡ್ಡ ಸಂಚಲನ ಸೃಷ್ಟಿ ಮಾಡಿದೆ.
ಅಷ್ಟಕ್ಕೂ ಪಾಕಿಸ್ತಾನದಲ್ಲಿ ಇದೀಗ ಯಾವುದೇ ಪಕ್ಷಕ್ಕೂ ಪೂರ್ಣ ಬಹುಮತ ಸಿಕ್ಕಿಲ್ಲ. ಹೀಗೆ ಬಹುಮತ ಸಿಗದ ಕಾರಣ ಪಾಕಿಸ್ತಾನದಲ್ಲಿ ಫಲಿತಾಂಶ ಹೊರಬಿದ್ದು ಈಗಾಗಲೇ 2-3 ದಿನ ಕಳೆದರೂ, ಸರ್ಕಾರ ಮಾತ್ರ ರಚನೆ ಆಗಿಲ್ಲ. ಹೀಗಾಗಿ ಅಲ್ಲಿನ ಪ್ರಜೆಗಳು ಕೂಡ, ಹಿಂಸೆಯ ಭಯ & ಅನಿಶ್ಚಿತತೆಯ ಆತಂಕದಲ್ಲಿ ದಿನ ದೂಡುವ ಪರಿಸ್ಥಿತಿ ಬಂದಿದೆ. ಹಾಗಾದ್ರೆ ಇದೀಗ ಪಾಕಿಸ್ತಾನದ ಸ್ಥಿತಿ ಹೇಗಿದೆ? ಏನ್ ನಡೀತಾ ಇದೆ ಪಾಪಿ ಪಾಕಿಸ್ತಾನದಲ್ಲಿ. ಆ ಕುರಿತು ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.

ನವಾಜ್ ಷರೀಫ್ ಮತ್ತೆ ಪ್ರಧಾನಿ?
ಪಾಕಿಸ್ತಾನದಲ್ಲಿ ಪಿಟಿಐ ಬೆಂಬಲಿತ 101 ಸ್ವತಂತ್ರ ಅಭ್ಯರ್ಥಿಗಳು ಚುನಾವಣೆಯಲ್ಲಿ ಜಯವನ್ನು ಸಾಧಿಸಿದ್ದಾರೆ. ಪಾಕಿಸ್ತಾನ ಮುಸ್ಲೀಂ ಲೀಗ್-ನವಾಜ್ ಪಕ್ಷವು 75 ಸೀಟು, ಪಾಕಿಸ್ತಾನ ಪೀಪಲ್ಸ್ ಪಾರ್ಟಿ 54 ಕ್ಷೇತ್ರ ಗೆದ್ದಿದೆ. ಎಂಕ್ಯೂಎಂ-ಪಿ 17 ಕ್ಷೇತ್ರ & ಇತರ ಪಕ್ಷಗಳು 17 ಸೀಟನ್ನ ಗೆದ್ದಿವೆ. ಒಂದು ಕ್ಷೇತ್ರದ ಫಲಿತಾಂಶ ತಡೆಹಿಡಿಯಲಾಗಿದೆ. ಹೀಗಿದ್ದಾಗ ನವಾಜ್ ಷರೀಫ್ ಅವರ ಪಕ್ಷ & ಪಿಪಿಪಿ ನಡುವೆ ಮೈತ್ರಿ ಮಾತುಕತೆ ಕೂಡ ಬಲು ಜೋರಾಗಿದ್ದು. ಈ ಮೂಲಕ ಇಮ್ರಾನ್ ಖಾನ್ ಪಕ್ಷ ಬೆಂಬಲಿಸಿದ್ದ ಅಭ್ಯರ್ಥಿಗಳು ದೊಡ್ಡ ನಿರಾಸೆ ಅನುಭವಿಸಿದ್ದಾರೆ.
ಸರ್ಕಾರ ರಚನೆಯೇ ದೊಡ್ಡ ತಲೆನೋವು
ಮತ್ತೊಂದು ಕಡೆ ಪ್ರಮುಖ ಪಕ್ಷಗಳ ಜೊತೆಗೆ ಸೇರಿ ಮೈತ್ರಿ ಸರ್ಕಾರ ರಚಿಸುವುದನ್ನೂ ಮಾಜಿ ಪ್ರಧಾನಿ ಹಾಗೂ ಪಿಟಿಐ ಅಧ್ಯಕ್ಷ ಇಮ್ರಾನ್ ಖಾನ್ ತಳ್ಳಿಹಾಕಿದ್ದಾರಂತೆ. ಇನ್ನು ಸರ್ಕಾರ ರಚನೆ ಕುರಿತ ಚರ್ಚೆಗೆ ಪ್ರಾಂತ್ಯವಾರು ಸಮಿತಿ ರಚನೆ ಆಗಿದೆ ಎನ್ನಲಾಗುತ್ತಿದ್ದು, ಇಷ್ಟೆಲ್ಲದರ ನಡುವೆ ಪಿಎಂಎಲ್-ಎನ್ & ಪಿಪಿಪಿ, ಎಂಕ್ಯೂಎಂ ಜೊತೆಗೆ ಚರ್ಚೆ ಇಲ್ಲ. ಇತರೆ ಪಕ್ಷಗಳು & ಆಸಕ್ತರ ಜೊತೆ ಚರ್ಚೆಗೆ ಸಿದ್ಧ ಅಂತಿದ್ದಾರಂತೆ ಇಮ್ರಾನ್ ಖಾನ್. ಹೀಗಾಗಿ ಪಾಕಿಸ್ತಾನದಲ್ಲಿ ಹೊಸದಾಗಿ ಸರ್ಕಾರ ರಚನೆಯೇ ದೊಡ್ಡ ತಲೆನೋವಾಗಿದೆ.

ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಅಧ್ಯಕ್ಷ ಬಿಲಾವಲ್ ಭುಟ್ಟೊ ಜರ್ಧಾರಿಗೆ ಪ್ರಧಾನಿ ಪಟ್ಟವು ಸಿಗಲಿ ಎಂದು ಇಷ್ಟು ದಿನ ಪಟ್ಟು ಹಿಡಿಯಲಾಗಿತ್ತು. ಆದರೆ ಇದೀಗ ಸರ್ಕಾರದಲ್ಲಿ ಭಾಗಿಯಾಗದೇ ಪಿಎಂಎಲ್-ನವಾಜ್ ಪಕ್ಷ ಬೆಂಬಲಿಸಲಾಗುವುದು ಅಂತಾ ಹೇಳುತ್ತಿದೆ, ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ. ಹೀಗಾಗಿ ಪಾಕಿಸ್ತಾನದಲ್ಲಿ ಯಾರು ಅಧಿಕಾರ ಹಿಡಿಯುತ್ತಾರೆ? ಅನ್ನೋದು ಇದೀಗ ದೊಡ್ಡ ಯಕ್ಷಪ್ರಶ್ನೆ ಆಗಿ ಉಳಿದಿದೆ. ಇಷ್ಟೆಲ್ಲದರ ನಡುವೆ ಪಾಕಿಸ್ತಾನ ಸೇನೆಯ ಸಪೋರ್ಟ್ ಪಡೆದು, ಪಿಎಂಎಲ್-ನವಾಜ್ ಪಕ್ಷದ ಮುಖ್ಯಸ್ಥ ನವಾಜ್ ಷರೀಫ್ 4ನೇ ಬಾರಿ ಪ್ರಧಾನಿ ಪಟ್ಟ ಪಡೆಯುವುದು ಪಕ್ಕಾ ಎನ್ನಲಾಗುತ್ತಿದೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications